ಮುಂದುವರಿದ ಭಾರೀ ಮಳೆ: ಮೂಡಿಗೆರೆ ತಾಲೂಕಿನ ಶಾಲೆಗಳಿಗೆ ರಜೆ
ಬಿರುಗಾಳಿಗೆ ಅಡಿಕೆ, ಮೆಣಸು ಬೆಳೆಗೆ ಹಾನಿ
ಚಿಕ್ಕಮಗಳೂರು, ಆ.12: ಮಲೆನಾಡು ಭಾಗದಲ್ಲಿ ಭಾರೀ ಬಿರುಗಾಳಿ, ಮಳೆ ಮುಂದುವರಿದಿದೆ. ಮೂಡಿಗೆರೆ ತಾಲೂಕಿನ ಶಾಲೆಗಳಿಗೆ ಶುಕ್ರವಾರ ರಜೆ ಘೋಷಣೆ ಮಾಡಲಾಗಿದೆ.
ಅಂಗನವಾಡಿಯಿಂದ ಹತ್ತನೇ ತರಗತಿವರೆಗೆ ಇಂದು ರಜೆ ಘೋಷಿಸಿ ತಹಶೀಲ್ದಾರ್ ನಾಗರಾಜ್ ಆದೇಶಿಸಿದ್ದಾರೆ.
ಭಾರೀ ಗಾಳಿ ಮಳೆಗೆ ಉರುಳಿ ಬಿದ್ದ ಅಡಿಕೆ ಮರಗಳು
ಮೂಡಿಗೆರೆ ತಾಲೂಕಿನ ಕನ್ನೆಹಳ್ಳಿ ಗ್ರಾಮದಲ್ಲಿ ಭಾರೀ ಗಾಳಿಮಳೆಗೆ ಹರೀಶ್ ಎಂಬವರಿಗೆ ಸೇರಿದ ಅಡಿಕೆ ತೋಟಕ್ಕೆ ಹಾನಿ ಸಂಭವಿಸಿದೆ. ಮಳೆ-ಗಾಳಿಯ ಅಬ್ಬರಕ್ಕೆ ಹಲವು ಅಡಿಕೆ ಮರಗಳು ಮುರಿದುಬಿದ್ದಿವೆ.
ಬಿರುಗಾಳಿ ಮಳೆಗೆ ಮೆಣಸು ಬೆಳೆಗೂ ಹಾನಿಯಾಗಿರುವುದು ವರದಿಯಾಗಿದೆ.
Next Story