ನೀವು ಬಿಟ್ಟರೂ ನಿಮ್ಮನ್ನು ಬಿಡದೇ ಹಿಂಬಾಲಿಸುತ್ತಿದೆ: '40% ಆಫರ್' ಫೋಟೊ ಹಂಚಿಕೊಂಡು ಮೋದಿ ಕಾಲೆಳೆದ ಸಿದ್ದರಾಮಯ್ಯ

ಬೆಂಗಳೂರು: ಜೆಪಿ ನಗರದ ಬ್ರಿಗೇಡ್ ಮಿಲೇನಿಯಂನ ಸೋಮೇಶ್ವರ ಭವನದಿಂದ ಆರಂಭವಾದ ಪ್ರಧಾನಿ ನರೇಂದ್ರ ಮೋದಿ ಅವರ ರೋಡ್ ಶೋ ಮಲ್ಲೇಶ್ವರದ ಸರ್ಕಲ್ ಮಾರಮ್ಮ ದೇವಸ್ಥಾನದ ಬಳಿ ಅಂತ್ಯವಾಯಿತು.
ಮೋದಿ ಅವರು ಮೆರವಣಿಗೆಯಲ್ಲಿ ಸಾಗುತ್ತಿದ್ದ ವೇಳೆ ಅವರ ಹಿಂಭಾಗದಲ್ಲಿರುವ ಮಳಿಗೆಯೊಂದರಲ್ಲಿ ಹಾಕಿದ್ದ '40% ಆಫರ್' ಬೋರ್ಡ್ ಫೋಟೊ ಹಂಚಿಕೊಂಡಿರುವ ವಿಪಕ್ಷ ನಾಯಕ ಸಿದ್ದರಾಮಯ್ಯ, "ನೀವು ಬಿಟ್ಟರೂ 40% ಕರ್ಮ ನಿಮ್ಮನ್ನು ಬಿಡದೆ ಹಿಂಬಾಲಿಸುತ್ತಿದೆ ಮೋದಿಜೀ........'' ಎಂದು ಕಾಲೆಳೆದಿದ್ದಾರೆ.
ಇನ್ನು ''ಮೋದಿ ಹೋದಲ್ಲೆಲ್ಲಾ 40% ನಂಟು ಬಿಡಲಾರದು! ಇದು ಕಾಕತಾಳೀಯವೋ, ಸಾಂಕೇತಿಕವೋ'' ಎಂದು ಕಾಂಗ್ರೆಸ್ ಲೇವಡಿ ಮಾಡಿದೆ.
ಇದನ್ನೂ ಓದಿ: ಮೈಸೂರು: ಕಾಂಗ್ರೆಸ್ನಿಂದ ಬೊಮ್ಮಾಯಿ ಭಾವಚಿತ್ರದ ಪ್ರತಿಕೃತಿ ದಹಿಸಿ ‘ಶೇ 40 ಭ್ರಷ್ಟಾಸುರ ಸರ್ಕಾರ’ ಸಂಹಾರ
ನೀವು ಬಿಟ್ಟರೂ 40% ಕರ್ಮ ನಿಮ್ಮನ್ನು ಬಿಡದೆ ಹಿಂಬಾಲಿಸುತ್ತಿದೆ @narendramodi ಜೀ........ pic.twitter.com/W7YU9kC0E2
— Siddaramaiah (@siddaramaiah) May 6, 2023
ಮೋದಿ ಹೋದಲ್ಲೆಲ್ಲಾ 40% ನಂಟು ಬಿಡಲಾರದು!
— Karnataka Congress (@INCKarnataka) May 6, 2023
ಇದು ಕಾಕತಾಳೀಯವೋ, ಸಾಂಕೇತಿಕವೋ @BJP4Karnataka? pic.twitter.com/TfAlJilwmv







