Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವೈವಿಧ್ಯ
  3. ಆರ್ಯವ್ಯಸನ

ಆರ್ಯವ್ಯಸನ

ಯೋಗೇಶ್ ಮಾಸ್ಟರ್ಯೋಗೇಶ್ ಮಾಸ್ಟರ್12 Dec 2021 11:35 AM IST
share
ಆರ್ಯವ್ಯಸನ

ಅವನೊಬ್ಬ ಪುಟ್ಟ ಹುಡುಗ ಇತರ ಮಕ್ಕಳ ಜೊತೆಗೆ ಕ್ರಿಕೆಟ್ ಆಡಲು ಸಿದ್ಧವಾದಾಗ ಹೇಳಿದ. ‘‘ನಾನು ಮೊದಲು ಆಡಬೇಕು. ಇತರ ಮಕ್ಕಳು ‘‘ಯಾಕೇ?’’ ಎಂದು ಕೇಳಿದರು. ‘‘ನಾನೇ ನಿಮ್ಮೆಲ್ಲರಿಗಿಂತ ಹೈಟ್ ಇರೋದು’’ ಎಂದ ಆ ಹುಡುಗ. ಅದಕ್ಕೆ ಇತರ ಮಕ್ಕಳು ಒಪ್ಪಲಿಲ್ಲ. ಅಲ್ಲೇನೋ ಚರ್ಚೆ ಆಗುತ್ತಿತ್ತು. ನಾನು ಮುಂದೆ ಬಂದೆ. ಆ ಹುಡುಗ ಮುಂದೆ ಬೆಳೆದಂತೆ ಇನ್ನೂ ಏನೆಲ್ಲಾ ಕಾರಣಗಳನ್ನು ಒಡ್ಡಿ ತಾನು ಶ್ರೇಷ್ಠ ಎಂದು ನಿರೂಪಿಸಿಕೊಳ್ಳಲು ಯತ್ನಿಸಬಹುದು? ನಾನು ಬೆಳ್ಳಗಿದ್ದೇನೆ, ನೀನು ಕಪ್ಪಗಿದ್ದೀಯ, ನಾನು ಎತ್ತರಕ್ಕಿದ್ದೇನೆ - ನೀನು ಕುಳ್ಳಕ್ಕಿದ್ದೀಯಾ, ನಾನು ಹೆಚ್ಚು ಓದಿದ್ದೇನೆ - ನೀನು ಓದಿಲ್ಲ, ನಾನು ಜಾಣ - ನೀನು ದಡ್ಡ, ನನ್ನ ತಲೆಯಲ್ಲಿ ಒಳ್ಳೆಯ ಕೂದಲಿದೆ - ನೀನು ಮೊಟ್ಟೆ, ಬಾಂಡ್ಲಿ, ನಾನು ಗಂಡಸು - ನೀನು ಹೆಂಗಸು, ನಾನು ಮೇಲ್ಜಾತಿ - ನೀನು ಕೀಳ್ಜಾತಿ, ಒಂದೇ ಜಾತಿಯಾದರೂ ನನ್ನ ಪಂಗಡ ಮೇಲು - ನಿನ್ನ ಪಂಗಡ ಕೀಳು, ನಾನು ಈ ಧರ್ಮ - ನೀನು ಆ ಧರ್ಮ, ನಾನು ಈ ಜನಾಂಗ - ನೀನು ಆ ಜನಾಂಗ, ನಾನು ಸೀನಿಯರ್ - ನೀನು ಜೂನಿಯರ್, ನಾನು ವಯಸ್ಸಿನಲ್ಲಿ ದೊಡ್ಡವನು - ನೀನು ಸಣ್ಣವನು; ಎಂತದ್ದೋ ಒಂದು ಒಬ್ಬನಿಗೆ ತಾನು ಮತ್ತೊಬ್ಬನಿಗಿಂತ ಮಿಗಿಲು ಅಥವಾ ಮೇಲು ಎಂದು ನಿರೂಪಿಸಿಕೊಳ್ಳಲು ಬೇಕಾಗಿದೆ. ವ್ಯಕ್ತಿಗತವಾಗಿಯೂ ಮತ್ತು ಸಾಮಾಜಿಕವಾಗಿಯೂ ಇರುವಂತ ಈ ವ್ಯಸನವೇ ಆರ್ಯವ್ಯಸನ.

ತಲೆ ತುಂಬಾ ಕೂದಲಿರುವವನು ಬೊಕ್ಕ ತಲೆಯವನನ್ನು ನೋಡಿ ನಗುವ, ಲೇವಡಿ ಮಾಡುವ, ಅವನ ಮುಂದೆ ತನ್ನ ಕೂದಲನ್ನು ಸವರಿಕೊಳ್ಳುವ. ಆ ಮೇಲರಿಮೆಯ ಅಮಲಿನಲ್ಲಿ ತೇಲಿದರೆ, ಮತ್ತೊಬ್ಬ ಕೀಳರಿಮೆಯ ಸಂಕೋಚದಲ್ಲಿ ಕುಗ್ಗುವನು. ಈ ಕೀಳರಿಮೆ ಕೂಡಾ ವಾಣಿಜ್ಯದ ಬಂಡವಾಳವಾಗುವುದು. ನಿಮ್ಮ ತ್ವಚೆಯನ್ನು ಇಂತೆಷ್ಟೋ ದಿನಗಳಲ್ಲಿ ಗೌರವವರ್ಣವಾಗಿಸುವುದು ಎಂದು ಮಾರುಕಟ್ಟೆಗೆ ಬರುವ ಫೇಸ್ ಕ್ರೀಮನ್ನು ವರ್ಷಾನುಗಟ್ಟಳೆ ಬಳಸುವ ಕಪ್ಪುತ್ವಚೆಯ ಮನುಷ್ಯ ತನ್ನ ತ್ವಚೆಯ ಬಗ್ಗೆ ಕೀಳರಿಮೆಯನ್ನು ಉಳಿಸಿಕೊಂಡೇ ಇರುತ್ತಾನೆ. ಕ್ರೀಮನ್ನು ಬಳಸುತ್ತಲೇ ಇರುತ್ತಾನೆ. ತ್ವಚೆಯ ಬಣ್ಣ ಬದಲಾಗುವುದರಿಂದ ಆತ್ಮವಿಶ್ವಾಸ ಹೆಚ್ಚುವುದು ಎಂದು ಜಾಹಿರಾತುಗಳಲ್ಲಿ ಚಿತ್ರಿಸುವರು. ಆದರೆ ಇವನ ಆತ್ಮವಿಶ್ವಾಸ ಮಾತ್ರ ಕೀಳರಿಮೆಯ ಭಾರದಲ್ಲಿಯೇ ಕುಗ್ಗುತ್ತಿರುತ್ತದೆ.

ಇದು ಫೇಸ್ ಕ್ರೀಂ ಜಾಹಿರಾತು ಮಾತ್ರವಲ್ಲ. ಭಾರತದಲ್ಲಿ ಜಾತಿಗಳೂ ಕೂಡಾ ತಮ್ಮ ಜಾಹೀರಾತುಗಳನ್ನು ಕೊಡುತ್ತಿರುತ್ತವೆ. ನಾನಾ ಬಗೆಯ ಅತ್ಯಾಕರ್ಷಕ ಆಚರಣೆಗಳು. ಅವುಗಳ ವೈಭವದ ಸಂಮೋಹನಕ್ಕೆ ಒಳಗಾಗುವ ತಗ್ಗಿನ, ಕೆಳಗಿನ ಜಾತಿಗಳೆಂದು ಅನ್ನಿಸಿಕೊಂಡಿರುವವೂ ಕೂಡಾ ಅವರ ಆಚರಣೆಗಳನ್ನು ನಕಲು ಮಾಡುತ್ತಾರೆ. ಆದರೆ ಅವರು ನಕಲು ಮಾಡುತ್ತಾ ತಮ್ಮ ಸ್ವಂತಿಕೆ ಕಳೆದುಕೊಳ್ಳುತ್ತಾರೆ. ಆದರೆ ಆರ್ಯವ್ಯಸನದ ಜಾತಿಯಲ್ಲಿ ಗೌರವಕ್ಕೇನೂ ಪಾತ್ರವಾಗುವುದಿಲ್ಲ. ವೈಶ್ಯರು ಆರ್ಯ ವೈಶ್ಯರಾಗುತ್ತಾರೆ, ಈಡಿಗರು ಆರ್ಯ ಈಡಿಗರಾಗುತ್ತಾರೆ. ಹಾಗಂತ ಆರ್ಯ ಈಡಿಗರೇನೂ ಬ್ರಾಹ್ಮಣರ ಮತ ಸಮ್ಮತ ಮದುವೆಯಾಗುವುದಿರಲಿ, ಮತಸ್ಥ ಮಠಗಳಲ್ಲಿ ಸಹಪಂಕ್ತಿ ಭೋಜನಕ್ಕೂ ಅರ್ಹರೇನಾಗುವುದಿಲ್ಲ.

ವ್ಯಸನ ಎನ್ನುವುದೇ ಹಾಗೆ. ಬಿಡಲಾಗದು. ನಾನು ಇತರರಿಗಿಂತ ಶ್ರೇಷ್ಠ ಎನ್ನುವ ವ್ಯಸನದಂತೆಯೇ ಅವರಂತೆಯೇ ನಾನೂ ಶ್ರೇಷ್ಟನಾಗಬೇಕೆಂದು ಪಡುವ ಪಡಿಪಾಟಲಿನ ಗೀಳನ್ನು ಅನಾರ್ಯವ್ಯಸನವೆಂದು ಧಾರಾಳವಾಗಿ ಗುರುತಿಸಬಹುದು. ಅನಾರ್ಯರು ಇರುವುದೇ ಆರ್ಯರ ಪರಿಚಾರಕರಾಗಿರುವುದಕ್ಕೆ. ಅಂತಹುದರಲ್ಲಿ ಅವರು ಪ್ರಶ್ನಿಸುವುದು, ವಿಮರ್ಶಿಸುವುದು, ಹಕ್ಕು ಸ್ಥಾಪಿಸುವುದು ಇತ್ಯಾದಿಗಳನ್ನು ಮಾಡಲಾದೀತೇ?

ಎರಡನೇ ವಿಶ್ವಯುದ್ಧದ ಪೂರ್ವದಲ್ಲಿ ಜರ್ಮನಿಯಲ್ಲಿ ಜನಾಂಗೀಯ ವಾದದ ತತ್ವಜ್ಞಾನಿಗಳು ಹುಟ್ಟಿಕೊಂಡು ಆರ್ಯರು ಆಳುವುದಕ್ಕಾಗಿಯೇ ಹುಟ್ಟಿರುವವರು, ಯಹೂದಿಗಳಂತಹವರು ನೀಚ ರಕ್ತದವರು ದಾಸರಾಗುವ ಜನಾಂಗದವರು ಎಂದು ನಿರ್ಲಜ್ಜೆಯಿಂದ ಪ್ರತಿಪಾದಿಸಿದರು. ಅದು ಎಂತಹ ಹತ್ಯಾಕಾಂಡಕ್ಕೆ ಕಾರಣವಾಯಿತು ಎಂಬುದು ಇತಿಹಾಸ. ಆದರೆ ಅದನ್ನು ಒಪ್ಪಿದ ಆರ್ಯವ್ಯಸನಿಗಳಾಗಿ ರೂಪುಗೊಂಡ ಮನಸ್ಥಿತಿಗಳ ಬಗ್ಗೆ ಆಲೋಚಿಸಿ. ಈಗ ನಮ್ಮ ದೇಶದಲ್ಲಿಯೂ ಕೂಡಾ ಆರ್ಯವ್ಯಸನ ಮತ್ತು ಅನಾರ್ಯವ್ಯಸನದ ರೋಗ ಅಕಾರಣ ದ್ವೇಷಕ್ಕೆ ಈಡಾಗಿರುವುದಕ್ಕೆ ಗುರುತಿಸಿ ಎಚ್ಚೆತ್ತುಕೊಳ್ಳದಿದ್ದಲ್ಲಿ ಹಿಟ್ಲರ್‌ನ ರಣರತಿಯ ಕೌತುಕವನ್ನು ಇಲ್ಲಿ ನಿರೀಕ್ಷಿಸಬಹುದು.

ಒಬ್ಬ ವ್ಯಕ್ತಿಯಲ್ಲಿ ಮಾನಸಿಕ ಸಮಸ್ಯೆಯಾಗಿ ಇರುವಂತಹ ಯಾವುದೇ ಬಗೆಯ ವ್ಯಸನಗಳು ಮತ್ತು ಉನ್ಮತ್ತತೆಗಳು ಸಮಾಜದಲ್ಲಿಯೂ ಕೂಡಾ ಸಂಕಲಿತವಾಗಿ ಇರುತ್ತವೆ. ಗಾಢಾಂಧಕಾರದ ಇರುಳಲ್ಲಿ ಸೂರ್ಯ ಹುಟ್ಟುವುದಿಲ್ಲ. ನಮ್ಮ ನಮ್ಮ ಒಂದೊಂದೇ ದೀಪಗಳನ್ನು ಹಚ್ಚಿಕೊಳ್ಳಬೇಕು.

share
ಯೋಗೇಶ್ ಮಾಸ್ಟರ್
ಯೋಗೇಶ್ ಮಾಸ್ಟರ್
Next Story
X