Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವೈವಿಧ್ಯ
  3. 2022ರ ಖಗೋಳ ವಿದ್ಯಮಾನಗಳು

2022ರ ಖಗೋಳ ವಿದ್ಯಮಾನಗಳು

ಸೂರ್ಯಾಸ್ತ ಹಾಗೂ ಚಂದ್ರೋದಯಗಳಲ್ಲಿ ಗ್ರಹಣ

ಡಾ. ಎ.ಪಿ. ಭಟ್, ಉಡುಪಿಡಾ. ಎ.ಪಿ. ಭಟ್, ಉಡುಪಿ2 Jan 2022 12:38 PM IST
share
2022ರ ಖಗೋಳ ವಿದ್ಯಮಾನಗಳು

ಈ ವರ್ಷದ ಎರಡು ಗ್ರಹಣಗಳು ಭಾರತೀಯರಿಗೆ. ಅಕ್ಟೋಬರ್ 25ರ ದೀಪಾವಳಿ ಅಮಾವಾಸ್ಯೆಯಂದು ಪಾರ್ಶ್ವ ಸೂರ್ಯಗ್ರಹಣವಾದರೆ, ಮುಂದಿನ ನವೆಂಬರ್ 8ರ ಕಾರ್ತಿಕ ಹುಣ್ಣಿಮೆಯಂದು ಪಾರ್ಶ್ವ ಚಂದ್ರಗ್ರಹಣ. ವಿಶೇಷವೆಂದರೆ, ಸೂರ್ಯ ಗ್ರಹಣದಲ್ಲಿ, ಗ್ರಹಣದ ಸೂರ್ಯ ಗ್ರಹಣವಿರುವತ್ತ ಅಸ್ತಂಗತನಾದರೆ, ಚಂದ್ರಗ್ರಹಣದಲ್ಲಿ ಗ್ರಹಣದ ಚಂದ್ರನ ಚಂದ್ರೋದಯ.

ಈ ವರ್ಷ ನಾಲ್ಕು ಗ್ರಹಣಗಳು ಸಂಭವಿಸಲಿವೆಯಾದರೂ, ಭಾರತಕ್ಕೆ ಎರಡೇ ಗೋಚರ, ಅಕ್ಟೋಬರ್ 25ರ ಪಾರ್ಶ್ವ ಸೂರ್ಯ ಗ್ರಹಣ ಹಾಗೂ ನವೆಂಬರ್ 8ರ ಪಾರ್ಶ್ವ ಚಂದ್ರ ಗ್ರಹಣ. ಅಕ್ಟೋಬರ್ 25ರ ಪಾರ್ಶ್ವ ಸೂರ್ಯ ಗ್ರಹಣದಂದು ಸಂಜೆ 5 ಗಂಟೆ 08 ನಿಮಿಷಕ್ಕೆ ಗ್ರಹಣ ಪ್ರಾರಂಭ. 5 ಗಂಟೆ 50 ನಿಮಿಷಕ್ಕೆ ಅತೀ ಹೆಚ್ಚೆಂದರೆ ಸುಮಾರು 25 ಅಂಶ ಗ್ರಹಣ. 6 ಗಂಟೆ 28 ನಿಮಿಷಕ್ಕೆ ಅಂತ್ಯ. ಆದರೆ 6 ಗಂಟೆ 6 ನಿಮಿಷಕ್ಕೆ ಸೂರ್ಯಾಸ್ತ. ಹಾಗಾಗಿ ಗ್ರಹಣ ಸೂರ್ಯ ಅಸ್ತಂಗತ.

ನವಂಬರ್ 8ರಂದು ಮದ್ಯಾಹ್ನ 3 ಗಂಟೆ 46 ನಿಮಿಷಕ್ಕೆ ಖಗ್ರಾಸ ಪ್ರಾರಂಭವಾಗಿ 5 ಗಂಟೆ 11ನಿಮಿಷಕ್ಕೆ ಖಗ್ರಾಸ ಅಂತ್ಯ. ಆನಂತರ ಪಾರ್ಶ್ವ ಗ್ರಹಣ. ಕರಾವಳಿಯವರಿಗೆ 6 ಗಂಟೆಗೆ ಚಂದ್ರೋದಯ. ಸುಮಾರು 25 ಅಂಶ ಗ್ರಹಣ ಗೊಂಡ ಚಂದ್ರೋದಯ. 6 ಗಂಟೆ 19 ನಿಮಿಷಕ್ಕೆ ಗ್ರಹಣ ಅಂತ್ಯ.

ಇನ್ನೆರಡು ಗ್ರಹಣಗಳು ಈ ವರ್ಷ ಸಂಭವಿಸಲಿವೆಯಾದರೂ ಭಾರತದಲ್ಲಿ ಗೋಚರವಿಲ್ಲ. ಅವು ಎಪ್ರಿಲ್ 30ರ ಪಾರ್ಶ್ವ ಸೂರ್ಯಗ್ರಹಣ ಹಾಗೂ ಮೇ 16ರ ಸಂಪೂರ್ಣ ಚಂದ್ರ ಗ್ರಹಣ.

ಗ್ರಹಗಳು:

ಯಾವಾಗಲೂ ರಾತ್ರಿ ಆಕಾಶದಲ್ಲಿ ಕಾಣ ಸಿಗದ ಬುಧ ಗ್ರಹ ಕೆಲವೇ ದಿನ ಬರೇ 45 ನಿಮಿಷ ಕಾಣ ಸಿಗುವುದು. ಈ ವರ್ಷ ಸಂಜೆಯ ಸೂರ್ಯಾಸ್ತದ ನಂತರ ಪಶ್ಚಿಮ ಆಕಾಶದಲ್ಲಿ ಜನವರಿ 7, ಎಪ್ರಿಲ್ 29, ಆಗಸ್ಟ್ 27, ಡಿಸೆಂಬರ್ 21 ರಂದು ಕಂಡರೆ, ಪೂರ್ವ ಆಕಾಶದಲ್ಲಿ ಬೆಳಗಿನ ಸೂರ್ಯೋದಯಕ್ಕೆ ಮುಂಚೆ ಫೆಬ್ರವರಿ 16, ಜೂನ್ 16 ಅಕ್ಟೋಬರ್ 8, ಕಾಣಲಿದೆ.

ಶುಕ್ರ ಗ್ರಹ ಈ ವರ್ಷ ಸಂಜೆಯ ಆಕಾಶದಲ್ಲಿ ಕಾಣಬೇಕಾದರೆ ಅಕ್ಟೋಬರ್ ಅಂತ್ಯದವರೆಗೆ ಕಾಯಬೇಕು. ಅಲ್ಲಿಯವರೆಗೆ ಬೆಳಗಿನ ಜಾವ ಪೂರ್ವ ಆಕಾಶದಲ್ಲಿ ಮಾತ್ರ ಹೊಳೆಯಲಿದೆ.

ಸುಮಾರು ಎರಡು ವರ್ಷ 50 ದಿನಗಳಿಗೊಮ್ಮೆ ಭೂಮಿಗೆ ಸಮೀಪಿಸುವ ಮಂಗಳ ಗ್ರಹ ಡಿಸೆಂಬರ್ 8 ರಂದು ಬಹಳ ಸುಂದರವಾಗಿ ಕಾಣಲಿದೆ. (Opposition of Mars on dec 8.)

ವರ್ಷಕ್ಕೊಮ್ಮೆ ಒಂದು ತಿಂಗಳು ದೊಡ್ಡದಾಗಿ ಚೆನ್ನಾಗಿ ಕಾಣುವ ಗುರು ಹಾಗೂ ಶನಿಗ್ರಹಗಳು ಈ ವರ್ಷ ಆಗಸ್ಟ್‌ನಲ್ಲಿ ಶನಿ (Saturn opposition onaugust 14)ಹಾಗೂ ಸೆಪ್ಟಂಬರ್‌ನಲ್ಲಿ ಗುರು(Jupiter’s opposition  on September 26)ಇಡೀ ರಾತ್ರಿ ಕಾಣಲಿವೆ.

 ಈ ವರ್ಷದ ಮೂರು ಹುಣ್ಣಿಮೆಗಳು, ಸೂಪರ್ ಮೂನ್‌ಗಳು. ಜೂನ್ 14, ಜುಲೈ 13 ಹಾಗೂ ಆಗಸ್ಟ್ 12. ಈ ಹುಣ್ಣಿಮೆ ಚಂದ್ರ, ನೋಡಲು ಬಲು ಚೆಂದ.

share
ಡಾ. ಎ.ಪಿ. ಭಟ್, ಉಡುಪಿ
ಡಾ. ಎ.ಪಿ. ಭಟ್, ಉಡುಪಿ
Next Story
X