Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವೈವಿಧ್ಯ
  3. ಅಂದಿಗೂ ಇಂದಿಗೂ ಅಜಗಜಾಂತರವಿದೆ: ಮುಕ್ರಿ...

ಅಂದಿಗೂ ಇಂದಿಗೂ ಅಜಗಜಾಂತರವಿದೆ: ಮುಕ್ರಿ ಹಾಜಿ

ಹಜ್ಯಾತ್ರೆ ಅನುಭವ

ಹಜ್ಯಾತ್ರೆ ಅನುಭವಹಜ್ಯಾತ್ರೆ ಅನುಭವ1 Sept 2017 12:33 AM IST
share
ಅಂದಿಗೂ ಇಂದಿಗೂ ಅಜಗಜಾಂತರವಿದೆ: ಮುಕ್ರಿ ಹಾಜಿ

ಹೆಜಮಾಡಿಯ ಕನ್ನಂಗಾರ್ ಜುಮಾ ಮಸೀದಿಯ ಬಳಿಯ ನಿವಾಸಿ 96 ವರ್ಷದ ಹಾಜಿ ಕೆ.ಮೊಯ್ದು (ಮುಕ್ರಿ ಹಾಜಿ) ಎಂಬವರು ಸುಮಾರು 11ಬಾರಿ ಹಜ್ ನಿರ್ವಹಿಸಿದ್ದಾರೆ. 1953ರಲ್ಲಿ ಮೊದಲ ಬಾರಿಗೆ ಹಜ್‌ಗೆ ತೆರಳಿದರು. ಕನ್ನಂಗಾರ್ ಜುಮಾ ಮಸೀದಿಯಲ್ಲಿ ಸುಮಾರು 45ವರ್ಷಗಳ ಕಾಲ ಮದರಸದ ಗುರುಗಳಾಗಿ ಕೆಲಸ ನಿರ್ವಹಿಸಿದ ಮುಕ್ರಿ ಹಾಜಿಯವರ ಅಂದಿನ ಮತ್ತು ಇಂದಿನ ಅನುಭವದ ಮಾತು ಹೀಗಿದೆ. 1953ರಲ್ಲಿ ಪಡುಬಿದ್ರಿಯಿಂದ ಮಂಗಳೂರು ಮೂಲಕ ಚಿಕ್ಕಮಗಳೂರಿನ ಕಡೂರಿಗೆ ಬಸ್ಸಿನಲ್ಲಿ ಸಂಚರಿಸಿ ಅಲ್ಲಿಂದ ಮುಂಬೈಗೆ ತಲುಪುತಿದ್ದೆವು. ಆ ಬಳಿಕ ಅಲ್ಲಿಂದ ಹಡಗಿನಲ್ಲಿ ನೇರ ಜಿದ್ದಾಕ್ಕೆ ತೆರಳುತ್ತಿದ್ದೆವು. ಕೆಲ ವರ್ಷಗಳ ಬಳಿಕ ಮಲ್ಪೆ ಮೂಲಕ ಮುಂಬೈ ತಲುಪಿ ಅಲ್ಲಿಂದ ಜಿದ್ದಾ ಅಥವಾ ಕೆಲವೊಮ್ಮೆ ಕೇರಳದ ಮೂಲಕವೂ ಜಿದ್ದಾಕ್ಕೆ ತೆರಳುತಿದ್ದೆವು. 60ವರ್ಷಗಳ ಹಿಂದಿನ ಹಜ್‌ಗೂ ಈಗಿನ ಹಜ್‌ಗೂ ಅಜಗಜಾಂತರವಿದೆ. ಇಂದಿನ ಹಾಗೆ ಅಂದು ವ್ಯವಸ್ಥೆ ಇರಲಿಲ್ಲ. ವಾಸ್ತವ್ಯ ಪ್ರಯಾಣ ಸೇರಿ ಅಂದು ಒಟ್ಟು 100 ದಿನಗಳು ಆಗುತ್ತಿದ್ದವು. ರಮಝಾನ್ ಮುಗಿದ ಬಳಿಕ ಇಲ್ಲಿಂದ ಮುಂಬೈಗೆ ಹೊರಟು ಅಲ್ಲಿಂದ ಜಿದ್ದಾ ಮೂಲಕ ಮಕ್ಕಾ ತಲುಪುತಿದ್ದೆವು. ಅದರಲ್ಲಿ 15 ದಿನಗಳ ಕಾಲ ಹಡಗಿನಲ್ಲಿ ಸಂಚರಿಸಲು ಸಮಯಬೇಕು. ಆ ಮೇಲೆ ಅಲ್ಲಿ ವಾಸ್ತವ್ಯ. ಹೀಗೆ ಒಟ್ಟು 100 ದಿನಗಳು ಆಗುತಿದ್ದವು. ಆದರೆ ಇಂದು 45ದಿನಗಳು ಸಾಕು. ಒಂದು ದಿನ ತೆರಳಲು, ಒಂದು ದಿನ ಹಿಂದಿರುವುದಕ್ಕೆ ಸಾಕು. ವಾಸ್ತವ್ಯ ಸೇರಿ 45 ದಿನಗಳು ಆಗುತ್ತವೆ.

60ವರ್ಷಗಳ ಹಿಂದೆ ಮಕ್ಕಾದಲ್ಲಿ ವಸತಿ, ಶೌಚಾಲಯದ ಸರಿಯಾದ ವ್ಯವಸ್ಥೆ ಇರಲಿಲ್ಲ. ಮರುಭೂಮಿ, ಬೆಟ್ಟ ಗುಡ್ಡಗಳ ಸಾಲುಗಳೇ ಕಾಣುತ್ತಿದ್ದವು. ಆದರೆ ಇಂದು ಹಾಗಿಲ್ಲ. ಎಲ್ಲಿ ನೋಡಿದರೂ ಬೃಹದಾಕಾರದ ಕಟ್ಟಡಗಳೇ ಕಾಣಸಿಗುತ್ತವೆ. ವ್ಯವಸ್ಥೆ ಸಂಪೂರ್ಣ ಬದಲಾಗಿದೆ. ಬಟ್ಟೆಯ ಟೆಂಟ್‌ನಲ್ಲಿ ಮಿನಾದಲ್ಲಿ ವಾಸ್ತವ್ಯ ಹೂಡುತಿದ್ದೆವು. ಮಿನಾ ದುರಂತದ ಬಳಿಕ ಈಗ ಅಗ್ನಿ ನಿರೋಧಕ ಟೆಂಡ್‌ಗಳನ್ನು ಅಳವಡಿಸಲಾಗಿದೆ. ಕಅಬಾ ಹೊರತುಪಡಿಸಿ ಇಡೀ ಮಕ್ಕಾ ಬದಲಾಗಿದೆ. ಕಅಬಾದ ಮತಾಫ್ ಹಿಂದೆ ಕಲ್ಲು, ಮರಳುಗಳಿಂದ ಆವೃತವಾಗಿತ್ತು. ಸಣ್ಣ ಗಾತ್ರದ ಕಲ್ಲುಗಳ ಮಧ್ಯೆ ಬಟ್ಟೆಗಳನ್ನು ಹಾಸಿ ನಮಾಝ್ ಮಾಡಬೇಕಾಗಿತ್ತು. ಆದರೆ ಇಂದು ನೆಲಹಾಸಿಗೆ ಮಾರ್ಬಲ್‌ಗಳನ್ನು ಅಳವಡಿಸಲಾಗಿದೆ.

share
ಹಜ್ಯಾತ್ರೆ ಅನುಭವ
ಹಜ್ಯಾತ್ರೆ ಅನುಭವ
Next Story
X