Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ವಿಡಂಬನೆ
      • ಪಿಟ್ಕಾಯಣ
      • ಯುದ್ಧ
      • ವಚನ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಭೀಮ ಚಿಂತನೆ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ಅಂಬೇಡ್ಕರ್ ಚಿಂತನೆ
      • ದಿಲ್ಲಿ ದರ್ಬಾರ್
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವೈವಿಧ್ಯ
  3. ಗಂಟೆಗಳಲ್ಲೇ ನಿರ್ಮಾಣಗೊಳ್ಳಲಿದೆ ಚೆಂದದ...

ಗಂಟೆಗಳಲ್ಲೇ ನಿರ್ಮಾಣಗೊಳ್ಳಲಿದೆ ಚೆಂದದ ಮನೆ!

ಎಂ. ಎ. ಸಿರಾಜ್ಎಂ. ಎ. ಸಿರಾಜ್23 Aug 2018 6:42 PM GMT
  • Facebook
  • Twitter
  • Whatsapp
  • link
  • Facebook
  • Twitter
  • Whatsapp
  • link
  • Facebook
  • Twitter
  • Whatsapp
  • link
share
ಗಂಟೆಗಳಲ್ಲೇ ನಿರ್ಮಾಣಗೊಳ್ಳಲಿದೆ ಚೆಂದದ ಮನೆ!

ತುಮಕೂರು ನಗರಾಭಿವೃದ್ಧಿ ಪ್ರಾಧಿಕಾರ (ಟಿಯುಡಿಎ)ವು ಯೋಜನೆಗೆ ಅಂಗೀಕಾರ ನೀಡಿದ್ದು, ಮನೆಗಳು ನೆಲಮಹಡಿ ಮತ್ತು ಮೂರು ಮಹಡಿಗಳ ಕಟ್ಟಡಗಳಲ್ಲಿ ಇರುತ್ತವೆ. ವಾಹನಗಳ ಪಾರ್ಕಿಂಗ್ ಏರಿಯಾ, ಮಕ್ಕಳ ಆಟದ ಸ್ಥಳ ಮತ್ತು ಪ್ರತಿ ಎರಡು ಬ್ಲಾಕ್‌ಗಳಿಗೆ ಕಾಮನ್ ಲಿಫ್ಟ್‌ಗಳಿರುತ್ತವೆ. ಆಗಸ್ಟ್ 3ರಂದು ಗೃಹನಿರ್ಮಾಣ ಕಂಪೆನಿಯು ಪತ್ರಕರ್ತರ ಸಮ್ಮುಖದಲ್ಲಿ ಗೃಹ ನಿವೇಶನದಲ್ಲಿ ಒಂದು ಗಂಟೆಯೊಳಗಾಗಿ ಫ್ಲಾಟ್ ನಿರ್ಮಾಣದ ಒಂದು ನೇರ ಪ್ರದರ್ಶನ (ಡೆಮೊ) ನೀಡಿದೆ.

ತುಮಕೂರು ನಗರದ ಹೊರವಲಯದಲ್ಲಿ ಪ್ರಧಾನಮಂತ್ರಿ ಆವಾಸ್ ಯೋಜನೆ (ಪಿಎಂಎವೈ) ಅಡಿಯಲ್ಲಿ ಪೂರ್ವ ನಿರ್ಮಿತ ತಂತ್ರಜ್ಞಾನದ ಅನ್ವಯ ಕೈಗೆಟಕುವ ಬೆಲೆಗೆ ಮೊತ್ತಮೊದಲ ಮನೆಗಳ ಕಾಲನಿ ಸಿದ್ಧಗೊಳ್ಳುತ್ತಿದೆ. 268 ಮನೆಗಳಿರುವ ‘‘ಸ್ವರ್ಣಗೃಹ’’ ಎಂದು ನಾಮಕರಣ ಮಾಡಲಾಗಿರುವ ಕಾಲನಿಯಲ್ಲಿ, ಅಣ್ಣೇನಹಳ್ಳಿಯಲ್ಲಿ ‘1 ಬಿಎಚ್‌ಕೆ’ ನಿವಾಸ, ದಿನಕ್ಕೆರಡರಂತೆ ನಿರ್ಮಾಣಗೊಳ್ಳುತ್ತದೆ. 1.5ಎಕರೆ ನಿವೇಶನದಲ್ಲಿ ಈಗಾಗಲೇ 10 ಯುನಿಟ್‌ಗಳು ತಲೆಯೆತ್ತಿ ನಿಂತಿವೆ. ಮುಂದಿನ ನಾಲ್ಕು ತಿಂಗಳುಗಳೊಳಗಾಗಿ ಇಡೀ ಕಾಲನಿ ಸಿದ್ಧಗೊಳ್ಳಲಿದೆ. ಫೆಲಿಸಿಟಿ ಅಡೋಬ್ ಎಂಬ ಕಂಪೆನಿ ಕೈಗೆತ್ತಿಕೊಂಡಿರುವ ಈ ಯೋಜನೆಯಲ್ಲಿ ತಂತ್ರಜ್ಞಾನ ಮತ್ತು ಹಣಕಾಸು-ಎರಡು ವಿಷಯಗಳಲ್ಲೂ ನೂತನ ಅಂಶಗಳನ್ನು ಅಳವಡಿಸಿಕೊಳ್ಳಲಾಗಿದೆ.

ಫಲಾನುಭವಿಗಳಿಗೆ ನಿರ್ಮಿಸಲಾಗುತ್ತಿರುವ ಈ ಯೋಜನೆಯಲ್ಲಿ ಹಣಕಾಸು ಪೂರೈಕೆಯ ನಿಟ್ಟಿನಲ್ಲಿ ಕೂಡ ನಾವೀನ್ಯತೆಯನ್ನು ಸಾಧಿಸಲಾಗಿದೆ.

ಅನುಕೂಲದ ಜತೆ ಆಕರ್ಷಕ ನೋಟ
325 ಚದರ ಅಡಿ ವಿಸ್ತೀರ್ಣದ ಪ್ರತಿಯೊಂದು ಮನೆಗೆ ಸುಮಾರು ರೂ.9.95ಲಕ್ಷ ತಗಲುತ್ತದೆ. ಮೊದಲ ಹಂತದ ಪಾವತಿ ಕೇವಲ ಒಂದು ಲಕ್ಷ ರೂಪಾಯಿ. ಪಿಎಂಎವೈ 2.37 ಲಕ್ಷ ರೂ. ಸಬ್ಸಿಡಿ ನೀಡುತ್ತದೆ. ಉಳಿದ ಮೊತ್ತವನ್ನು ಸಾಲವಾಗಿ ಬ್ಯಾಂಕ್‌ಗಳು ನೀಡುತ್ತವೆ. ತಿಂಗಳೊಂದರ 2,500ರಿಂದ 6,000 ರೂಪಾಯಿವರೆಗಿನ ಮಾಸಿಕ ಕಂತುಗಳಲ್ಲಿ ಬ್ಯಾಂಕ್ ಸಾಲವನ್ನು 15ರಿಂದ 20 ವರ್ಷಗಳ ಅವಧಿಯಲ್ಲಿ ತೀರಿಸಬೇಕಾಗುತ್ತದೆ. ಪ್ರತಿ ಮನೆಗೆ ಕಾಂಪೌಂಡ್ ಗೋಡೆ, ನೀರು, ವಿದ್ಯುತ್, ತ್ಯಾಜ್ಯನೀರು ವಿಲೆವಾರಿಗೆ ಎಸ್‌ಟಿಪಿ ಮತ್ತು ಸುತ್ತಮುತ್ತಣ ಪ್ರದೇಶದಲ್ಲಿ ಹಸಿರು ಪರಿಸರ - ಎಲ್ಲವೂ ಕಾಲನಿಯ ನಿರ್ಮಾಣದಲ್ಲಿ ಅಡಕವಾಗಿದೆ. ಆಧುನಿಕ ಸ್ಯಾನಿಟರಿ ಸಾಮಗ್ರಿಗಳು ಹಾಗೂ ವಿಟ್ರಿಫೈಡ್ ಟೈಲ್‌ಗಳನ್ನು ಹೊದಿಸಿದ ನೆಲ-ಇವುಗಳೆಲ್ಲ ಮನೆಗಳಿಗೆ ಪಾಶ್ ನೋಟವನ್ನು ನೀಡುತ್ತವೆ.
ತುಮಕೂರು ನಗರಾಭಿವೃದ್ಧಿ ಪ್ರಾಧಿಕಾರ (ಟಿಯುಡಿಎ)ವು ಯೋಜನೆಗೆ ಅಂಗೀಕಾರ ನೀಡಿದ್ದು, ಮನೆಗಳು ನೆಲಮಹಡಿ ಮತ್ತು ಮೂರು ಮಹಡಿಗಳ ಕಟ್ಟಡಗಳಲ್ಲಿ ಇರುತ್ತವೆ. ವಾಹನಗಳ ಪಾರ್ಕಿಂಗ್ ಏರಿಯಾ, ಮಕ್ಕಳ ಆಟದ ಸ್ಥಳ ಮತ್ತು ಪ್ರತಿ ಎರಡು ಬ್ಲಾಕ್‌ಗಳಿಗೆ ಕಾಮನ್ ಲಿಫ್ಟ್‌ಗಳಿರುತ್ತವೆ.
ಆಗಸ್ಟ್ 3ರಂದು ಗೃಹನಿರ್ಮಾಣ ಕಂಪೆನಿಯು ಪತ್ರಕರ್ತರ ಸಮ್ಮುಖದಲ್ಲಿ ಗೃಹ ನಿವೇಶನದಲ್ಲಿ ಒಂದು ಗಂಟೆಯೊಳಗಾಗಿ ಫ್ಲಾಟ್ ನಿರ್ಮಾಣದ ಒಂದು ನೇರ ಪ್ರದರ್ಶನ (ಡೆಮೊ) ನೀಡಿದೆ.

ಬಾಳ್ವಿಕೆಗೆ ಪ್ರಮಾಣೀಕರಿಸಲಾಗಿದೆ
ಫೆಸಿಲಿಟಿ ಅಡೋಟ್ ಕಂಪೆನಿಯ ಸ್ಥಾಪಕ ಹಾಗೂ ಸಿಇಒ ಪ್ರೀನಂದ್ ಪ್ರೇಮಚಂದ್ರನ್‌ರವರ ಪ್ರಕಾರ, ಸಾಂಪ್ರದಾಯಿಕ ಗೃಹ ನಿರ್ಮಾಣಕ್ಕೆ ಹೋಲಿಸಿದಾಗ ಪೂರ್ವ ನಿರ್ಮಿತ (ಪ್ರೀಫ್ಯಾಬ್) ತಂತ್ರಜ್ಞಾನವು ನಿರ್ಮಾಣದ ಅವಧಿಯನ್ನು ಶೇ. 50ರಷ್ಟು ಕಡಿಮೆ ಮಾಡುತ್ತದೆ. ಇದರಿಂದಾಗಿ ಗೃಹ ಸಾಲ ಪಡೆದವರು ಪಾವತಿಸಬೇಕಾದ ಬಡ್ಡಿಯ ಮೊತ್ತ ಕಡಿಮೆಯಾಗುತ್ತದೆ. ಅವರು ಹೇಳುವಂತೆ, ತುಮಕೂರಿನ ಶ್ರೀ ಸಿದ್ದಗಂಗಾ ತಾಂತ್ರಿಕ ವಿದ್ಯಾನಿಲಯದ (ಎಸ್‌ಎಸ್‌ಐಟಿ) ಸಿವಿಲ್ ಇಂಜಿನಿಯರಿಂಗ್ ವಿಭಾಗವು, ‘ರೀಬೌಂಡ್ ಹ್ಯಾಮರ್’ ವಿಧಾನದನ್ವಯ ನಡೆಸಲಾದ ಪರೀಕ್ಷೆಗಳನ್ನಾಧರಿಸಿ ಮನೆಗಳ ದೃಢತೆ ಹಾಗೂ ಬಾಳ್ವಿಕೆಯ ಅವಧಿಯನ್ನು ಪ್ರಮಾಣೀಕರಿಸಿದೆ.

ಕಡಿಮೆ ಬೆಲೆ, ಕಡಿಮೆ ಗುಣಮಟ್ಟವಲ್ಲ
ಯೋಜನೆಯ ತಂತ್ರಜ್ಞಾನ ಸಲಹೆಗಾರ ಹಾಗೂ ಸೈಕಾನ್ ಇನ್‌ಫ್ರಾದ ನಿರ್ದೇಶಕ ಸುನೀಲ್‌ಕುಮಾರ್, ‘‘ಗ್ರಾಹಕರ ಕೈಗೆಟಕುವ ಬೆಲೆಗೆ ದೊರಕುವಂತೆ ಮನೆಗಳನ್ನು ವಿನ್ಯಾಸಗೊಳಿಸಲಾಗಿದೆಯೇ ಹೊರತು, ಅವುಗಳ ಬಾಳ್ವಿಕೆಯೊಂದಿಗೆ ರಾಜಿಮಾಡಿಕೊಂಡಿಲ್ಲ. ದೀರ್ಘಕಾಲದ ಬಾಳ್ವಿಕೆ ಬರುವಂತೆ ಮನೆಗಳನ್ನು ವಿನ್ಯಾಸಗೊಳಿಸಲಾಗಿದೆ’’ ಎನ್ನುತ್ತಾರೆ. ‘‘ಪ್ರೀಫ್ಯಾಬ್ ಚಾಕಟ್ಟುಗಳು ಸಾಂಪ್ರದಾಯಿಕ ಚೌಕಟ್ಟುಗಳಷ್ಟೇ ಬಲಿಷ್ಠವೆಂದು ಸಾಬೀತಾಗಿದೆ. ಈ ವಿನ್ಯಾಸದಲ್ಲಿ ಹನ್ನೆರಡು ಮಹಡಿಗಳತನಕವೂ ಕಟ್ಟಡಗಳನ್ನು ನಿರ್ಮಿಸಬಹುದಾಗಿದೆ. ‘ಕಡಿಮೆ ಬೆಲೆ ಎಂದರೆ ಕಳಪೆ ಮಟ್ಟವಲ್ಲ’ ಎಂಬುದೇ ಯೋಜನೆಯ ಧ್ಯೇಯವಾಕ್ಯ. ಸ್ಲಾಬ್‌ಗಳನ್ನು ಕೂರಿಸಲು ಹೆವಿ ಅರ್ತ್-ಮೂವಿಂಗ್ ಯಂತ್ರಗಳನ್ನು ಹಾಗೂ ಲಿಪ್ಟ್‌ಗಳನ್ನು ಬಳಸಬೇಕಾಗುವುದರಿಂದ, ಬೃಹತ್ ಪ್ರಮಾಣದಲ್ಲಿ ಗ್ರೂಪ್ ಹೌಸಿಂಗ್ ಯೋಜನೆಯನ್ನು ಕೈಗೊಂಡಲ್ಲಿ ಮಾತ್ರ ಪ್ರೀ ಫ್ಯಾಬ್ ಚಾಕಟ್ಟುಗಳ ನಿರ್ಮಾಣ ಕೈಗೆಟುಕುವ ಬೆಲೆಯಲ್ಲಿ ದೊರಕುವುದು ಸಾಧ್ಯವಾಗುತ್ತದೆ.’’ ಎನ್ನುತ್ತಾರೆ ಸುನೀಲ್ ಕುಮಾರ್.
ಸುಲಭ ಕಂತುಗಳು:
ತುಮಕೂರು ನಗರದ ಹೊರವಲಯದ ಅಂತರ್ಸನ ಹಳ್ಳಿಯಲ್ಲಿರುವ ಆಟೋ ಬಿಡಿಭಾಗಗಳ ಉತ್ಪಾದಕ ಕಂಪೆನಿ ಫಿಟ್‌ವೆಲ್‌ನಲ್ಲಿ ಉದ್ಯೋಗಿಯಾಗಿರುವ ಜೆ.ಶ್ರೀನಿವಾಸ್ ಮನೆಗಳ ಕಾಲನಿಯಲ್ಲಿ ಒಂದು ಮನೆಯನ್ನು ಕೊಂಡುಕೊಂಡಿದ್ದಾರೆ. ಅವರ ಸಾಲದ ಮಾಸಿಕ ಕಂತುಗಳನ್ನು ಅವರ ಭವಿಷ್ಯ ನಿಧಿಯೊಂದಿಗೆ ಜೋಡಿಸಲಾಗಿದೆ. ಮುಂದಿನ 20 ವರ್ಷಗಳಲ್ಲಿ (240 ಕಂತುಗಳಲ್ಲಿ) ಅವರು ಸಾಲ ಮರುಪಾವತಿ ಮಾಡಬೇಕಾಗುತ್ತಾದರೂ ಅವರು ಆ ಅವಧಿಗಿಂತ ಮೊದಲೇ ಸಾಲವನ್ನು ತೀರಿಸುವ ಸಾಧ್ಯತೆ ಇದೆ.
 ಕಾಲನಿಯ ಪ್ರದೇಶದಲ್ಲಿರುವ 1,480 ನಿವಾಸಿಗಳ ಸಮೀಕ್ಷೆ ನಡೆಸಿ, ಸ್ವಂತ ಮನೆ ಹೊಂದುವ ಆಕಾಂಕ್ಷೆ ಉಳ್ಳವರನ್ನು ಗುರುತಿಸಿದ ಬಳಿಕ ಆ ಸ್ಥಳವನ್ನು ಕಾಲನಿಯ ನಿರ್ಮಾಣಕ್ಕೆ ಆಯ್ಕೆ ಮಾಡಲಾಯಿತು. ಹೆಚ್ಚಿನ ನಿವಾಸಿಗಳು ಉದ್ದಿಮೆಗಳ ರಂಗದಲ್ಲಿ ದುಡಿಯುವವರಾಗಿದ್ದು ಕೆಳ ಆದಾಯ-ಗುಂಪು ಮತ್ತು ಕೆಳ-ಮಧ್ಯ ಆದಾಯ ಗುಂಪಿಗೆ ಸೇರಿದವರೆಂದು ಸಮೀಕ್ಷೆಯಿಂದ ತಿಳಿದು ಬಂತು.
ಪಿಎಂಎವೈ ಯೋಜನೆಯ ಫಲಾನುಭವಿಗಳಾಗಲು ಈ ಒಂದು ವರ್ಗಕ್ಕೆ ಸೇರಿದರೂ ಅರ್ಹರಾಗಿದ್ದಾರೆ. ಯೋಜನೆಗೆ ಐಸಿಐಸಿಐ ಬ್ಯಾಂಕ್ ಹಣಕಾಸು ಪೂರೈಸುತ್ತಿದೆ. ‘‘ಮನೆಗಳನ್ನು ಕೊಂಡುಕೊಳ್ಳುವವರ ಸಾಮಾಜಿಕ ಆರ್ಥಿಕ ಹಿನ್ನೆಲೆಯನ್ನು ಮತ್ತು ಸ್ವರ್ಣ ಗೃಹ ತಂಡದ ಸಾಮಾಜಿಕ ಬದ್ಧತೆ, ಕಾರ್ಯವೈಖರಿ ಹಾಗೂ ಯೋಜನೆಯನ್ನು ಪರಿಗಣಿಸಿ ಬ್ಯಾಂಕ್ ಹಣಕಾಸು ಪೂರೈಸಲು ನಿರ್ಧರಿಸಿತು’’ ಎಂದಿದ್ದಾರೆ ಬ್ಯಾಂಕ್‌ನ ಮಾರಾಟ ವಿಭಾಗದ ಪ್ರಾದೇಶಿಕ ಮುಖ್ಯಸ್ಥ ದೀಪಕ್ ಶೆಟ್ಟಿ.
‘‘ವಸಂತ ನರಸಪುರ ಇಂಡಸ್ಟ್ರಿಯಲ್ ಏರಿಯಾದ ನೌಕರರಿಗಾಗಿ ಇಂತಹದೇ ಒಂದು ಯೋಜನೆಯನ್ನು ಕೈಗೆತ್ತಿಕೊಳ್ಳಲು ತಮ್ಮ ಇಂಡಸ್ಟ್ರೀಸ್ ಅಸೋಸಿಯೇಶನ್ ಯೋಚಿಸುತ್ತಿದೆ’’ ಎಂದಿದ್ದಾರೆ ಅಸೋಸಿಯೇಶನ್‌ನ ಅಧ್ಯಕ್ಷ ಶ್ರೀ ಕೆ.ಎನ್.ಶಿವಕುಮಾರ್.

share
  • Facebook
  • Twitter
  • Whatsapp
  • Linkedin
  • link
  • Facebook
  • Twitter
  • Whatsapp
  • Linkedin
  • link
  • Facebook
  • Twitter
  • Whatsapp
  • Linkedin
  • link
ಎಂ. ಎ. ಸಿರಾಜ್
ಎಂ. ಎ. ಸಿರಾಜ್
Next Story
  • Facebook
  • Twitter
  • Whatsapp
  • link
  • Facebook
  • Twitter
  • Whatsapp
  • link
  • Facebook
  • Twitter
  • Whatsapp
  • link
X