Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವೈವಿಧ್ಯ
  3. ಸಾವು ಮತ್ತು ವಿಷವನ್ನು ಭಟ್ಟಿ...

ಸಾವು ಮತ್ತು ವಿಷವನ್ನು ಭಟ್ಟಿ ಇಳಿಸುತ್ತಿರುವ ಸರಕಾರ

ಸುರಕ್ಷಿತ ಮದ್ಯವನ್ನು ಖಾತರಿ ಮಾಡಲಾಗದ ಸರಕಾರ ಸಂತ್ರಸ್ತರಿಗೆ ಪರಿಹಾರ ನೀಡುವ ಸುಲಭದ ದಾರಿಯನ್ನು ಹುಡುಕಿಕೊಳ್ಳುತ್ತಿದೆ.

ಅನು: ಶಿವಸುಂದರ್ಅನು: ಶಿವಸುಂದರ್18 Feb 2019 12:02 AM IST
share
ಸಾವು ಮತ್ತು ವಿಷವನ್ನು ಭಟ್ಟಿ ಇಳಿಸುತ್ತಿರುವ ಸರಕಾರ

ಉತ್ತರಪ್ರದೇಶದ ಮುಖ್ಯಮಂತ್ರಿ ಯಾವ ರೀತಿ ನಕಲಿ ಸಾರಾಯಿ ದುರಂತದಲ್ಲಿ ಒಂದು ಸಂಚನ್ನು ಕಾಣಬಯಸುತ್ತಾರೋ ಅದೇರೀತಿ ಮದ್ಯಪಾನ ನಿಷೇಧ ಮಾಡಬೇಕೆನ್ನುವವರೂ ಸಹ ವಾಸ್ತವ ಸತ್ಯಗಳಿಗೆ ಬೇಕೆಂತಲೇ ಕುರುಡಾಗಿದ್ದಾರೆ. ವಾಸ್ತವವಾಗಿ ಒಂದು ರಾಜ್ಯ ಸರಕಾರವಂತೂ ಗ್ರಾಹಕರ ಬಗೆಗಿನ ಕಾಳಜಿಯ ನೆಪದಲ್ಲಿ ಪರವಾನಿಗೆ ಪಡೆದ ದೇಸೀ ಸಾರಾಯಿ ಕೂಡಾ ಲಭ್ಯವಾಗುವುದು ಕಷ್ಟವಾಗುವಂತೆ ನೋಡಿಕೊಂಡಿತು.

ಉತ್ತರಪ್ರದೇಶ ಮತ್ತು ಉತ್ತರಾಖಂಡಗಳಲ್ಲಿ ನಕಲಿ ಸಾರಾಯಿ ಕುಡಿದು 116 ಜನ ಸಾವಿಗೀಡಾದ ಪ್ರಕರಣವು ಸಂಪೂರ್ಣ ಪಾನ ನಿಷೇಧ ಮತ್ತು ಸುರಕ್ಷಿತ ಮದ್ಯದ ಎಚ್ಚರಿಕೆಯ ಸೇವನೆಯ ನಡುವಿನ ವಾಗ್ವಾದವನ್ನು ಮತ್ತೊಮ್ಮೆ ಮುನ್ನೆಲೆಗೆ ತಂದಿದೆ. ಅಧಿಕ ಆದಾಯ ಇರುವ ದೇಶಗಳಿಗೆ ಹೋಲಿಸಿದರೆ ಮದ್ಯಸೇವನೆಯ ಅಭ್ಯಾಸಗಳು ಹೆಚ್ಚು ಕಾಯಿಲೆಗಳನ್ನು ಮತ್ತು ಅಪಾಯಗಳನ್ನು ಉಂಟುಮಾಡುತ್ತಿರುವುದು ಬಡ ಮತ್ತು ಮಧ್ಯಮ ಆದಾಯದ ದೇಶಗಳಲ್ಲೇ ಎಂಬುದನ್ನು ಹಲವಾರು ಅಧ್ಯಯನಗಳು ದೃಢಪಡಿಸಿವೆ. ಇದಕ್ಕೆ ಇತರ ಕಾರಣಗಳ ಜೊತೆಗೆ ಜನರು ಸೇವಿಸುತ್ತಿರುವ ಮದ್ಯದ ಗುಣಮಟ್ಟವೂ ಮುಖ್ಯ ಕಾರಣವಾಗಿದೆ. ನಕಲಿ ಸಾರಾಯಿ ಸೇವನೆಯ ಅಪಾಯಗಳಿಗೆ ಗುರಿಯಾಗುವವರು ಅತ್ಯಂತ ಬಡವರು ಮತ್ತು ನಿರ್ಗತಿಕರೇ ಆಗಿರುತ್ತಾರೆ. ಇಂಥ ದುರಂತಗಳಿಗೆ ಮುಂಚೆ ಸಂಭವಿಸುವ ವಿದ್ಯಮಾನಗಳು ಮತ್ತು ಆನಂತರದಲ್ಲಿ ನಡೆಯುವ ಘಟನೆಗಳು ಹೆಚ್ಚೂ ಕಡಿಮೆ ಒಂದೇ ರೀತಿಯಲ್ಲಿ ಇರುತ್ತವೆ. ಸಂತ್ರಸ್ತರಿಗೆ ಒಂದಷ್ಟು ಸಮಾಧಾನಕಾರಿ ಪರಿಹಾರಗಳನ್ನು ನೀಡಿ ವಾತಾವರಣದಲ್ಲಿನ ಆಕ್ರೋಶವನ್ನು ಶಮನ ಮಾಡುವ ಪ್ರಯತ್ನಗಳನ್ನು ಸರಕಾರ ಮಾಡುತ್ತದೆ. ಆದರೆ ಒಂದು ವೇಳೆ ಆರ್ಥಿಕವಾಗಿ ಸ್ಥಿತಿವಂತರಾಗಿರುವ ವರ್ಗಕ್ಕೆ ಸೇರಿದ ಜನ ಕಳಪೆ ಗುಣಮಟ್ಟದ ಮದ್ಯವನ್ನು ಸೇವಿಸಿ ಇದೇ ರೀತಿಯ ಅಪಾಯಕ್ಕೆ ಗುರಿಯಾಗಿದ್ದರೆ ಸರಕಾರದ ಪ್ರತಿಕ್ರಿಯೆ ಇದೇ ರೀತಿ ಇರುತ್ತಿತ್ತೇ?
ಇಂಥ ದುರದೃಷ್ಟಕರ ಘಟನೆಗಳು ಎಷ್ಟು ಸರ್ವೇ ಸಾಮಾನ್ಯವಾಗಿಬಿಟ್ಟಿವೆಯೆಂದರೆ ಸಾವಿನ ಸಂಖ್ಯೆಗಳೂ ಒಂದೆರಡು ದಿನಗಳ ನಂತರ ಸಾರ್ವಜನಿಕರ ಚರ್ಚೆ ಮತ್ತು ಆಸಕ್ತಿಯನ್ನು ಈ ಬಗ್ಗೆ ಹಿಡಿದಿರಿಸಿಕೊಳ್ಳಲಾಗುತ್ತಿಲ್ಲ. ಗೋಳಾಡುತ್ತಿರುವ ಹೆಂಡತಿ-ಮಕ್ಕಳ ಚಿತ್ರಗಳು, ಪರಿಹಾರದ ಘೋಷಣೆಗಳು ಮತ್ತು ಒಂದಿಬ್ಬರ ಬಂಧನಗಳೊಂದಿಗೆ ಇಂಥ ಪ್ರಕರಣಗಳು ಮುಕ್ತಾಯಗೊಳ್ಳುತ್ತವೆ. ಆದರೆ ಈ ಬಾರಿ ಉತ್ತರಪ್ರದೇಶದ ಮುಖ್ಯಮಂತ್ರಿ ಈ ಪ್ರಕರಣಕ್ಕೆ ಹೊಸ ತಿರುವೊಂದನ್ನು ನೀಡಿದ್ದಾರೆ. ಈ ಪ್ರಕರಣದ ಹಿಂದೆ ಇರಬಹುದಾದ ರಾಜಕೀಯ ವಿರೋಧಿಗಳ ಸಂಚಿನ ಬಗ್ಗೆ ತನಿಖೆ ನಡೆಸಲು ಇದರ ಬಗ್ಗೆ ರಚಿಸಲಾಗಿರುವ ವಿಶೇಷ ತನಿಖಾ ತಂಡಕ್ಕೆ ಸರಕಾರವು ಸೂಚಿಸಿದೆ. ತಮ್ಮ ಸಾವಿನಲ್ಲೂ ಬಡವರು ಒಂದು ರಾಜಕೀಯ ವರ್ಗಕ್ಕೆ ಉಪಯುಕ್ತವಾಗಬೇಕೆಂದು ನಿರೀಕ್ಷಿಸಲಾಗುತ್ತದೆ!


ಭಾರತದಲ್ಲಿ ಸಂಪೂರ್ಣ ಮದ್ಯಪಾನ ನಿಷೇಧದ ಪರಿಣಾಮಕಾರಿತ್ವದ ಬಗೆಗಿನ ವಾಗ್ವಾದಗಳಿಗೆ ಸುದೀರ್ಘವಾದ ಇತಿಹಾಸವಿದೆ. ಸಂಪೂರ್ಣ ಮದ್ಯಪಾನ ನಿಷೇಧವು ಪರ್ಯಾಯವಾದ ಮತ್ತು ಅಗ್ಗದ ಕಾನೂನು ಬಾಹಿರ ಮದ್ಯದ ಉತ್ಪಾದನೆ ಮತ್ತು ಮಾರಾಟಕ್ಕೆ ದಾರಿ ಮಾಡಿಕೊಡುತ್ತದೆ ಎಂಬುದು ಎಲ್ಲರಿಗೂ ತಿಳಿದಿರುವ ವಿಷಯ. ಮದ್ಯದ ಗುಣಮಟ್ಟ ಮತ್ತು ನಿಯಂತ್ರಣಗಳಂಥ ಅನಾಕರ್ಷಕ ಕ್ರಮಗಳನ್ನು ತೆಗೆದುಕೊಳ್ಳುವುದಕ್ಕಿಂತ ಮದ್ಯ ನಿಷೇಧದಂಥ ಕ್ರಮಗಳನ್ನು ತೆಗೆದುಕೊಳ್ಳುವುದು ರಾಜಕಾರಣಿಗಳಿಗೆ ಸುಲಭ. ಕುಡುಕರ ಕುಟುಂಬಗಳು ಅನುಭವಿಸುವ ಸಂಕಟಗಳನ್ನು ಮುಂದುಮಾಡಿ ಮದ್ಯ ನಿಷೇಧ ಮಾಡಬೇಕೆಂಬ ನೈತಿಕ ಧೋರಣೆಯನ್ನು ತಳೆಯುವುದು ಸಲೀಸಿನ ದಾರಿ. ಹೀಗಾಗಿ ಪಾನನಿಷೇಧದ ಸಂದರ್ಭದಲ್ಲೂ ಅರ್ಥಿಕವಾಗಿ ಸ್ಥಿತಿವಂತರಾಗಿರುವವರಿಗೆ ಗುಣಮಟ್ಟದ ಬ್ರಾಂಡೆಡ್ ಮದ್ಯಗಳು ದೊರೆಯುತ್ತದಾದರೂ ಬಡವರ್ಗದವರಿಗೆ ಸರಕಾರದಿಂದ ಪರವಾನಿಗೆ ಪಡೆದ ದೇಸೀ ಸಾರಾಯಿಯೂ ಸಹ ದೊರಕದೆ ಅವರು ನಕಲಿ ಮತ್ತು ಕಳ್ಳಭಟ್ಟಿಗಳ ಮೊರೆಹೋಗುವಂತಾಗುತ್ತದೆ. ಕಳೆದ ಹಲವಾರು ವರ್ಷಗಳಿಂದ ಮಾಧ್ಯಮಗಳಲ್ಲಿ ಬರುತ್ತಿರುವ ವರದಿಗಳು ಹೇಳುವಂತೆ ತೆರಿಗೆಗಳಿಂದ ಬಚಾವಾಗುವ ಸಲುವಾಗಿ ಸಾವಿಗೆ ಕಾರಣವಾಗುವ ಸಾರಾಯಿಯನ್ನು ಕಳ್ಳತನದಲ್ಲಿ ತಯಾರಿಸುತ್ತಾರೆ. ಅವನ್ನು ತಯಾರಿಸಲು ಬಳಸುವ ದೊಡ್ಡಮಟ್ಟದ ಮೆಥನಾಲ್, ಬ್ಯಾಟರಿ ಆ್ಯಸಿಡ್, ಚರ್ಮದಿಂದ ತಯಾರಾದ ಹಳೆವಸ್ತುಗಳು, ಇನ್ನಿತ್ಯಾದಿ ಸರಕುಗಳನ್ನು ಗಮನಿಸಿದಾಗ ತಯಾರಿಯಲ್ಲಿ ನೈರ್ಮಲ್ಯವಿಲ್ಲದಿರುವ ಪ್ರಶ್ನೆ ಕೂಡಾ ಇವುಗಳ ಮುಂದೆ ಅಷ್ಟೊಂದು ಮುಖ್ಯವಾದ ಪ್ರಶ್ನೆಯೇ ಅಲ್ಲ ಎನಿಸಿಬಿಡುತ್ತದೆ. ಈ ವಸ್ತುಗಳ ಗುಣಮಟ್ಟ ಅಥವಾ ಲಭ್ಯವಿರುವ ಸ್ಥಿತಿಯನ್ನು ನೋಡಿದರೆ ಇವುಗಳಲ್ಲಿ ಯಾವೊಂದು ಬೇಕಾದರೂ ಮಾರಣಾಂತಿಕವಾಗಿ ಪರಿಣಮಿಸಬಹುದೆನ್ನುವುದು ಸ್ಪಷ್ಟ. ಕಳ್ಳಭಟ್ಟಿಯು ಒಮ್ಮಿಮ್ಮೆ ಪ್ರಾಣವನ್ನು ತೆಗೆಯದಿದ್ದರೂ ಕುರುಡುತನವನ್ನೂ ಒಳಗೊಂಡಂತೆ ಹಲವಾರು ಅಂಗಾಂಗಗಳ ಹಾನಿಗೆ ಕಾರಣವಾಗುತ್ತದೆ.
ಉತ್ತರಪ್ರದೇಶದ ಮುಖ್ಯಮಂತ್ರಿ ಯಾವ ರೀತಿ ನಕಲಿ ಸಾರಾಯಿ ದುರಂತದಲ್ಲಿ ಒಂದು ಸಂಚನ್ನು ಕಾಣಬಯಸುತ್ತಾರೋ ಅದೇರೀತಿ ಮದ್ಯಪಾನ ನಿಷೇಧ ಮಾಡಬೇಕೆನ್ನುವವರೂ ಸಹ ವಾಸ್ತವ ಸತ್ಯಗಳಿಗೆ ಬೇಕೆಂತಲೇ ಕುರುಡಾಗಿದ್ದಾರೆ. ವಾಸ್ತವವಾಗಿ ಒಂದು ರಾಜ್ಯ ಸರಕಾರವಂತೂ ಗ್ರಾಹಕರ ಬಗೆಗಿನ ಕಾಳಜಿಯ ನೆಪದಲ್ಲಿ ಪರವಾನಿಗೆ ಪಡೆದ ದೇಸೀ ಸಾರಾಯಿ ಕೂಡಾ ಲಭ್ಯವಾಗುವುದು ಕಷ್ಟವಾಗುವಂತೆ ನೋಡಿಕೊಂಡಿತು. ಆದರೆ ಅದು ವಾಸ್ತವದಲ್ಲಿ ಭಾರತೀಯ ತಯಾರಿಕೆಯ ವಿದೇಶಿ ಮದ್ಯ (ಇಂಡಿಯನ್ ಮೇಡ್ ಫಾರಿನ್ ಲಿಕ್ಕರ್- ಐಎಂಎಫ್‌ಎಲ್)ದ ಬಳಕೆ ಹೆಚ್ಚಾಗುವಂತೆ ಮಾಡುವ ಕುತಂತ್ರವಾಗಿತ್ತೆಂಬ ಆಪಾದನೆಯನ್ನು ಎದುರಿಸಬೇಕಾಯಿತು. ಈ ಎಲ್ಲಾ ಕ್ರಮಗಳು ಬಡಗ್ರಾಹಕರ ಬಗೆಗಿನ ಕಾಳಜಿಗಿಂತ ಸಿನಿಕತೆಯನ್ನೇ ಪ್ರದರ್ಶಿಸುತ್ತವೆ. ಮದ್ಯವನ್ನು ಸೇವಿಸಕೂಡದೆಂಬುದು ಅವಾಸ್ತವಿಕ ನಿರೀಕ್ಷೆಯಾಗಿದ್ದು ಅದರ ಗುಣಮಟ್ಟವನ್ನು ನಿಯಂತ್ರಿಸುವುದು ಮತ್ತು ನಿಯಂತ್ರಣವನ್ನು ಅನುಷ್ಠಾನಕ್ಕೆ ತರುವುದು ಹೆಚ್ಚು ವಿವೇಕಯುತವಾದ ಕ್ರಮವಾಗಿರುತ್ತದೆ. ರಾಜಕೀಯವಾಗಿ ಪ್ರಯೋಜನಕಾರಿಯಾದ ಮತ್ತು ಆಡಳಿತಾತ್ಮಕವಾಗಿ ಸುಲಭವಾದ ಕ್ರಮಗಳಿಗೆ ಮುಂದಾಗುವ ಬದಲಿಗೆ ಸರಕಾರವು ಹೆಚ್ಚಿನ ಕಷ್ಟದ ಕ್ರಮಗಳನ್ನು ತೆಗೆದುಕೊಳ್ಳಬೇಕು. ಪೊಲೀಸರು ಕಳ್ಳಸಾರಾಯಿ ದಂಧೆಕೋರರ ಜಾಲಗಳನ್ನು ಭೇದಿಸಬೇಕು. ನಿಯಮಗಳ ಕಡ್ಡಾಯ ಪಾಲನೆ ಮತ್ತು ಗುಣಮಟ್ಟ ನಿಯಂತ್ರಣಗಳನ್ನು ಮೊದಲು ಜಾರಿಗೆ ತರಬೇಕು. 2015ರಲ್ಲಿ ಮುಂಬೈನಲ್ಲಿ ಕಳ್ಳಸಾರಾಯಿ ಸೇವನೆಯಿಂದ 106 ಜನರು ಮೃತಪಟ್ಟರೆ, 2011ರಲ್ಲಿ ಪ. ಬಂಗಾಳದ ಸಂಗ್ರಾಮ್ಪುರದಲ್ಲಿ 170 ಜನರು ಮೃತಪಟ್ಟರು. ಪ್ರತಿರಾಜ್ಯಗಳಲ್ಲೂ ಇಂಥ ಹಲವಾರು ಭೀಕರ ಕಥೆಗಳು ಮತ್ತು ಸಂಖ್ಯೆಗಳು ಸಿಗುತ್ತವೆ. ಇನ್ನು ಅಧಿಕೃತವಾಗಿ ದಾಖಲಾಗದ ಮತ್ತು ವರದಿಯಾಗದ ಕಥೆಗಳನ್ನು ಬಿಟ್ಟೇಬಿಡಿ. ಮದ್ಯವು ರಾಜ್ಯಕ್ಕೆ ಸಂಬಂಧಪಟ್ಟ ವಿಷಯವಾದ್ದರಿಂದ ಪ್ರತಿಯೊಂದು ರಾಜ್ಯವೂ ವಿವೇಚನೆಯಿಂದ ಕೂಡಿದ ಕ್ರಮಗಳನ್ನು ಜಾರಿ ಮಾಡಬೇಕು ಮತ್ತು ಅವುಗಳು ಜಾರಿಯಾಗುವುದನ್ನು ಖಾತರಿಪಡಿಸಬೇಕು. ತಮಿಳುನಾಡಿನಲ್ಲಿ ಮದ್ಯ ಮಾರಾಟದ ಮೇಲೆ 2001ರಿಂದ ಸರಕಾರವೇ ಸಂಪೂರ್ಣ ಏಕಸ್ವಾಮ್ಯವನ್ನು ಇಟ್ಟುಕೊಂಡಿದ್ದು 2015ರ ಸಾಲಿನಿಂದ ಒಂದು ಸರಕಾರಿ ಸಂಸ್ಥೆಯ ಮೂಲಕ ತಾನೇ ಅಗ್ಗದ ದರದ ಮದ್ಯ ಮಾರಾಟವನ್ನು ಪ್ರಾರಂಭಿಸಿದೆ. ಬಡವರಿಗೆ ಒಂದು ಸುರಕ್ಷಿತವಾದ ಮದ್ಯ ಸೇವನೆಯ ಆಯ್ಕೆಯನ್ನು ಒದಗಿಸುವಲ್ಲಿ ತಮಿಳುನಾಡು ಸರಕಾರದ ಈ ಮಾದರಿ ಅನುಸರಣಯೋಗ್ಯವಾಗಿದೆ.
ಮದ್ಯಸೇವನೆಯ ಬಗ್ಗೆ ಸಿನಿಕತನದಿಂದ ಕೂಡಿದ ಹಾಗೂ ನೈತಿಕ ಮತ್ತು ಆಷಾಢಭೂತಿತನದ ನಿಲುವುಗಳನ್ನು ತೊರೆದು ಮದ್ಯ ಸೇವಿಸುವವರ ಬಗೆಗಿನ ನೈಜ ಕಾಳಜಿಯ ಕ್ರಮಗಳನ್ನು ಜಾರಿ ಮಾಡದ ಹೊರತು ಸರಕಾರವು ಈ ಸಾಮೂಹಿಕ ಸಾವುಗಳನ್ನು ತಡೆಗಟ್ಟಲು ಸಾಧ್ಯವಿಲ್ಲ.

 ಕೃಪೆ: Economic and Political Weekly

share
ಅನು: ಶಿವಸುಂದರ್
ಅನು: ಶಿವಸುಂದರ್
Next Story
X