Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವೈವಿಧ್ಯ
  3. ಸ್ರೆಬ್ರೆನಿಕಾ ಹತ್ಯಾಕಾಂಡದ ಬೆಂಕಿಯಲ್ಲಿ...

ಸ್ರೆಬ್ರೆನಿಕಾ ಹತ್ಯಾಕಾಂಡದ ಬೆಂಕಿಯಲ್ಲಿ ಅರಳಿದ ಹೂ ಹತೀಝಾ ಮಹ್ಮದೊವಿಕ್

ಏಂಜೆಲಿನಾ ಜೋಲಿಏಂಜೆಲಿನಾ ಜೋಲಿ25 July 2018 11:57 PM IST
share
ಸ್ರೆಬ್ರೆನಿಕಾ ಹತ್ಯಾಕಾಂಡದ ಬೆಂಕಿಯಲ್ಲಿ ಅರಳಿದ ಹೂ ಹತೀಝಾ ಮಹ್ಮದೊವಿಕ್

ನ್ಯಾಯಕ್ಕಾಗಿ ನಡೆಸಿದ ಹೋರಾಟ, ಸ್ರೆಬ್ರೆನಿಕಾದಲ್ಲಿ ಉಳಿದವರ ಭದ್ರತೆಗಾಗಿ ನಡೆಸಿದ ಹೋರಾಟ ತಾರ್ಕಿಕ ಅಂತ್ಯ ಕಾಣುವ ಮೊದಲೇ ಹತೀಝಾ ಮರೆಯಾಗಿರುವುದು ಬೋಸ್ನಿಯಾದ ಗಾಯಗಳ ಆಳಕ್ಕೆ ಸಾಕ್ಷಿ ಎನ್ನಬಹುದು. ಹಲವು ವರ್ಷಗಳ ಕಾಲ ಅವರು ಹೊತ್ತುಕೊಂಡ ಹೊರೆಯನ್ನು ಇತರರು ಹೊರಲು ಇದೀಗ ಮುಂದಾಗಬೇಕು. ಅವರು ಇನ್ನಿಲ್ಲವಾದರೂ ಅವರ ನಿದರ್ಶನ ಮಾತ್ರ ಆಕೆಯನು್ನ ಅರಿತವರ ಮನಗಳಲ್ಲಿ ಜೀವಂತ.

ಬೋಸ್ನಿಯಾ ಯುದ್ಧದಲ್ಲಿ ಬದುಕುಳಿದು ಸ್ರೆಬ್ರೆನಿಕಾ (ಹತ್ಯಾಕಾಂಡದ ಸಂತ್ರಸ್ತರ) ತಾಯಂದಿರ ಸಂಘದ ನೇತೃತ್ವ ವಹಿಸಿದ್ದ ಹತೀಝಾ ಮಹ್ಮದೊವಿಕ್ ಸರಜೆವೊ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ ಎಂಬ ಸುದ್ದಿ ಇದೀಗ ಬಂದಿದೆ.

ಬೋಸ್ನಿಯಾ ಸಾಮೂಹಿಕ ಹತ್ಯಾಕಾಂಡದ ಸಂತ್ರಸ್ತರನ್ನು ಹೂತ ಸ್ಥಳವಾದ ಸ್ರೆಬ್ರೆನಿಕಾ ಸ್ಮಾರಕ ವೀಕ್ಷಿಸಲು ತೆರಳಿದ ಸಂದರ್ಭದಲ್ಲಿ ನಾನು ಹತೀಝಾ ಅವರನ್ನು ನಾಲ್ಕು ವರ್ಷಗಳ ಹಿಂದೆ ಭೇಟಿಯಾಗಿದ್ದೆ. ಇದು ಯಹೂದಿ ನರಮೇಧದ ಬಳಿಕ ಯುರೋಪಿಯನ್ ಇತಿಹಾಸ ಕಂಡ ಅತಿದೊಡ್ಡ ಹತ್ಯಾಕಾಂಡ. ಸ್ರೆಬ್ರೆನಿಕಾದಲ್ಲಿ ತಬ್ಬಲಿಯಾದ ಮತ್ತು ವಿಧವೆಯರಾದ ತಾಯಂದಿರ ಮಧ್ಯೆ ಕುಳಿತು, ತಾಳ್ಮೆಯಿಂದ ಗೌರವಯುತವಾಗಿ ಹತೀಝಾ ತಮ್ಮ ಕಥೆಯನ್ನು ಹೇಳಿದ್ದು ನನಗೆ ಚೆನ್ನಾಗಿ ನೆನಪಿದೆ.
ಯುದ್ಧಕ್ಕೆ ಮುನ್ನ ಜೀವನದ ಚಿತ್ರಣವನ್ನು ಅವರು ಮನೋಜ್ಞವಾಗಿ ಬಿಂಬಿಸಿದ್ದರು. ಪತಿ ಅಬ್ದುಲ್ಲಾ ಮತ್ತು ಇಬ್ಬರು ಮಕ್ಕಳಾದ ಅಜ್ಮೀರ್ (21) ಮತ್ತು ಅಲ್ಮೀರ್ (18) ಅವರೊಂದಿಗೆ ಸುಖಸಂಸಾರ ನಡೆಸುತ್ತಿದ್ದರು. 1995ರ ಜುಲೈ ತಿಂಗಳ ಕರಾಳ ದಿನಗಳನ್ನು ಅವರು ಬಣ್ಣಿಸಿದರು. ಬಲಾತ್ಕಾರದಿಂದ ಆಕೆಯಿಂದ ಕುಟುಂಬವನ್ನು ಬೇರ್ಪಡಿಸಿ, ಆಕೆಯ ಪತಿ ಹಾಗೂ ಮಕ್ಕಳನ್ನು ಇತರ ಎಂಟು ಸಾವಿರ ಅಮಾಯಕ ಪುರುಷರು ಮತ್ತು ಮಕ್ಕಳ ಜತೆ ಹತ್ಯೆ ಮಾಡಲಾಗಿತ್ತು. ಹತೀಝಾ ಅವರ ತಂದೆ, ಇಬ್ಬರು ಸಹೋದರರು ಮತ್ತು ಅವರ ಕುಟುಂಬದ ಇತರ ಹಲವು ಮಂದಿಯನ್ನೂ ಹತ್ಯೆ ಮಾಡಲಾಗಿತ್ತು.
ಈ ನರಮೇಧ ನಡೆಸಿದವರು ಇನ್ನಷ್ಟು ಕ್ರೌರ್ಯ ಮುಂದುವರಿಸಿ ಸಂತ್ರಸ್ತರ ದೇಹಗಳನ್ನು ಕೂಡಾ ನಾಶಪಡಿಸಿದ್ದರು. 15 ವರ್ಷಗಳವರೆಗೆ ಹತೀಝಾ ತನ್ನ ಕುಟುಂಬದ ಪಳೆಯುಳಿಕೆಗಾಗಿ ಹುಡುಕಾಟ ನಡೆಸಿದ್ದರು. ಹತ್ಯಾಕಾಂಡದ ಸ್ರೆಬ್ರೆನಿಕಾಗೆ ಮೊಟ್ಟಮೊದಲು ವಾಪಸಾದ ಮಹಿಳೆಯರ ಪೈಕಿ ಇವರೂ ಒಬ್ಬರು. ತಬ್ಬಲಿಯಾಗಿ, ಒಬ್ಬಂಟಿಯಾಗಿ, ಬೆದರಿಕೆ ಮತ್ತು ದಾಳಿಯನ್ನು ಎದುರಿಸಿ, ನರಮೇಧ ನಡೆದೇ ಇಲ್ಲ ಎಂದು ಬಿಂಬಿಸುವ ನಿರಂತರ ಪ್ರಯತ್ನದ ವಾತಾವರಣದಲ್ಲಿ ಬದುಕು ಸಾಗಿಸುತ್ತಾ ಬಂದಿದ್ದಾರೆ.

ಅಂತಿಮವಾಗಿ ಪತಿ ಹಾಗೂ ಇಬ್ಬರು ಮಕ್ಕಳ ಕಳೇಬರವನ್ನು ಕೊನೆಗೂ ಪತ್ತೆ ಮಾಡಿದ್ದಾಗಿ ಆಕೆ ಹೇಳಿಕೊಂಡಿದ್ದರು. ಆದರೆ ಅಂತ್ಯಸಂಸ್ಕಾರ ನಡೆಸಲು ಕಿರಿ ಮಗ ಅಲ್ಮೀರ್‌ನ ಕಾಲಿನ ಸಣ್ಣ ಮೂಳೆಗಳು ದೊರಕಿದ್ದವು. ಆ ಕ್ಷಣದ ಈ ಹೃದಯ ವಿದ್ರಾವಕ ನೋವಿನಲ್ಲಿ ದಿನ ಕಳೆಯುವ ಬದಲು, ಆಕೆ ತಾನು ಅದೃಷ್ಟವಂತೆ ಎಂದು ಹೇಳಿಕೊಂಡಿದ್ದರು. ಹಲವು ಮಂದಿ ತಾಯಂದಿರಿಗೆ ಇಂದಿಗೂ ಈ ಸಣ್ಣ ಸಮಾಧಾನವೂ ಸಿಕ್ಕಿಲ್ಲ ಎಂದು ಹತೀಝಾ ಹೇಳಿದ್ದರು. ಹಲವು ವಿಧದಿಂದ ಹತೀಝಾ ಮಹ್ಮದೊವಿಕ್ ನನಗೆ ಬೋಸ್ನಿಯಾ ಯುದ್ಧದಲ್ಲಿ ಬದುಕುಳಿದ ಹಲವು ಮಂದಿ ಬೋಸ್ನಿಯಾ ಮಹಿಳೆಯರನ್ನು ನೆನಪು ಮಾಡಿಕೊಟ್ಟರು. ಗಾಢವಾದ ಮನೋಬಲ ಹಾಗು ಸ್ಥೈರ್ಯವನ್ನು ಕ್ರೋಡೀಕರಿಸಿಕೊಂಡು, ಸಹಿಷ್ಣುತೆಯಿಂದ ಅವಮಾನವನ್ನು ಸಹಿಸಿಕೊಂಡು, ದ್ವೇಷಕ್ಕೆ ಅವಕಾಶವಿಲ್ಲದಂತೆ ಹತೀಝಾ ಬದುಕು ಸಾಗಿಸಿದ ರೀತಿ ಅನನ್ಯ.
ಹತೀಝಾ ಒಂದು ವಿಶಿಷ್ಟ ಉದಾಹರಣೆಯಾಗಿದ್ದರು. 23 ವರ್ಷಗಳವರೆಗೆ ಅವರು ಸತ್ಯ ಮತ್ತು ನ್ಯಾಯಕ್ಕಾಗಿ ಅವಿರತವಾಗಿ ಹೋರಾಡಿದ್ದರು. ಎಂದಿಗೂ ಅವರು ವಿಶೇಷ ಸ್ಥಾನಮಾನವನ್ನು ಆಗ್ರಹಿಸಲಿಲ್ಲ. ಆದರೆ ಸ್ರೆಬ್ರೆನಿಕಾದ ಎಲ್ಲ ತಾಯಂದಿರ ಪರವಾಗಿ ಅವರು ದನಿ ಎತ್ತಿದರು. ಸಂತ್ರಸ್ತರ ಮಧ್ಯೆ ಎಂದೂ ಭೇದ ಭಾವ ಎಣಿಸಲಿಲ್ಲ. ಬದಲಾಗಿ ಎಲ್ಲರೂ ಸಮಾನ ಗೌರವ ಮತ್ತು ಘನತೆಗೆ ಅರ್ಹರು ಎಂದೇ ಪರಿಗಣಿಸಿದ್ದರು. ಅವರ ಆರೋಗ್ಯ ಹದಗೆಟ್ಟರೂ, ಸಿರಿಯಾದಲ್ಲಿರುವ ನಿರಾಶ್ರಿತರಿಗೆ ಆಹಾರ ಮತ್ತು ಔಷಧಿ ಒದಗಿಸಲು ಪರಿಹಾರ ಕಾರ್ಯವನ್ನು ಸಂಘಟಿಸಿದ್ದರು. ಎಲ್ಲ ಒತ್ತಡಗಳನ್ನು ಎದುರಿಸಿ 65ನೇ ವಯಸ್ಸಿನಲ್ಲೇ ಅವರು ಕೊನೆಯುಸಿರೆಳೆದರು. ನಿಸ್ಸಂದೇಹವಾಗಿ ಅವರ ಸಾವು ನನಗೆ ಮತ್ತು ಅವರ ಸಂಪರ್ಕದಲ್ಲಿದ್ದ ಎಲ್ಲರಿಗೆ ಅಪಾರ ನೋವು ತಂದಿದೆ.


ನ್ಯಾಯಕ್ಕಾಗಿ ನಡೆಸಿದ ಹೋರಾಟ, ಸ್ರೆಬ್ರೆನಿಕಾದಲ್ಲಿ ಉಳಿದವರ ಭದ್ರತೆಗಾಗಿ ನಡೆಸಿದ ಹೋರಾಟ ತಾರ್ಕಿಕ ಅಂತ್ಯ ಕಾಣುವ ಮೊದಲೇ ಹತೀಝಾ ಮರೆಯಾಗಿರುವುದು ಬೋಸ್ನಿಯಾದ ಗಾಯಗಳ ಆಳಕ್ಕೆ ಸಾಕ್ಷಿ ಎನ್ನಬಹುದು. ಹಲವು ವರ್ಷಗಳ ಕಾಲ ಅವರು ಹೊತ್ತುಕೊಂಡ ಹೊರೆಯನ್ನು ಇತರರು ಹೊರಲು ಇದೀಗ ಮುಂದಾಗಬೇಕು. ಅವರು ಇನ್ನಿಲ್ಲವಾದರೂ ಅವರ ನಿದರ್ಶನ ಮಾತ್ರ ಆಕೆಯನ್ನು ಅರಿತವರ ಮನಗಳಲ್ಲಿ ಜೀವಂತ. ಜತೆಗೆ ನಾವು ಇತರರಿಗೆ ಹೇಳುವ ಕಥೆಗಳಲ್ಲಿ ಅವರು ಸದಾ ಜೀವಂತವಿರುತ್ತಾರೆ ಮತ್ತು ಸ್ರೆಬ್ರೆನಿಕಾದ ನೆನಪುಗಳು ಎಂದೂ ಮಾಸಲಾರವು.
 ಅವರ ಸಾವು ನನ್ನಲ್ಲಿ ಅಪಾರ ಬೇಸರ ಮೂಡಿಸಿದೆ ಮತ್ತು ಬೋಸ್ನಿಯಾ- ಹರ್ಜಗೋವಿನ ಯುದ್ಧದ ಎಲ್ಲ ಸಂತ್ರಸ್ತರ ಪಾಲಿನ ನನ್ನ ದುಃಖವನ್ನು ಹೆಚ್ಚಿಸಿದೆ. ಹತೀಝಾ ಅವರನ್ನು ಕೃತಜ್ಞತೆಯಿಂದ ನೆನೆಯುವವರಲ್ಲಿ ನಾನು ಏಕಾಂಗಿಯಲ್ಲ ಎನ್ನುವ ಖಾತ್ರಿ ನನಗಿದೆ. ಸ್ರೆಬ್ರೆನಿಕಾ ನರಮೇಧದಿಂದ ಅಥವಾ ಯಾವುದೇ ಜನಸಮುದಾಯದ ಮೇಲಿನ ಹಿಂಸಾತ್ಮಕ ದ್ವೇಷದಿಂದ ಕಲಿತುಕೊಳ್ಳುವುದು ಸಾಕಷ್ಟಿದೆ. ಇಂದು ಹತೀಝಾ ಅವರ ಸಾವು ಹಾಗೂ ಇಡೀ ದೇಶ ಅವರಿಗಾಗಿ ಆಚರಿಸುವ ಶೋಕವು ಒಂದು ಏಕಾಂಗಿ ಜೀವಕ್ಕೆ ಇರುವ ಶಕ್ತಿಯನ್ನು ಪ್ರತಿಫಲಿಸುತ್ತದೆ.

ಹತೀಝಾ ಮಹ್ಮದೊವಿಕ್ ಪ್ರಾಮಾಣಿಕ ಬದುಕನ್ನು ಬಾಳಿದ್ದರು. ಅವರು ಎಂದಿಗೂ ಸತ್ಯ ಅಥವಾ ನಿಷ್ಪಕ್ಷಪಾತದ ಪ್ರಜ್ಞೆಗೆ ಯಾವುದೇ ಬೆದರಿಕೆ ಅಥವಾ ಭ್ರಷ್ಟಾಚಾರ ತಗಲಲು ಅವಕಾಶ ನೀಡಲಿಲ್ಲ. ನಾವು ಕೂಡಾ ನಮ್ಮ ಜೀವಿತಾವಧಿಯಲ್ಲಿ ನ್ಯಾಯ ಪಡೆಯಲು ಸಾಧ್ಯವಾಗದಿರಬಹುದು. ಆದರೆ ಅವರ ನಿದರ್ಶನವನ್ನು ನಾವು ಅನುಸರಿಸುವುದಾದರೆ, ನಾವು ತಪ್ಪುಮಾರ್ಗದಲ್ಲಿ ನಡೆಯಲು ಸಾಧ್ಯವಿಲ್ಲ.

(ಖ್ಯಾತ ಹಾಲಿವುಡ್ ನಟಿ , ನಿರ್ದೇಶಕಿ ಏಂಜೆಲಿನಾ ಜೋಲಿ ವಿಶ್ವಸಂಸ್ಥೆಯ ನಿರಾಶ್ರಿತರ ಏಜೆನ್ಸಿಯ ವಿಶೇಷ ರಾಯಭಾರಿ.) 

ಕೃಪೆ : cnn.com

share
ಏಂಜೆಲಿನಾ ಜೋಲಿ
ಏಂಜೆಲಿನಾ ಜೋಲಿ
Next Story
X