Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವೈವಿಧ್ಯ
  3. 3,600 ಕೋಟಿ ರೂ. ಗೆದ್ದರೂ ಹೆಸರು...

3,600 ಕೋಟಿ ರೂ. ಗೆದ್ದರೂ ಹೆಸರು ಬಹಿರಂಗಪಡಿಸಲು ಒಪ್ಪದ ಮಹಿಳೆ

ಪ್ರಪಂಚೋದ್ಯ

ವಾರ್ತಾಭಾರತಿವಾರ್ತಾಭಾರತಿ8 Feb 2018 12:17 AM IST
share
3,600 ಕೋಟಿ ರೂ. ಗೆದ್ದರೂ ಹೆಸರು ಬಹಿರಂಗಪಡಿಸಲು ಒಪ್ಪದ ಮಹಿಳೆ

ಬ್ರಿಟನ್‌ನ ನ್ಯೂಹ್ಯಾಂಪ್‌ಶೈರ್‌ನ ಮಹಿಳೆಯೊಬರಿಗೆ ಕಳೆದ ತಿಂಗಳು ಬರೋಬ್ಬರಿ 559 ಮಿಲಿಯ ಡಾಲರ್‌ಗೂ ಹೆಚ್ಚು ಮೊತ್ತದ (ಸುಮಾರು 3,600 ಕೋಟಿ ರೂ.) ಲಾಟರಿ ಗೆದ್ದಿದ್ದರು. ತನ್ನ ಬದುಕಿನಲ್ಲಿ ಇನ್ನು ಮುಂದೆ ಭಾರೀ ಬದಲಾವಣೆಯಾಗಲಿದೆಯೆಂಬುದು ಆ ಮಹಿಳೆಗೂ ಅರಿವಾಗಿತ್ತು.
  ಇನ್ನೇನು ನಗದು ಹಣ ವಿಜೇತಳ ಕೈಸೇರಬೇಕು ಎನ್ನುವಾಗ ಒಂದು ವಿಷಯ ಮಾತ್ರ ಆಕೆಗೆ ಇಷ್ಟವಾಗಿರಲಿಲ್ಲ. ಲಾಟರಿಯ ನಿಯಮಾವಳಿಗಳ ಪ್ರಕಾರ, ಆಕೆ ಹೆಸರು ವಿಳಾಸವನ್ನು ಬಹಿರಂಗಪಡಿಸುವುದು ಕಡ್ಡಾಯವಾಗಿತ್ತು. ಆದರೆ ತಾನು ಲಾಟರಿ ಗೆದ್ದಿರುವುದನ್ನು ಬಹಿರಂಗಪಡಿಸುವುದನ್ನು ಒಪ್ಪದ ಆಕೆ, ತನ್ನ ಹೆಸರು, ವಿಳಾಸವನ್ನು ಅಜ್ಞಾತವಾಗಿರಿಸಿಯೇ ತನಗೆ ಲಾಟರಿ ಹಣ ಕೊಡಿಸಬೇಕೆಂದು ಆಕೆ ನ್ಯಾಯಾಲಯದ ಮೆಟ್ಟಿಲೇರಿದ್ದಾರೆ. ನ್ಯಾಯಾಲಯದ ದಾಖಲೆಗಳಲ್ಲಿ ಆಕೆ ತನ್ನನ್ನು ಕೇವಲ ಜೇನ್ ಡೊ ಎಂಬ ಹೆಸರಿನಲ್ಲಿ ಗುರುತಿಸಿಕೊಂಡಿದ್ದಾಳೆ.
‘‘ಆಕೆ ನ್ಯೂಹ್ಯಾಂಪ್‌ಶೈರ್‌ನಲ್ಲಿ ಸುದೀರ್ಘ ಸಮಯದಿಂದ ವಾಸವಾಗಿದ್ದಾಳೆ ಹಾಗೂ ಸಾಮುದಾಯಿಕ ಚಟುವಟಿಕೆಗಳಲ್ಲಿ ತನ್ನನ್ನು ತೊಡಗಿಸಿಕೊಂಡಿದ್ದಾಳೆೆ ಲಾಟರಿ ವಿಜೇತಳ ವಕೀಲರಾದ ಸ್ಟೀವ್‌ಗಾರ್ಡನ್ ದಾಖಲೆಗಳಲ್ಲಿ ತಿಳಿಸಿದ್ದಾಳೆ. ವಿಜೇತಳು ತನ್ನ ಸಾಮಾಜಿಕ ಚಟುವಟಿಕೆಗಳನ್ನು ಮುಂದುವರಿಸಲು ಬಯಸಿದ್ದಾಳೆ ಹಾಗೂ ಸುಮಾರು ಅರ್ಧಶತಕೋಟಿ ಡಾಲರ್‌ಗಳ ವಿಜೇತೆಯೆಂದು ಜನರಿಂದ ಗುರುತಿಸಿಕೊಳ್ಳಲು ಆಕೆ ಬಯಸುವುದಿಲ್ಲ ಮತ್ತು ಎಂದಿನಂತೆ ಶಾಪಿಂಗ್‌ಗೆ ಮುಕ್ತವಾಗಿ ತೆರಳುವ ಸ್ವಾತಂತ್ರವನ್ನು ಉಳಿಸಿಕೊಳ್ಳಲು ಆಕೆ ಇಚ್ಛಿಸಿದ್ದಾಳೆ’’ ಎಂದು ಸ್ಟೀವ್‌ಗಾರ್ಡನ್ ತಿಳಿಸಿದ್ದಾರೆ.
ಆದರೆ ಲಾಟರಿ ಅಧಿಕಾರಿಗಳ ವಾದವೇ ಬೇರೆ. ವಿಜೇತರ ಹೆಸರನ್ನು ಬಹಿರಂಗ ಪಡಿಸುವುದರಿಂದ ತಮ್ಮ ಲಾಟರಿಯ ವಿಶ್ವಾಸಾರ್ಹತೆ ಉಳಿಯುತ್ತದೆ. ಅಷ್ಟೇ ಅಲ್ಲ ವಂಚನೆ ಹಾಗೂ ದುರ್ಬಳಕೆ ನಡೆಯುವುದನ್ನು ತಡೆಯುತ್ತದೆ. ವಿಜೇತರು ಕ್ಯಾಮರಾಗಳ ಮುಂದೆ ಬಹುಮಾನದ ಚೆಕ್ ಹಿಡಿದುಕೊಂಡು ಪೋಸ್ ನೀಡುವು ದರಿಂದ ತಮಗೆ ಒಳ್ಳೆಯ ಪ್ರಚಾರವೂ ದೊರೆತಂತಾಗುತ್ತದೆಯೆಂದು ಅವರ ವಾದವಾಗಿದೆ.
 ಆದರೆ ಮೇಲ್ನೋಟಕ್ಕೆ ಕಾನೂನು ಆಕೆಯ ಪರವಾಗಿರುವಂತೆ ಕಾಣುವುದಿಲ್ಲ. ನ್ಯೂಹ್ಯಾಂಪ್‌ಶೈರ್ ರಾಜ್ಯದ ಲಾಟರಿ ಕಾನೂನಿನ ಪ್ರಕಾರ ವಿಜೇತರ ಹೆಸರು, ಊರು ಹಾಗೂ ಅವರು ಗೆದ್ದ ಬಹುಮಾನದ ಮೊತ್ತವನ್ನು ಬಹಿರಂಗಪಡಿಸುವುದನ್ನು ಕಡ್ಡಾಯಗೊಳಿಸುತ್ತದೆ. ಆದರೆ ಅನಾಮಿಕ ಟ್ರಸ್ಟ್ ಮೂಲಕ ಬಹುಮಾನದ ಹಣವನ್ನು ಪಡೆಯಲು ಅವಕಾಶ ನೀಡುತ್ತದೆ.
ಆದರೆ ವಿಜೇತ ಮಹಿಳೆಯು ಈಗಾಗಲೇ ಲಾಟರಿ ಟಿಕೆಟ್‌ಗೆ ತನ್ನ ಸಹಿಹಾಕಿದ್ದಾರೆ. ಒಂದು ವೇಳೆ ಆಕೆ ತನ್ನ ಹಸ್ತಾಕ್ಷರವನ್ನು ತಿರುಚಲು ಯತ್ನಿಸಿದಲ್ಲಿ ಆ ಟಿಕೆಟ್ ಅಸಿಂಧುಗೊಳ್ಳುತ್ತದೆ.
ಈ ಬಗ್ಗೆ ನ್ಯೂಹ್ಯಾಂಪ್‌ಶೈರ್ ಲಾಟರಿ ಕಾರ್ಯಕಾರಿ ನಿರ್ದೇಶಕ ಚಾರ್ಲಿ ಮ್ಯಾಕ್ಲನ್‌ಟೈರ್ ಹೇಳಿಕೆಯೊಂದನ್ನು ನೀಡಿ, ಆಯೋಗವು ಸರಕಾರದ ಅಟಾರ್ನಿ ಜನರಲ್‌ರನ್ನು ಸಂಪರ್ಕಿಸಿದೆ ಹಾಗೂ ಪವರ್‌ಬಾಲ್ ಲಾಟರಿ ವಿಜೇತಳು, ಇತರರ ಹಾಗೆ ತನ್ನ ಹೆಸರನ್ನು ಬಹಿರಂಗಪಡಿಸುವ ಕಾನೂನನ್ನು ಪಾಲಿಸಲೇಬೇಕಾಗುತ್ತದೆ ಎಂದಿದೆ.


share
ವಾರ್ತಾಭಾರತಿ
ವಾರ್ತಾಭಾರತಿ
Next Story
X