ಲಾರಿ ಚಾಲಕರ ಮಧ್ಯ ಜಗಳ: ಓರ್ವ ಚಾಲಕನ ಕೊಲೆ
ಮೈಸೂರು, ಅ.11: ಲಾರಿ ಡ್ರೈವರ್ಗಳ ನಡುವೆ ನಡೆದ ಜಗಳ ವಿಕೋಪಕ್ಕೆ ತಿರುಗಿ ಓರ್ವ ಚಾಲಕ ಕೊಲೆಯಾಗಿರುವ ಘಟನೆ ನಗರದ ಕೆಆರ್ ಎಸ್ ರಸ್ತೆಯ ಜೆಕೆ ಟೈರ್ಸ್ ಬಳಿ ನಡೆದಿದೆ.
ಗೂಡ್ಸ್ ಲಾರಿ ಚಾಲಕ ಮೋಹನ್(45) ಎಂಬಾತ ಕೊಲೆಯಾಗಿರುವ ವ್ಯಕ್ತಿ ಎಮದು ಗುರುತಿಸಲಾಗಿದೆ.
ಮೋಹನ್ ಅವರು ತಮಿಳುನಾಡು ಮೂಲದವನಾಗಿದ್ದು, ತಮಿಳುನಾಡಿನಿಂದ ನಗರದ ಜೆ.ಕೆ ಟೈರ್ಸ್ ಕಾರ್ಖಾನೆಯಿಂದ ಟೈರ್ಗಳನ್ನು ತುಂಬಿಕೊಂಡು ಹೋಗಲು ತಮಿಳುನಾಡಿಗೆ ಸೇರಿದ ಟ್ರಾನ್ಸ್ ಪೋರ್ಟ್ ಲಾರಿಗಳೊಂದಿಗೆ ಬಂದಿದ್ದ. ರಾತ್ರಿ ಡ್ರೈವರ್ಗಳ ಮಧ್ಯೆ ಲಾರಿ ಸ್ಟ್ಯಾಂಡ್ನಲ್ಲಿ ಜಗಳ ಉಂಟಾಗಿತ್ತು. ಈ ವೇಳೆ ಗಲಾಟೆ ವಿಕೋಪಕ್ಕೆ ತಿರುಗಿ ಚಾಲಕ ಮೋಹನನ್ನು ಕೊಲೆ ಮಾಡಿದ್ದಾರೆ ಎನ್ನಲಾಗಿದೆ.
ಸ್ಥಳಕ್ಕೆ ಮೇಟಗಳ್ಳಿ ಪೊಲೀಸರು ಆಗಮಿಸಿ ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ಕೈಗೊಂಡಿದ್ದಾರೆ.
Next Story