Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವೈವಿಧ್ಯ
  3. ಕಗ್ಗತ್ತಲಲ್ಲಿ ನೀರಿಲ್ಲದೆ ರೈಲು ಪ್ರಯಾಣ!

ಕಗ್ಗತ್ತಲಲ್ಲಿ ನೀರಿಲ್ಲದೆ ರೈಲು ಪ್ರಯಾಣ!

ಒಲಿವರ್ ಡಿ’ಸೋಜಒಲಿವರ್ ಡಿ’ಸೋಜ4 Jan 2022 3:46 PM IST
share
ಕಗ್ಗತ್ತಲಲ್ಲಿ ನೀರಿಲ್ಲದೆ ರೈಲು ಪ್ರಯಾಣ!

ಕೊಚುವೇಲಿಯಿಂದ ಅಮೃತ್‌ಸರಕ್ಕೆ ಹೋಗುವ ರೈಲು ಸಂಖ್ಯೆ 12483ರಲ್ಲಿ ನನಗೆ ದಿನಾಂಕ 29ಡಿಸೆಂಬರ್ 2021ರಂದು ಮಂಗಳೂರು ಜಂಕ್ಷನ್‌ನಿಂದ ಮುಂಬೈಗೆ ಪ್ರಯಾಣಿಸಬೇಕಾಯಿತು. ರೈಲು ರಾತ್ರಿ 7:50ಕ್ಕೆ ಮಂಗಳೂರು ಜಂಕ್ಷನ್ ತಲುಪಿದಾಗ ನಾನು ಪ್ರಯಾಣಿಸಬೇಕಾದ ‘ಎಸ್2’ ಕೋಚ್‌ಗೇರಿದಾಗ ಒಳಗೆ ಅಮಾವಾಸ್ಯೆಯ ಕತ್ತಲು ನೋಡಿ ಆಶ್ಚರ್ಯ ಕಾದಿತ್ತು. ಅಷ್ಟರಲ್ಲಿ ಸ್ಲೀಪರ್ ವರ್ತುಲದಲ್ಲಿರುವ ಸ್ಲೀಪರ್ ಸಂಖ್ಯೆ 17ರಿಂದ 40ರವರೆಗಿನ ಒಟ್ಟು 24 ಸ್ಲೀಪರ್ ಪ್ರದೇಶದ ಯಾವ ಲೈಟೂ ಉರಿಯುತ್ತಿರಲಿಲ್ಲ. ನಮ್ಮ ಸ್ಲೀಪರ್ ಸಂಖ್ಯೆಯನ್ನು ಹುಡುಕಲು ಪರದಾಡಬೇಕಾಯಿತು. ಮೊಬೈಲ್ ಲೈಟಿನಲ್ಲಿ ಹುಡುಕಿದಾಗ ನನ್ನ ಜಾಗವನ್ನು ತರುಣನೊಬ್ಬ ಆಕ್ರಮಿಸಿಕೊಂಡಿದ್ದ. ಮೊಬೈಲ್ ಲೈಟ್ ಇಲ್ಲದಿದ್ದರೆ ಲಗೇಜ್‌ನೊಂದಿಗೆ ನಾನು ಅವನ ಮೇಲೆಯೇ ಕೂರುತ್ತಿದ್ದೆನೇನೋ

 ಪ್ರತಿ ಬೋಗಿಗೆ ನಾಲ್ಕು ಶೌಚಾಲಯಗಳಿವೆ ‘ಎಸ್2’ ಬೋಗಿಯ ನಾಲ್ಕೂ ಶೌಚಾಲಯಗಳಲ್ಲಿ ಲೈಟಿಲ್ಲ. ಅವುಗಳಲ್ಲಿ ಮೂರು ಶೌಚಾಲಯಗಳಲ್ಲಿ ಕಪ್ಪಾದ ಮಲವಿತ್ತು. ಗಬ್ಬುನಾತವಿತ್ತು. ಲೈಟ್ ಇಲ್ಲದಿದ್ದರೆ ಪ್ರಯಾಣಿಕರಿಗೂ ಶೌಚಾಲಯ ಸ್ವಚ್ಛವಾಗಿರಿಸಲು ಕಷ್ಟ. ಇದೇ ಬೋಗಿಯ ಯಾವ ನಳ್ಳಿಯಲ್ಲೂ ನೀರಿಲ್ಲ. ಆದುದರಿಂದ ನಮ್ಮ ಬೋಗಿಯ 80 ಪ್ರಯಾಣಿಕರು ಪಕ್ಕದ ಬೋಗಿಗಳ ಶೌಚಾಲಯ ಹಾಗೂ ನಳ್ಳಿ ನೀರು ಉಪಯೋಗಿಸಿದ್ದರಿಂದ ಆ ಎರಡೂ (‘ಎಸ್1’, ‘ಎಸ್3’) ಬೋಗಿಗಳ ನೀರು ಖಾಲಿಯಾಯಿತು. ಈ ಬೋಗಿ ತಯಾರಿಕಾ ಸಂಖ್ಯೆ 173365ಸಿ.
 ಬೆಳಗ್ಗೆಯಾದಾಗ ನನಗೊಂದು ಸತ್ಯ ಸಂಗತಿ ಅರಿವಾಯಿತು. ಮಂಗಳೂರು ಜಂಕ್ಷನ್ ಹಾಗೂ ಮಡಗಾಂವ್ ರೈಲು ನಿಲ್ದಾಣದಲ್ಲಿ ನಮ್ಮ ಬೋಗಿಗೆ ನೀರು ತುಂಬಿಸಿದ್ದರೂ ಅದು ಇಡೀ ರೈಲು ಹಳಿಗಳಲ್ಲಿ ಸೋರುವುದು ನನ್ನ ಸೀಟ್ ಕೆಳಗಿನ ನೀರಿನ ನಳ್ಳಿಯಿಂದ ಎಂದು ತಿಳಿದು ಬಂತು. ಆ ನಳ್ಳಿಯ ಮುಚ್ಚಳ ಸಡಿಲವಾಗಿದ್ದು ಇದಕ್ಕೆ ಕಾರಣವಾಗಿರಬಹುದು.
12483 ಈ ರೈಲು ತಮಿಳುನಾಡಿನ ಕೊಚುವೇಲಿಯಿಂದ ಕೇರಳ, ಕರ್ನಾಟಕ, ಗೋವಾ, ಮಹಾರಾಷ್ಟ್ರ, ಗುಜರಾತ್, ರಾಜಸ್ಥಾನ, ದಿಲ್ಲಿ ಮತ್ತು ಪಂಜಾಬ್, ಅಮೃತಸರವರೆಗೆ ಹೀಗೆ 3292 ಕಿ.ಮೀ. ದೂರವನ್ನು 52 ಗಂಟೆ 30 ನಿಮಿಷಗಳಲ್ಲಿ ಕ್ರಮಿಸುತ್ತಿದೆ. ಹಾಗಿರುವಾಗ ಈ ರೈಲಿನ ಬೋಗಿ(‘ಎಸ್2’)ಯಲ್ಲಿ 52 ಗಂಟೆ 30 ನಿಮಿಷ ಲೈಟು, ನಳ್ಳಿ ನೀರು ಇಲ್ಲದೆ ಪ್ರಯಾಣಿಸಬೇಕಾದ ಪ್ರಯಾಣಿಕರ ಪಾಡೇನು?
ರಾತ್ರಿ ಹಗಲೆನ್ನದೆ ತಮ್ಮ ನಿತ್ಯಕರ್ಮಗಳಿಗೆ ವೃದ್ಧರು/ರೋಗಿಗಳು/ಮಕ್ಕಳು ಪಟ್ಟ ಬವಣೆ ಅಷ್ಟಿಷ್ಟಲ್ಲ. ಕೊರೋನ ಸಂಕಟಕಾಲದಲ್ಲಿ ನೀರಿಲ್ಲದೆ ಕೈತೊಳೆಯದೆ ಇರಲು ಸಾಧ್ಯವೇ? ಕೊರೋನ ಹಬ್ಬುವುದಿಲ್ಲವೇ? ಕೊಂಕಣ ರೈಲು ಹಾದಿಯಲ್ಲಿ 84 ಸುರಂಗಗಳಿವೆ. ಕಗ್ಗತ್ತಲಲ್ಲಿ ಯಾರಾದರೂ ನಮ್ಮ ಬೆಳೆಬಾಳುವ ವಸ್ತುಗಳನ್ನು ಕದ್ದರೆ ಯಾರು ಹೊಣೆಗಾರರು?
ತೀರಾ ಹಳೆಯದಾದ ಸೂಕ್ತ ಸೌಕರ್ಯಗಳಿಲ್ಲದ ಈ ಬೋಗಿಯನ್ನು 53 ಗಂಟೆ ಪ್ರಯಾಣದ ಈ ಎಕ್ಸ್ ಪ್ರೆಸ್ ರೈಲಿಗೆ ಉಪಯೋಗಿಸುವ ಬದಲು ಸರಿಯಾಗಿರುವ ಬೋಗಿಯನ್ನೇಕೆ ಅಳವಡಿಸಿಲ್ಲ? ಸಂಬಂಧಪಟ್ಟವರು ಉತ್ತರಿಸಿಯಾರೇ? ಹಾಗೂ ತಪ್ಪಿತಸ್ಥರ ಮೇಲೆ ಸೂಕ್ತ ಕ್ರಮ ಕೈಗೊಳ್ಳುವರೇ ಎಂಬ ಆಶಯ ಎಲ್ಲಾ ‘ಎಸ್2’ ಬೋಗಿಯ ಪ್ರಯಾಣಿಕರದ್ದು

share
ಒಲಿವರ್ ಡಿ’ಸೋಜ
ಒಲಿವರ್ ಡಿ’ಸೋಜ
Next Story
X