Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವೈವಿಧ್ಯ
  3. ಶೋಷಿತರ ಪರವಾಗಿ ಹಕ್ಕುಗಳನ್ನು ಮಂಡಿಸುವ...

ಶೋಷಿತರ ಪರವಾಗಿ ಹಕ್ಕುಗಳನ್ನು ಮಂಡಿಸುವ ಕವಿತೆಗಳು

ರಮೇಶ ಗಬ್ಬೂರ್ರಮೇಶ ಗಬ್ಬೂರ್4 Jan 2022 1:08 PM IST
share
ಶೋಷಿತರ ಪರವಾಗಿ ಹಕ್ಕುಗಳನ್ನು ಮಂಡಿಸುವ ಕವಿತೆಗಳು

ಕೊಪ್ಪಳದ ಕವಿ ಗವಿಸಿದ್ದ ಎನ್. ಬಳ್ಳಾರಿ ಕಾವ್ಯಪ್ರಶಸ್ತಿ ಗೆಳೆಯ ಬಿದಲೋಟಿ ರಂಗನಾಥ್‌ರವರಿಗೆ ದೊರಕಿದ್ದನ್ನು ಗಮನಿಸಿದ್ದೆ. ‘ದೇವರಿಲ್ಲದ ಸಾಕ್ಷಿಗೆ ರುಜು ಹಾಕಿ’ ಎಂಬ ಆ ಪುಸ್ತಕದ ಶೀರ್ಷಿಕೆ ನನ್ನ ಗಮನ ಸೆಳೆದಿತ್ತು. ಅದನ್ನು ಓದಬೇಕೆಂದುಕೊಳ್ಳುತ್ತಿರುವಾಗಲೇ ಮಿತ್ರ ಬಿದಲೋಟಿ ರಂಗನಾಥ್ ಫೋನಾಯಿಸಿ ಪುಸ್ತಕ ತಲುಪಿಸಿದರು. ಲೋಕದ ವಿದ್ಯಮಾನಗಳಿಗೆ ವೈಚಾರಿಕವಾಗಿ ಮತ್ತು ಭಾವುಕವಾಗಿ ಮಿಡಿಯುವ ಕಾವ್ಯಪ್ರತಿಭೆ ಬಿದಲೋಟಿ ರಂಗನಾಥ. ವರ್ತಮಾನದ ವಿದ್ಯಮಾನಗಳಿಗೆ ತಕ್ಷಣವೇ ಸ್ಪಂದಿಸಿ ಕಾವ್ಯದ ಮೂಲಕ ಪ್ರಶ್ನಿಸುತ್ತಾ ಉತ್ತರಿಸುತ್ತಾ ಸಾಗಿದವರು. ಅವರ ಈ ಸಂಕಲನದೊಳಗಿನ ಭಾವನೆಗಳು ಕಾವ್ಯದ ಉತ್ಪ್ರೇಕ್ಷೆಗೆ ಒಳಗಾಗಿ ದಿಗ್ಗನೆದ್ದು ಬಂದ ಸಂಗತಿಗಳಲ್ಲ. ಬದಲಾಗಿ ಕಾಲದೊಳಗೆ ಕುದ್ದು ಆಕಾಶದ ಅಪಮಾನಗಳನ್ನೆಲ್ಲಾ ಅಂಗೈಯಲ್ಲಿ ತುಂಬಿಕೊಂಡು ನೋವ ಕಂಠದಲ್ಲಿ ಬರೆಯುತ್ತಿರುವವರು. ನಮಗೆಲ್ಲರಿಗೂ ಅರಿವಿನ ದಾರಿ ತೋರಿಸಿದ ಗುರು ಅಂಬೇಡ್ಕರ್ ಮಾರ್ಗವಾಗಿ ಕಾಡುವ ಕವಿತೆಗಳ ಬಿತ್ತಿದವರು.

ಸಂಕಟಗಳನ್ನು ಕವಿತೆಗಳಲ್ಲಿ ಕಟ್ಟಿ ಸಮನಾಗಿ ಹಂಚುವ, ಆ ಮೂಲಕ ಏಕತಾರಿಯ ನಾದದಂತೆ ಮಿಡಿಯುವ ಕಾವ್ಯ ಪ್ರತಿಭೆಯಾಗಿ ನಿಂತವರು. ಮೇಲೆ ಭೋರ್ಗರೆಯುವ ನದಿಯ ಶಬ್ದದಂತಾಗದೆ ನದಿಯ ಒಳ ಹರಿವನ್ನು ಮತ್ತದರ ಶಾಂತ ಪ್ರತಿಭಟನೆಯನ್ನು ನಮಗೆ ಅರ್ಥ ಮಾಡಿಸುವ ಬಗೆಯಲ್ಲಿ ಇವರ ಕಾವ್ಯ ಹೊಸ ರೂಪಕಗಳನ್ನು ಇಟ್ಟುಕೊಂಡು ನಮ್ಮ ಮುಂದೆ ಬಂದು ನಿಲ್ಲುತ್ತದೆ. ಕವಿತೆಗಳ ಮೂಲಕ ಸಮಕಾಲೀನ ಸಮಸ್ಯೆಗಳಿಗೆ ಹೊಸ ಹೊದಿಕೆ ಹೆಣೆಯಲಾಗಿದೆ. ಜಗದ ಪ್ರತಿ ವಿದ್ಯಮಾನವನ್ನು ಸೂಕ್ಷ್ಮವಾಗಿ ಗ್ರಹಿಸಿ ಕಾವ್ಯವಾಗಿಸುವ ತಾಕತ್ತು ಬಿದಲೋಟಿ ರಂಗನಾಥರವರಿಗೆ ಸರಿಯಾಗಿ ದಕ್ಕಿದೆ. ಓದುತ್ತಿದ್ದರೆ ಬೇಗ ಅರ್ಥವಾಗುವವು ಎಂಬ ಭ್ರಮೆ ಕಳಚಿ ಮತ್ತೆ ಮತ್ತೆ ಓದಿಸಿಕೊಂಡು ಹೋಗುವ ಕವಿತೆಗಳು ಈ ಲೋಕದ ಶೋಷಿತರ ಪರವಾದ ತನ್ನ ಹಕ್ಕುಗಳನ್ನು ಮಂಡಿಸುತ್ತದೆ. ಕವಿತೆಯೊಳಗಿನ ಆಕ್ರೋಶ ಸಾಮಾಜಿಕ ನ್ಯಾಯಕ್ಕಾಗಿ ಎಂಬುದನ್ನು ಇಲ್ಲಿ ಮರೆಯಲಾಗದು.

share
ರಮೇಶ ಗಬ್ಬೂರ್
ರಮೇಶ ಗಬ್ಬೂರ್
Next Story
X