Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ವಿಡಂಬನೆ
      • ಪಿಟ್ಕಾಯಣ
      • ಯುದ್ಧ
      • ವಚನ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಭೀಮ ಚಿಂತನೆ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ಅಂಬೇಡ್ಕರ್ ಚಿಂತನೆ
      • ದಿಲ್ಲಿ ದರ್ಬಾರ್
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವೈವಿಧ್ಯ
  3. ಯುದ್ಧ ಮತ್ತು ಶುದ್ಧ ಸುಳ್ಳುಗಳು

ಯುದ್ಧ ಮತ್ತು ಶುದ್ಧ ಸುಳ್ಳುಗಳು

ಮೂಲ: ಎಡುರ್ಡೊ ಗಲೆಯಾನೊ | ಅನುವಾದ: ಹರೀಶ್ ಗಂಗಾಧರ್ಮೂಲ: ಎಡುರ್ಡೊ ಗಲೆಯಾನೊ | ಅನುವಾದ: ಹರೀಶ್ ಗಂಗಾಧರ್18 Jan 2023 8:12 AM GMT
  • Facebook
  • Twitter
  • Whatsapp
  • link
  • Facebook
  • Twitter
  • Whatsapp
  • link
  • Facebook
  • Twitter
  • Whatsapp
  • link
share
ಯುದ್ಧ ಮತ್ತು ಶುದ್ಧ ಸುಳ್ಳುಗಳು

ಜಾಹೀರಾತು ಅಭಿಯಾನ, ಮಾರ್ಕೆಟಿಂಗ್ ಯೋಜನೆಗಳ ಗುರಿ ಸದಾ ಸಾರ್ವಜನಿಕ ಅಭಿಪ್ರಾಯವೇ ಆಗಿರುತ್ತದೆ. ಯುದ್ಧಗಳನ್ನು ಕೂಡ ಕಾರುಗಳನ್ನು ಬಿಕರಿ ಮಾಡುವಂತೆಯೇ ಸುಳ್ಳು ಹೇಳಿ ಮಾರಾಟ ಮಾಡಲಾಗುತ್ತದೆ. ಟೋನ್ಕಿನ್ ಕೊಲ್ಲಿಯಲ್ಲಿ ಯುಎಸ್ ಯುದ್ಧ ನೌಕೆಗಳ ಮೇಲೆ ವಿಯೆಟ್ನಾಂನವರು ದಾಳಿ ಮಾಡುತ್ತಿದ್ದಾರೆಂದು ಅಮೆರಿಕದ ಅಧ್ಯಕ್ಷ ಲಿಂಡನ್ ಜಾನ್ಸನ್ 1984ರ ಆಗಸ್ಟ್‌ನಲ್ಲಿ ಆರೋಪಿಸಿದರು. ಇದಾದ ನಂತರ ಅಮೆರಿಕದ ಅಧ್ಯಕ್ಷ ವಿಯೆಟ್ನಾಂ ದೇಶದೊಳಕ್ಕೆ ಸೇನಾಪಡೆ ಮತ್ತು ಯುದ್ಧ ವಿಮಾನಗಳನ್ನು ನುಗ್ಗಿಸಿ ಆಕ್ರಮಣ ನಡೆಸಿದರು. ಪತ್ರಕರ್ತರು, ರಾಜಕಾರಣಿಗಳು ಅಧ್ಯಕ್ಷರನ್ನು ಹಾಡಿ ಹೊಗಳಿದರು, ತಮ್ಮ ಮೆಚ್ಚುಗೆಯ ಮೊಹರು ಹಾಕಿದರು. ಅಧ್ಯಕ್ಷರ ಜನಪ್ರಿಯತೆ ಆಗಸಕ್ಕೆ ರಾಕೆಟ್‌ನಂತೆ ಜಿಗಿಯಿತು. ಅಧಿಕಾರದಲ್ಲಿದ್ದ ಡೆಮೋಕ್ರಾಟ್‌ಗಳು, ಅಧಿಕಾರ ಕಳೆದುಕೊಂಡಿದ್ದ ರಿಪಬ್ಲಿಕನ್ನರು ಒಂದೇ ಪಕ್ಷದವರಂತಾಗಿ ಆಕ್ರಮಣಕಾರಿ ಕಮ್ಯುನಿಸ್ಟರ ವಿರುದ್ಧ ಸೆಟೆದುನಿಂತರು.

ಬಹುಸಂಖ್ಯೆಯಲ್ಲಿ ವಿಯೆಟ್ನಾಂ ಜನರ ಮಾರಣ ಹೋಮದ ನಂತರ (ಪ್ರಾಣ ಕಳೆದುಕೊಂಡವರಲ್ಲಿ ಬಹುಪಾಲು ಮುಗ್ದ ಮಕ್ಕಳು ಮತ್ತು ಹೆಂಗಸರಿದ್ದರು) ಜಾನ್ಸನ್ ರಕ್ಷಣಾ ಕಾರ್ಯದರ್ಶಿಯಾಗಿದ್ದ ರಾಬರ್ಟ್ ಮ್ಯಾಕ್ ನಮಾರ ಟೋನ್ಕಿನ್ ಕೊಲ್ಲಿಯಲ್ಲಿ ಯಾವ ದಾಳಿಯು ಆಗಿಲ್ಲವೆಂದು ಒಪ್ಪಿಕೊಂಡ!

ಸತ್ತವರು ಮರಳಿ ಬರಲಿಲ್ಲ.

ಮಾರ್ಚ್ 2003, ಅಮೆರಿಕದ ಅಧ್ಯಕ್ಷ ಜಾರ್ಜ್ ಡಬ್ಲ್ಯು. ಬುಷ್ ಇರಾಕ್ ಬಳಿ ವಿನಾಶಕಾರಿ ಶಸ್ತ್ರಾಸ್ತ್ರಗಳಿವೆ. ಇಡೀ ಜಗತ್ತನ್ನೇ ನಾಶ ಮಾಡಲು ಇರಾಕ್ ಸನ್ನದ್ಧವಾಗಿದೆ ಎಂದು ಆರೋಪಿಸಿದರು. ನಾವೆಂದೂ ಕೇಳರಿಯದ ಮಾರಕ ಶಸ್ತ್ರಾಸ್ತ್ರಗಳವು ಎಂದು ಪ್ರತಿನಿತ್ಯ ಬೊಬ್ಬೆ ಹೊಡೆದುಕೊಂಡರು.

ಇದಾದ ನಂತರ ಅಮೆರಿಕ ಇರಾಕಿನೊಳಕ್ಕೆ ಸೇನಾಪಡೆ ಮತ್ತು ಯುದ್ಧ ವಿಮಾನಗಳನ್ನು ನುಗ್ಗಿಸಿ ಅಲ್ಲಿಯೂ ಆಕ್ರಮಣ ನಡೆಸಿತು. ಪತ್ರಕರ್ತರು, ರಾಜಕಾರಣಿಗಳು ಎಂದಿನಂತೆ ಹಾಡಿ ಹೊಗಳಿದರು,

ಬಹುಸಂಖ್ಯೆಯಲ್ಲಿ ಇರಾಕಿ ಜನರ ಮಾರಣ ಹೋಮದ ಆನಂತರ ಇರಾಕ್ ಬಳಿ ಎಂದಿಗೂ ಯಾವುದೇ ವಿನಾಶಕಾರಿ ಶಸ್ತ್ರಾಸ್ತ್ರಗಳು ಇರಲೇ ಇಲ್ಲವೆಂದು ಜಾರ್ಜ್ ಡಬ್ಲ್ಯು ಬುಷ್ ತಿಳಿಸಿದರು. ‘‘ನಾವೆಂದೂ ಕೇಳರಿಯದ ಮಾರಕ ಶಸ್ತ್ರಾಸ್ತ್ರಗಳು’’ ಬುಷ್‌ನ ಪ್ರಚೋದನಾಕಾರಿ ಮಾತುಗಳೇ ಆಗಿದ್ದವು. ಮುಂದಿನ ಚುನಾವಣೆಯಲ್ಲಿ ಬುಷ್ ವಿಜಯಿಯಾಗಿ ಎರಡನೇ ಅವಧಿಗೆ ಅಮೆರಿಕದ ಅಧ್ಯಕ್ಷನಾದರು. ಸುಳ್ಳುಗಳಿಗೆ ಕಾಲಿಲ್ಲವೆಂದು ನನ್ನ ಬಾಲ್ಯದಲ್ಲಿ ಅವ್ವ ಹೇಳುತ್ತಿದ್ದಳು, ಅದು ಅವಳ ತಪ್ಪುತಿಳುವಳಿಕೆಯಾಗಿತ್ತು.

share
  • Facebook
  • Twitter
  • Whatsapp
  • Linkedin
  • link
  • Facebook
  • Twitter
  • Whatsapp
  • Linkedin
  • link
  • Facebook
  • Twitter
  • Whatsapp
  • Linkedin
  • link
ಮೂಲ: ಎಡುರ್ಡೊ ಗಲೆಯಾನೊ | ಅನುವಾದ: ಹರೀಶ್ ಗಂಗಾಧರ್
ಮೂಲ: ಎಡುರ್ಡೊ ಗಲೆಯಾನೊ | ಅನುವಾದ: ಹರೀಶ್ ಗಂಗಾಧರ್
Next Story
  • Facebook
  • Twitter
  • Whatsapp
  • link
  • Facebook
  • Twitter
  • Whatsapp
  • link
  • Facebook
  • Twitter
  • Whatsapp
  • link
X