ಕಲ್ಲು, ಮೊಟ್ಟೆ ಹೊಡೆಯೋದು ಸಹಜ, ಮಡಿಕೇರಿ ಚಲೋ ಕೈ ಬಿಡಿ: ಸಿದ್ದರಾಮಯ್ಯಗೆ ಎಚ್. ವಿಶ್ವನಾಥ್ ಮನವಿ
ಮೈಸೂರು: 'ಜನರು ಕಲ್ಲು , ಮೊಟ್ಟೆ, ಟೊಮೆಟೊ ಹೊಡಯೋದು ರಾಜಕೀಯ ಜೀವನದಲ್ಲಿ ಇದೆಲ್ಲಾ ಸಹಜ' ಎಂದು ವಿಧಾನ ಪರಿಷತ್ ಸದಸ್ಯ ಎಚ್. ವಿಶ್ವನಾಥ್ (Adagur H. Vishwanath) ಹೇಳಿದ್ದಾರೆ.
ಈ ಕುರಿತು ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ''ಜನರು ಕೆಲವೊಮ್ಮೆ ರಾಜಕೀಯ ನಾಯಕರ ಮೇಲೆ ಕಲ್ಲು , ಮೊಟ್ಟೆ, ಟೊಮೆಟೊ ಹೊಡಯೋದು ಸಹಜ. ಆದರೆ, ಅದು ಒಪ್ಪುವಂತದ್ದಲ್ಲ. ಸ್ವತಃ ಬಿ.ಎಸ್ ಯುಡಿಯೂರಪ್ಪ ಮತ್ತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೇರಿ ಹಲವು ಜನ ನಾಯಕರು ಮೊಟ್ಟೆ ಎಸೆದಿರುವ ಕ್ರಮವನ್ನು ಖಂಡಿಸಿದ್ದಾರೆ. ಹೀಗಿದ್ದರೂ ಮಡಿಕೇರಿಗೆ ಹೋಗಿ ಪ್ರತಿಭಟನೆ ಮಾಡುತ್ತೇವೆ ಎನ್ನುವ ಸಿದ್ದರಾಮಯ್ಯ (Siddaramaiah) ಅವರು ದಯಮಾಡಿ ಮತ್ತೊಮ್ಮೆ ಯೋಚಿಸಿ ತೀರ್ಮಾನ ಮಾಡಲಿ'' ಎಂದು ಹೇಳಿದರು.
ಇದನ್ನೂ ಓದಿ: 'ನಮ್ಮ ಬದುಕು, ನಮ್ಮ ಊಟ, ನಮ್ಮ ಆಚರಣೆ': ಮಾಂಸಾಹಾರ ವಿವಾದ ಸೃಷ್ಟಿಗೆ ನೆಟ್ಟಿಗರ ಪ್ರತಿಕ್ರಿಯೆ
'ನಾಳೆ ಏನಾದರೂ ಅನಾಹುತಗಳು ಸಂಭವಿಸುವ ಸಾಧ್ಯತೆಗಳೂ ಇದೆ. ಆದ್ದರಿಂದ ಸಿದ್ದರಾಮಯ್ಯ ಅವರು ಮಡಿಕೇರಿ ಚಲೋ ಕಾರ್ಯಕ್ರಮ ಕೈ ಕೈಬಿಡಲಿ' ಎಂದು ಮನವಿ ಮಾಡಿದರು.