Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ದಸರಾ ವಿಶೇಷ
  3. ಮೈಸೂರು ದಸರಾ: ಜಂಬೂಸವಾರಿಯಲ್ಲಿ ಜನಮನ...

ಮೈಸೂರು ದಸರಾ: ಜಂಬೂಸವಾರಿಯಲ್ಲಿ ಜನಮನ ಗೆದ್ದ ಕಲಾತಂಡಗಳು

ಕಣ್ಣಿಗೆ ಹಬ್ಬವಾದ ಜಾನಪದ ಕಲಾ ಪ್ರದರ್ಶನ

ವಾರ್ತಾಭಾರತಿವಾರ್ತಾಭಾರತಿ30 Sept 2017 8:39 PM IST
share
ಮೈಸೂರು ದಸರಾ: ಜಂಬೂಸವಾರಿಯಲ್ಲಿ ಜನಮನ ಗೆದ್ದ ಕಲಾತಂಡಗಳು

ಮೈಸೂರು,ಸೆ.30: ನಾಡಹಬ್ಬ ದಸರಾ ಮಹೋತ್ಸವದ ಜಂಬೂಸವಾರಿ ಮೆರವಣಿಗೆಯಲ್ಲಿ ಜಾನಪದ ಕಲಾತಂಡಗಳ ಐಸಿರಿಯ ಸೊಬಗು ಅಪಾರ ಜನಸ್ತೋಮದಲ್ಲಿ ಹರ್ಷೋಲ್ಲಾಸ ಮೂಡಿಸಿತು. 

ನಂದೀಧ್ವಜ ಕಂಬದೊಂದಿಗೆ ಚಾಲನೆ ಪಡೆದ ಜಾನಪ ಕಲಾವಿದರು ವಿವಿಧ ತಂಡಗಳಲ್ಲಿ ತಮಟೆ, ನಗಾರಿ, ಡೊಳ್ಳು, ಜಗ್ಗಲಗೆ, ಕಂಸಾಳೆ, ಬುಡಬುಡಿಕೆ... ಹೀಗೆ ವೈವಿಧ್ಯಮಯ ನೃತ್ಯಗಳಿಂದ ಜನಮನಸೂರೆಗೊಂಡರು. 

ಶನಿವಾರ ಅರಮನೆ ಆವರಣದಲ್ಲಿ ಆರಂಭಗೊಂಡ ಜಾನಪದ ಕುಣಿತಗಳು ಗ್ರಾಮೀಣ ಸೊಗಡು, ಕಲಾವಿದರ ಪ್ರತಿಭೆಯನ್ನು ಅನಾವರಣಗೊಳಿಸಿದವು. ಜಂಬೂಸವಾರಿಯಲ್ಲಿ ಸ್ತಬ್ಧಚಿತ್ರಗಳ ನಡುವೆ ಈ ಕಲಾತಂಡಗಳು ಸಿಕ್ಕ ಅವಕಾಶದಲ್ಲೇ ನೋಡುಗರಿಗೆ ಸಂತೋಷ ಉಂಟುಮಾಡುವ ನಿಟ್ಟಿನಲ್ಲಿ ಪ್ರಯತ್ನ ಮಾಡಿದವು.

ನಂದೀಧ್ವಜ ಹೊತ್ತು ಹೊರಟ ಕಲಾತಂಡದ ಹಿಂದೆ ನಡೆದ ವೀರಭದ್ರ ಕುಣಿತ ತಂಡಗಳ ಕಲಾವಿದರ ಅಬ್ಬರ, ಆರ್ಭಟ, ಕೆಂಗಣ್ಣಗಳೊಂದಿಗೆ ಖಡ್ಗ ಝಳಪಿಸುತ್ತಾ ವಾದ್ಯಗಳ ನಾದಕ್ಕೆ ಹೆಜ್ಜೆ ಹಾಕುತ್ತಿದ್ದಂತೆ ಜನರಲ್ಲಿ ಮಡುಗಟ್ಟುತ್ತಿದ್ದ ಆಲಸ್ಯ ಮಾಯವಾಯಿತು. ಕಿರಾಳು ಮಹೇಶ್ ಸೇರಿದಂತೆ ಮೈಸೂರು ಜಿಲ್ಲೆಯ ಕೆಲ ತಂಡಗಳು ಕಲಾವಿದರು ಇದರಲ್ಲಿದ್ದರು.

ಆಕಾಶದತ್ತ ನೋಡಿ ತಮ್ಮದೇ ರೀತಿಯ ಶಬ್ದ ಹೊರಡಿಸುತ್ತಾ ಸಾಗಿ ಕೊಂಬು ಕಹಳೆ ಕೂಡ ಗಮನ ಸೆಳೆಯಿತು. ಹಳದಿ ಬಣ್ಣದ ವಸ್ತ್ರಗಳನ್ನು ಧರಿಸಿ, ತಲೆಗೆ ಪೇಟ ಸುತ್ತಿ ಉಸಿರುಗಟ್ಟಿ ಕೊಂಬು ಕಹಳೆ ಊದುತ್ತಿದ್ದ ಪರಿ ಚೇತೋಹಾರಿಯಾಗಿತ್ತು. ಇದರಲ್ಲಿ ಮಹಿಳೆಯರೂ ಪಾಲ್ಗೊಂಡಿದ್ದು ವಿಶೇಷವಾಗಿತ್ತು.

ಛಾಪು ಮೂಡಿಸಿದ ಜಗ್ಗಲಿಗೆ ಮೇಳ: ಎತ್ತಿನ ಗಾಡಿಯ ಚಕ್ರದ ಆಕಾರದಲ್ಲಿ ವರ್ಣರಂಜಿತವಾಗಿರುವ ಎಮ್ಮೆ ಚರ್ಮದಿಂದ ಸಿದ್ಧಪಡಿಸಿದ ಜಗ್ಗಲಿಗೆ ಪ್ರದರ್ಶನ ಮನಮೋಹಕವಾಗಿತ್ತು. ಬಂಡಿಯನ್ನು ಹೆಗಲ ಮೇಲೆ ಹೊತ್ತು ನುಡಿಸುವುದು, ಒಂದು ಕೈಯಲ್ಲಿ ಅದನ್ನು ಉರುಳಿಸುತ್ತಾ ಇನ್ನೊಂದ ಕೈಯಲ್ಲಿದ್ದ ಕೋಲಿನಿಂದ ಬಾರಿಸುತ್ತಾ ಕಲಾತಂಡ ಕೇಸರಿ ಮತ್ತು ಬಿಳಿ ವಸ್ತ್ರಗಳನ್ನು ಧರಿಸಿ ಶಿಸ್ತಿನಿಂದ ಸಾಗಿದರು.

ತಮಟೆ, ದೊಡ್ಡ ಡ್ರಂಗಳು, ಕೈಯಲ್ಲಿ ಅಲಂಕಾರಿಕವಾಗಿ ಇಳಿಬಿಟ್ಟ ಉದ್ದನೆಯ ಕುಚ್ಚಿನ ಜಾಲರಿಗಳನ್ನು ಹಿಡಿದುಕೊಂಡು ಸಮವಸ್ತ್ರ ತೊಟ್ಟ ಸುಮಾರು 20ರಿಂದ 30 ಮಂದಿ ಝಾಂಜ್ ಪಥಕ್ ಕಲಾವಿದರು ಲಯಕ್ಕೆ ತಕ್ಕಂತೆ ಹಜ್ಜೆ ಹಾಕುತ್ತಾ ಜನರ ಮುಂದೆ ಸಾಗಿದರು. ಅವರು ಪಿರಮಿಡ್ ರಚಿಸಿ ದೊಡ್ಡದಾದ ಕನ್ನಡಧ್ವಜವನ್ನು ಬೀಸಿ ತಮ್ಮ ಛಾಪು ಮೂಡಿಸಿದರು. 

ಕರಾಟೆ ಪಟುಗಳು: ಹತ್ತು ವರ್ಷಗಳ ನಂತರ ಜಂಬೂಸವಾರಿ ಮೆರವಣಿಗೆಯಲ್ಲಿ ಪಾಲ್ಗೊಂಡ ಕರಾಟುಪಟುಗಳ ತಂಡ ತಮ್ಮ ಕಸರತ್ತುಗಳನ್ನು ಪ್ರದರ್ಶಿಸಿದರು. ಆತ್ಮರಕ್ಷಣೆ, ಆರೋಗ್ಯ ವೃದ್ಧಿಗೆ ಈ ಸಮರಕಲೆ ಪೂರಕವಾಗಿದೆ ಎಂಬುದರ ಬಗ್ಗೆ ಜಾಗೃತಿ ಮೂಡಿಸಿದರು.

ಕಂಸಾಳೆ ಜಾನಪದ ನೃತ್ಯ ಪ್ರತಿವರ್ಷ ಮೆರವಣಿಗೆಯಲ್ಲಿ ಪಾಲ್ಗೊಳ್ಳುತ್ತಿದ್ದರೂ ಅದರ ಸೆಳೆತ ಕಡಿಮೆಯಾಗಿಲ್ಲ. ಬೀಸು ಕಂಸಾಳೆ ಜನರು ತಾಳಗಳನ್ನು ಬೀಸುತ್ತಾ ಪಿರಮಿಡ್ಡು ರಚಿಸಿ ವಿವಿಧ ಭಂಗಿಗಳನ್ನು ಪ್ರದರ್ಶಿಸುತ್ತಿದ್ದಂತೆ ಜನಸ್ತೋಮದಿಂದ ಕರತಾಡನದ ಪ್ರತಿಸ್ಪಂದನೆ ದೊರೆಯಿತು. ಸೋಮನ ಕುಣಿತದಲ್ಲಿ ಬೃಹತ್ ಮುಖವಾಡ ಧರಿಸಿ, ಹಿಂದೆ ವರ್ಣಮಯ ವಸ್ತ್ರಗಳನ್ನು ಇಳಿಬಿಟ್ಟು ಕುಣಿದ ಕಲಾವಿದರೂ ಜನರ ಮನ ಗೆದ್ದರು.

ಇವಲ್ಲದೆ, ಬುಡಬುಡಕೆ, ಕಂಗಿಲು ನೃತ್ಯ, ಕೋಲಾಟ, ಚಂಡೆಮೇಳ, ಪೂಜಾ ಕುಣಿತ, ಪಟ ಕುಣಿತ, ಲಂಬಾಣಿ ನೃತ್ಯ, ಸಿದ್ದಿ ಡಮಾಯಿ ನೃತ್ಯ, ಗಾರುಡಿ ಗೊಂಬೆ, ಮರಗಾಲು ಕುಣಿತ, ಕೀಲುಕುದುರೆ ಇತ್ಯಾದಿ ತಂಡಗಳು ನೋಡುಗರ ಮನದಾಳದಲ್ಲಿ ಅಚ್ಚೊತ್ತಿದವು.

ಕೆಲ ತಂಡಗಳ ಗೈರು: ಎಡೆಯೂರು ಸಿದ್ದಲಿಂಗೇಶ್ವರ ಸ್ತಬ್ಧಚಿತ್ರದ ಹಿಂದೆ ಬರಬೇಕಿದ್ದ ಶಿಸ್ತಿನ ಪಡೆ ಸೇವಾದಳದ ತಂಡ, ಧಾರವಾಡ ಜಿಲ್ಲೆ ಸಂತರು ನಂತರ ಕಂಗಿಲು ನೃತ್ಯದ ಜೊತೆ ಆಗಮಿಸಬೇಕಿದ್ದ ಹುಲಿವೇಷ ತಂಡ, ಮಡಿವಾಳ ಮಾಚಿದೇವರ ಹಿಂದಿರಬೇಕಿದ್ದ ಎನ್‍ಸಿಸಿ ತಂಡ ಸೇರಿದಂತೆ ಕೆಲ ಜಾನಪದ ಕಲಾತಂಡಗಳು ಮೆರವಣಿಗೆಯಲ್ಲಿ ಭಾಗವಹಿಸಲಿಲ್ಲ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X