Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವೈವಿಧ್ಯ
  3. ಸರಳರೇಖೆಯಲ್ಲಿರದ ಸತ್ಯಗಳು!

ಸರಳರೇಖೆಯಲ್ಲಿರದ ಸತ್ಯಗಳು!

ಮೋದಿಗೆ ಕಂಟಕವಾಗುತ್ತಿರುವ ಗಡ್ಕರಿ

ಗಿರೀಶ್ ತಾಳಿಕಟ್ಟೆಗಿರೀಶ್ ತಾಳಿಕಟ್ಟೆ18 May 2019 12:07 AM IST
share
ಸರಳರೇಖೆಯಲ್ಲಿರದ ಸತ್ಯಗಳು!

ಭಾಗ-2

ಗಡ್ಕರಿಯವರ ಜೊತೆ ಆತ್ಮೀಯತೆ ಇರುವ ಮತ್ತು ಮಾಜಿ ಪತ್ರಕರ್ತರೂ ಆದ ಗಣೇಶ್ ಕಾನಟೆಯವರು ಒಂದು ಸಂದರ್ಭವನ್ನು ವಿವರಿಸುತ್ತಾ, ‘‘ಗಡ್ಕರಿಯವರ ಸಚಿವಾಲಯಕ್ಕೆ ಸಂಬಂಧಿಸಿದ ಮೊದಲ ಮೂರು ಮಹತ್ವಾಕಾಂಕ್ಷೆಯ ಪ್ರೊಜೆಕ್ಟ್ ಗಳಿಗೆ ಹಾಗೂ ಆರಂಭದ ಅವರ ಎರಡು ವಿದೇಶ ಪ್ರವಾಸಗಳಿಗೆ ಮೋದಿಯವರು ಅನುಮತಿಯನ್ನೇ ನೀಡದೆ ಸತಾಯಿಸಿದ್ದರು. ನಾಲ್ಕನೇ ಪ್ರೊಜೆಕ್ಟನ್ನೂ ಪ್ರಧಾನಿ ಕಚೇರಿ ಇದೇ ರೀತಿ ತಿರಸ್ಕರಿಸಿದಾಗ ಗಡ್ಕರಿ ವಿಪರೀತ ಸಿಟ್ಟಿಗೆದ್ದರು ಮಾತ್ರವಲ್ಲದೇ, ಆರೆಸ್ಸೆಸ್ ಮುಖ್ಯಸ್ಥ ಮೋಹನ್ ಭಾಗವತ್‌ರಿಗೆ ಫೋನಾಯಿಸಿ, ‘ನನಗೆ ಇಂತಹ ಪರಿಸ್ಥಿತಿಯಲ್ಲಿ ಕೆಲಸ ಮಾಡಲು ಆಗಲ್ಲ, ಇದಕ್ಕಿಂತ ನಾನು ವಾಪಾಸು ಬಂದು ಸ್ವಯಂ ಸೇವಕನಾಗಿ ಉಳಿದುಬಿಡ್ತೀನಿ’ ಎಂಬ ಅಸಮಾಧಾನ ಹೊರಹಾಕಿದ್ದರು. ಮಾರನೇ ದಿನವೇ ದಿಲ್ಲಿಗೆ ದೌಡಾಯಿಸಿದ ಭಾಗವತ್ ರಾತ್ರೋರಾತ್ರಿ ಗಡ್ಕರಿ, ಮೋದಿ ಮತ್ತು ತಾನು ಮೂವರೇ ಇದ್ದ ಗುಪ್ತ ಸಭೆಯೊಂದನ್ನು ನಡೆಸಿ, ಅಲ್ಲಿ ಮೋದಿಗೆ ‘ಗಡ್ಕರಿಯವರಿಂದ ನಿಮಗೆ ಅಥವಾ ನಿಮ್ಮ ಸರಕಾರಕ್ಕೆ ಮುಕ್ಕಾಗುವಂತಹದ್ದು ಏನಾದರೂ ನಡೆದಿದೆಯೇ?’ ಎಂದು ಪ್ರಶ್ನಿಸಿದ್ದರು. ಅದಕ್ಕೆ ಇಲ್ಲವೆಂದು ಉತ್ತರಿಸಿದ ಮೋದಿಯವರನ್ನು ವಿಶ್ವಾಸಕ್ಕೆ ತೆಗೆದುಕೊಂಡ ಭಾಗವತ್ ‘ಗಡ್ಕರಿಯವರು ಪಕ್ಷದೊಳಗಾಗಲಿ ಅಥವಾ ಹೊರಗಾಗಲಿ ಮೋದಿಯವರನ್ನು ಟೀಕಿಸಬಾರದು, ಅದಕ್ಕೆ ಪ್ರತಿಯಾಗಿ ಗಡ್ಕರಿಯವರ ಸಚಿವಾಲಯದಲ್ಲಿ ಹಸ್ತಕ್ಷೇಪ ಮಾಡದೆ, ಸ್ವತಂತ್ರವಾಗಿ ಕೆಲಸ ಮಾಡಲು ಮೋದಿಯವರು ಅವಕಾಶ ಮಾಡಿಕೊಡಬೇಕು’ ಎಂಬ ಅಂತಿಮ ಒಡಂಬಡಿಕೆಗೆ ಇಬ್ಬರನ್ನೂ ಒಪ್ಪಿಸಿದ್ದರು’’ ಎನ್ನುತ್ತಾರೆ.
2017ರವರೆಗೆ ಈ ತಾತ್ಕಾಲಿಕ ಒಪ್ಪಂದಕ್ಕೆ ಮಣೆ ಹಾಕಿದ್ದ ಮೋದಿಯವರು ಆ ವರ್ಷದ ಅಕ್ಟೋಬರ್‌ನಲ್ಲಿ ಕದನ ವಿರಾಮ ಉಲ್ಲಂಘಿಸುವ ಕೆಲಸ ಮಾಡಿದ್ದರು. 83 ಸಾವಿರ ಕಿಲೋಮೀಟರ್ ಉದ್ದದ ಹೊಸ ರಸ್ತೆಗಳನ್ನು ನಿರ್ಮಿಸುವ 7 ಲಕ್ಷ ಕೋಟಿ ರೂ. ಮೊತ್ತದ ಪ್ರಸ್ತಾವನೆಗೆ ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿತ್ತು. ಅದರ ವಿವರವನ್ನು ನೀಡಲು ಪಾರ್ಲಿಮೆಂಟ್‌ನಿಂದ ಕೂಗಳತೆಯಲ್ಲಿರುವ ನ್ಯಾಶನಲ್ ಮೀಡಿಯಾ ಸೆಂಟರ್‌ನಲ್ಲಿ ಸರಕಾರದಿಂದ ಪತ್ರಿಕಾ ಗೋಷ್ಠಿ ಕರೆಯಲಾಗಿತ್ತು. ಸಾಮಾನ್ಯವಾಗಿ ಇಂತಹ ಗೋಷ್ಠಿಯನ್ನು ರಸ್ತೆ ಸಾರಿಗೆ, ಹೆದ್ದಾರಿ ಮಂತ್ರಿ ನಡೆಸಿಕೊಡಬೇಕು. ಆದರೆ ಅವತ್ತು ಪತ್ರಿಕಾಗೋಷ್ಠಿಯಲ್ಲಿ ಹಾಜರಿದ್ದುದು ಹಣಕಾಸು ಮಂತ್ರಿ ಅರುಣ್‌ಜೇಟ್ಲಿ! ಅಂತಹ ಪ್ರಮುಖ ಪತ್ರಿಕಾಗೋಷ್ಠಿಯಲ್ಲಿ ಗೈರುಹಾಜರಿಯಾದ ಬಗ್ಗೆ ಗಡ್ಕರಿಯವರನ್ನು ಕೇಳಿದಾಗ ‘‘ನಾಳೆ ಇದೇ ವಿಚಾರದ ಕುರಿತು ಇನ್ನೊಂದು ಪತ್ರಿಕಾ ಗೋಷ್ಠಿ ನಡೆಸುವಂತೆ ನನಗೆ ಸೂಚನೆ ಬಂದಿದೆ. ಹಾಗಾಗಿ ಇವತ್ತಿನ ಗೋಷ್ಠಿಯಲ್ಲಿ ನಾನು ಭಾಗವಹಿಸಲಿಲ್ಲ’’ ಎಂದಿದ್ದರು. ಆದರೆ ಪತ್ರಕರ್ತರೊಬ್ಬರು ಹೇಳುವಂತೆ, ‘‘ಬೃಹತ್ ಗಾತ್ರದ ಪ್ರೊಜೆಕ್ಟ್‌ನ ಪ್ರಚಾರ ಲಾಭವನ್ನು ಗಡ್ಕರಿಯವರಿಗೆ ತಪ್ಪಿಸಲಿಕ್ಕಾಗಿಯೇ ಎರಡೆರಡು ಗೋಷ್ಠಿಗಳನ್ನು ಆಯೋಜಿಸಿ, ಮೊದಲನೇ ಗೋಷ್ಠಿಯಿಂದ ಅವರನ್ನು ಹೊರಗಿಡಲಾಗಿತ್ತು. ಮಾರನೇ ದಿನ ಗಡ್ಕರಿ ಗೋಷ್ಠಿ ನಡೆಸಿದರೂ ಹಿಂದಿನ ದಿನ ಜೇಟ್ಲಿ ಹೇಳಿದ್ದ ವಿಷಯಗಳನ್ನೇ ಪ್ರಸ್ತಾಪಿಸಿದ್ದರಿಂದ ಮಾಧ್ಯಮಗಳಲ್ಲಿ ಆ ಗೋಷ್ಠಿಗೆ ಅಷ್ಟು ಮಹತ್ವ ಸಿಗಲಿಲ್ಲ. ಆ ಬೇಸರ ಗಡ್ಕರಿಯವರ ಮುಖದ ಮೇಲೆ ಕಾಣಿಸುತ್ತಿತ್ತು!.’’
ಇದಕ್ಕೂ ಒಂದು ತಿಂಗಳು ಹಿಂದೆ, ಸೆಪ್ಟಂಬರ್ 2017ರಲ್ಲಿ, ಗೃಹಮಂತ್ರಿ ರಾಜನಾಥ ಸಿಂಗ್ ಮನೆಯಲ್ಲಿ ಒಂದು ಸಭೆ ನಡೆದಿತ್ತು. ಗಡ್ಕರಿ, ರಾಜನಾಥ ಸಿಂಗ್, ಸುಶ್ಮಾ ಸ್ವರಾಜ್ ಮತ್ತು ಅರುಣ್ ಜೇಟ್ಲಿ ಭಾಗವಹಿಸಿದ್ದ ಸಭೆ ಅದು. ಗೋವಾದ ರಾಜ್ಯ ರಾಜಕಾರಣಕ್ಕೆ ಮರಳಿದ್ದ ದಿವಂಗತ ಮನೋಹರ್ ಪಾರಿಕ್ಕರ್ ಅವರಿಂದ ತೆರವಾದ ರಕ್ಷಣಾ ಮಂತ್ರಿ ಹುದ್ದೆಗೆ ಯಾರನ್ನು ಆಯ್ಕೆ ಮಾಡಬೇಕು ಎಂಬುದನ್ನು ಚರ್ಚಿಸಲು ಸೇರಿದ್ದ ಸಭೆ ಅದು. ಚರ್ಚಿಸುವುದು ಎನ್ನುವುದಕ್ಕಿಂತ ಮೋದಿಯವರ ಆಸೆಯಂತೆ ನಿತಿನ್ ಗಡ್ಕರಿಯನ್ನು ಆ ಸ್ಥಾನಕ್ಕೆ ಒಪ್ಪಿಸಲು ಸೇರಿದ್ದ ಸಭೆ. ಅದಕ್ಕೂ ಒಂದೆರಡು ದಿನಗಳ ಹಿಂದೆಯೇ ‘ಇಂಡಿಯನ್ ಎಕ್ಸ್‌ಪ್ರೆಸ್’ ಪತ್ರಿಕೆಯು ‘‘ರಕ್ಷಣಾ ಸಚಿವರ ಸ್ಥಾನಕ್ಕೆ ನಿತಿನ್ ಗಡ್ಕರಿಯವರ ಹೆಸರು ಕೇಳಿಬರುತ್ತಿರುವ ವರದಿ ಒಂದು ಕಡೆಯಿಂದ ಬರುತ್ತಿದ್ದರೆ, ಮತ್ತೊಂದು ಕಡೆಯಿಂದ ಗಡ್ಕರಿಯವರು ತಮ್ಮ ರಸ್ತೆ ಸಾರಿಗೆ, ಹೆದ್ದಾರಿ ಮಂತ್ರಿಗಿರಿಯನ್ನು ಬಿಟ್ಟುಕೊಟ್ಟು ಹೊರಹೋಗಲು ಸಿದ್ಧರಿಲ್ಲ ಎಂಬ ಮಾತುಗಳು ಕೇಳಿಬರುತ್ತಿವೆ’’ ಎಂದು ವರದಿ ಮಾಡಿತ್ತು. ಗಡ್ಕರಿಯವರ ಆಪ್ತರು ಹೇಳುವಂತೆ ‘‘ಉಳಿದ ಇನ್ನೆರಡು ವರ್ಷಗಳಲ್ಲಿ ಹೊಸ ಇಲಾಖೆ ಹೊಣೆ ಹೊತ್ತುಕೊಂಡು ಏನನ್ನೂ ಸಾಧಿಸಲಾಗದೆ ಕೂರುವುದಕ್ಕಿಂತ ಕಳೆದ ಮೂರು ವರ್ಷದಿಂದ ನಿಭಾಯಿಸಿರುವ ಸಚಿವಗಿರಿಯನ್ನೇ ಮುಂದುವರಿಸಿ, ಯೋಜನೆಗಳನ್ನೆಲ್ಲ ಪೂರೈಸುವುದೇ ಉತ್ತಮ’’ ಎಂಬುದು ಗಡ್ಕರಿಯವರ ಸಬೂಬಾಗಿತ್ತು, ಅಷ್ಟರಲ್ಲಾಗಲೇ ಸರಕಾರದ ಮಟ್ಟದಲ್ಲಿ ಸುಪ್ತವಾಗಿ ಕೇಳಿಬರುತ್ತಿದ್ದ ರಫೇಲ್ ಹಗರಣವನ್ನು ಮುಂದೊಂದು ದಿನ ತನ್ನ ತಲೆಗೆ ಕಟ್ಟಲು ಮೋದಿ ಈ ಸಂಚು ಹೆಣೆದಿದ್ದಾರೆ ಎನ್ನುವ ಲೆಕ್ಕಾಚಾರದಿಂದಲೇ ಗಡ್ಕರಿಯವರು ರಕ್ಷಣಾ ಮಂತ್ರಿಗಿರಿಯಿಂದ ಹಿಂದೆ ಸರಿದು, ಅವರ್ಯಾರ ಒತ್ತಡಕ್ಕೂ ಮಣಿಯಲಿಲ್ಲ. ಆ ಸಭೆ ಮುಗಿದ ಮಾರನೇ ದಿನವೇ ನಿರ್ಮಲಾ ಸೀತಾರಾಮನ್ ನೂತನ ರಕ್ಷಣಾ ಸಚಿವೆಯೆಂಬ ಘೋಷಣೆ ಹೊರಬಿತ್ತು ಮತ್ತು ಈಗ ರಫೇಲ್ ಹಗರಣದ ಅಪಖ್ಯಾತಿಗೂ ಈಡಾಗುತ್ತಿದ್ದಾರೆ.
7 ಲಕ್ಷ ಕೋಟಿ ರೂ. ಕಾಮಗಾರಿ ಪತ್ರಿಕಾಗೋಷ್ಠಿಯಿಂದಾಚೆಗೆ ಗಡ್ಕರಿ ಕೂಡಾ ರೆಬೆಲ್ ಆಗುತ್ತಾ ಬಂದರು. ಆದರೆ ಸೂಕ್ತ ಸಮಯಕ್ಕೂ ಮುನ್ನ ಬಂಡಾಯದ ರಾಡಿಯೆಬ್ಬಿಸಿ, ತನಗೆ ಅನಾಯಾಸವಾಗಿ ಒದಗಿ ಬರಬಹುದಾದ ‘ಅವಕಾಶ’ಕ್ಕೆ ತಾನೇ ಅಡ್ಡಿಯಾಗುವುದು ಬೇಡವೆಂಬ ‘ಜಾಣ್ಮೆ’ಯನ್ನು ಪ್ರದರ್ಶಿಸುತ್ತಾ, ಸಾರ್ವಜನಿಕವಾಗಿ ‘ಮೋದಿ ನಾಯಕತ್ವ’ವನ್ನು ಪಠಿಸುತ್ತ ಬಂಡಾಯ ಮತ್ತು ಗೊಂದಲವನ್ನು ಚರ್ಚೆಗೆ ಬಿಡುತ್ತಲೇ ಬರುತ್ತಿದ್ದಾರೆ. ಇದೇ ವೇಳೆ, ಇತ್ತ ಆರೆಸ್ಸೆಸ್‌ಗೂ ಮೋದಿ-ಶಾ ಜೋಡಿ ಸಂಘವನ್ನೂ ಓವರ್‌ಟೇಕ್ ಮಾಡಿ ಪ್ರಭಾವ ಹೆಚ್ಚಿಸಿಕೊಳ್ಳುತ್ತಿರುವುದು ನುಂಗಲಾರದ ತುತ್ತಾಗಿತ್ತು. ನಾಗ್ಪುರ ಮೂಲದ ಪತ್ರಕರ್ತರೊಬ್ಬರು ಹೇಳುವಂತೆ ‘‘ಎಪ್ರಿಲ್ 2017ರಲ್ಲಿ ಅಂಬೇಡ್ಕರ್ ಜಯಂತಿ ಆಚರಣೆ ಮತ್ತು ಸರಕಾರದ ಕಾಮಗಾರಿಗಳ ಉದ್ಘಾಟನೆಗೆಂದು ಮೋದಿ ನಾಗ್ಪುರಕ್ಕೆ ಭೇಟಿ ನೀಡಿದ್ದಾಗ, ತಾನು ಉಳಿದುಕೊಂಡಿರುವ ಜಾಗಕ್ಕೇ ಬಂದು ಮಾತಾಡಿಸುವಂತೆ ಮೋಹನ್ ಭಾಗವತ್‌ರಿಗೆ ಮುಂಚಿತವಾಗಿಯೇ ಮೋದಿ ಸುದ್ದಿ ಮುಟ್ಟಿಸಿದ್ದರು. ಸ್ವತಃ ಅಟಲ್‌ಜೀಯವರೂ ಇಷ್ಟು ದಾರ್ಷ್ಟ್ಯದಿಂದ ವರ್ತಿಸಿರಲಿಲ್ಲ. ಅವತ್ತು ಭಾಗವತ್ ಸೇರಿದಂತೆ ಆರೆಸ್ಸೆಸ್‌ನ ಎಲ್ಲಾ ನಾಯಕರು ಬೇರೆಬೇರೆ ಕಾರ್ಯಕ್ರಮಗಳ ನೆಪ ಹೇಳಿ ನಾಗ್ಪುರದಿಂದ ದೂರ ಹೋಗಿದ್ದರು. ಮೋದಿ ಇಷ್ಟರಮಟ್ಟಿಗೆ ಬೆಳೆದು ನಿಂತಿರೋದು ಸಂಘ ಪರಿವಾರಕ್ಕೂ ಅಪಥ್ಯವಾಗಿದೆ.’’
ಮೋದಿ-ಶಾ ಜೋಡಿಯ ಈ ವೇಗಕ್ಕೆ ಬ್ರೇಕ್ ಹಾಕಬೇಕು ಎಂಬ ಕಾರಣಕ್ಕೇ 2018ರ ಮಾರ್ಚ್‌ಗೆ ಮುಕ್ತಾಯವಾಗಬೇಕಿದ್ದ ಸುರೇಶ್ ರಾವ್ ಜೋಶಿಯವರ (ಭೈಯಾಜಿ) ಸರಸಂಘಚಾಲಕ ಅವಧಿಯನ್ನು ಕೊನೇ ಕ್ಷಣದಲ್ಲಿ ಸತತ ನಾಲ್ಕನೇ ಅವಧಿಗೆ ವಿಸ್ತರಿಸಿ ಆರೆಸ್ಸೆಸ್ ನಿರ್ಣಯ ಕೈಗೊಂಡಿತು. ಯಾಕೆಂದರೆ, ಆ ಸ್ಥಾನಕ್ಕೆ ತನ್ನ ಆಪ್ತ ದತ್ತಾತ್ರೇಯ ಹೊಸಬಾಳೆಯವರನ್ನು ನೇಮಕ ಮಾಡಲು ಮೋದಿ ಎಲ್ಲಾ ತಯಾರಿ ಮಾಡಿಕೊಂಡಿದ್ದರು. ಮೋದಿ ಆಪ್ತನ ಕೈಗೆ ಸಂಘದ ಚುಕ್ಕಾಣಿ ಹೋಗುವುದನ್ನು ತಪ್ಪಿಸುವುದಕ್ಕೆಂದೇ ಈ ನಿರ್ಣಯ ಕೈಗೊಳ್ಳಲಾಯಿತು ಎನ್ನಲಾಗುತ್ತಿದೆ. ಅಷ್ಟೇ ಅಲ್ಲ, ದತ್ತಾತ್ರೇಯ ಹೊಸಬಾಳೆಯ ಹಾಲಿ ಹೆಚ್ಚುವರಿ ಸರಸಂಘಚಾಲಕ ಹುದ್ದೆಗೆ ಸಮಾನಾಂತರವಾಗಿ ಮನಮೋಹನ್ ವೈದ್ಯರನ್ನು ನೇಮಕ ಮಾಡಲಾಗಿದೆ. ಹಿಂದೆ ಮೋದಿಯವರು ಗುಜರಾತ್ ಸಿಎಂ ಆಗಿದ್ದಾಗ ಈ ಮನಮೋಹನ್ ವೈದ್ಯರನ್ನು ಬಲವಂತವಾಗಿ ಗುಜರಾತ್ ಆರೆಸ್ಸೆಸ್‌ನಿಂದ ಹೊರಗಟ್ಟಲಾಗಿತ್ತು. ಹಾಗಾಗಿ ಆತ ಮೋದಿಯ ಪರಮ ವಿರೋಧಿಯಂತೆ ವರ್ತಿಸುತ್ತಾರೆ. ಅಂತಹವರಿಗೆ ಈಗ ಹೊಸಬಾಳೆಗೆ ಪರ್ಯಾಯವಾದ ಹುದ್ದೆ ನೀಡಲಾಗಿದೆ.
ಇದೇ ಜನವರಿಯವರೆಗೆ ಗಡ್ಕರಿಯ ಬೆನ್ನಿಗೆ ನಿಂತು ಮೋದಿ-ಶಾ ಜೋಡಿಗೆ ಕೌಂಟರ್ ಕೊಡಿಸುತ್ತಾ ಬಂದ ಸಂಘ ಪರಿವಾರ ಆನಂತರ ತಾನು ಮಾತ್ರವಲ್ಲ, ಗಡ್ಕರಿ ಕೂಡಾ ‘ಮೋದಿ ವಿರೋಧಿ ಪ್ರಯತ್ನ’ಗಳಿಂದ ತಟಸ್ಥವಾಗುಳಿಯಲು ಬಯಸಿತು. ಯಾಕೆಂದರೆ, ಮಿತ್ರಪಕ್ಷಗಳಲ್ಲದೆ ತೃತೀಯ ರಂಗದ ಇತರೆ ಪಕ್ಷಗಳನ್ನೂ ಸೆಳೆದುಕೊಂಡು ಬಿಜೆಪಿ ಸರಕಾರ ರಚಿಸಬೇಕೆಂದರೆ ಏನಿಲ್ಲವೆಂದರೂ ಬಿಜೆಪಿ ತನ್ನ ಬಲದ ಮೇಲೆ 160-180 ಸ್ಥಾನಗಳನ್ನು ಗೆಲ್ಲಲೇಬೇಕು. ಅದರೆ ಪಂಚ ರಾಜ್ಯ ಚುನಾವಣೆಯ ನಂತರ ಬಿಜೆಪಿ ಆತ್ಮವಿಶ್ವಾಸ ಯಾವ ಮಟ್ಟದಲ್ಲಿ ಕುಸಿಯಿತೆಂದರೆ ಅಷ್ಟು ಸೀಟುಗಳನ್ನೂ ಗೆಲ್ಲುವ ವಿಶ್ವಾಸ ಇಲ್ಲದಾಗಿತ್ತು. ಅಂಥಾ ಸಂದರ್ಭದಲ್ಲಿ ಪಕ್ಷದೊಳಗೆ ‘ಮೋದಿ ವಿರೋಧಿ’ ಆಟವನ್ನು ಚುರುಕುಗೊಳಿಸಿದರೆ ಕಾರ್ಯಕರ್ತರು ಮತ್ತಷ್ಟು ಗೊಂದಲಕ್ಕೆ ಈಡಾಗಿ ಅಧಿಕಾರ ಸಂಪೂರ್ಣ ವಿರೋಧ ಪಕ್ಷಗಳ ಕೈವಶ ಆಗಬಹುದೆನ್ನುವ ಆತಂಕದಿಂದ ಕನಿಷ್ಠ 200ರ ಗಡಿ ಮುಟ್ಟಿಸುವವರೆಗಾದರೂ ಮೋದಿಯನ್ನು ಅವಲಂಬಿಸುವ ತೀರ್ಮಾನಕ್ಕೆ ಸಂಘ ಬಂದಿದೆ. ಅಲ್ಲಿಂದಾಚೆಗೇ ‘ಮೋದಿ ಟೀಮ್’ ಪರಿಪೂರ್ಣ ಚುನಾವಣಾ ಅಖಾಡಕ್ಕಿಳಿದದ್ದು; ಪುಲ್ವಾಮ, ಬಾಲಕೋಟ್‌ನಂತಹ ಕಾಕತಾಳೀಯಗಳೆಲ್ಲ ಘಟಿಸಿದ್ದು.
 ಆಧಾರ: ದಿ ಕಾರಾವಾನ್

share
ಗಿರೀಶ್ ತಾಳಿಕಟ್ಟೆ
ಗಿರೀಶ್ ತಾಳಿಕಟ್ಟೆ
Next Story
X