-

ಆರ್ಟಿಐ ಕಾಯ್ದೆಯಡಿ ಪಡೆದ ಉತ್ತರದಿಂದ ಮಾಹಿತಿ ಬಯಲು

ಹೈಕೋರ್ಟ್ ತಡೆಯಾಜ್ಞೆ ನೀಡಿದ್ದರೂ, ಮಾಧ್ಯಮಗಳಿಂದ ನೂತನ ಐಟಿ ನಿಯಮಗಳಡಿ ಮಾಹಿತಿ ಕೇಳಿರುವ ಕೇಂದ್ರ ಸಚಿವಾಲಯ

-

ಹೊಸದಿಲ್ಲಿ,ಜ.26: ನೂತನ ಮಾಹಿತಿ ಮತ್ತು ತಂತ್ರಜ್ಞಾನ (ಐಟಿ) ನಿಯಮಾವಳಿಗಳ ನಿರ್ದಿಷ್ಟ ನಿಯಮಗಳಿಗೆ ಉಚ್ಚ ನ್ಯಾಯಾಲಯಗಳು ತಡೆಯಾಜ್ಞೆ ನೀಡಿದ್ದರೂ ಅವುಗಳಡಿ ಮಾಹಿತಿಗಳನ್ನು ಸಲ್ಲಿಸುವಂತೆ ವಾರ್ತಾ ಮತ್ತು ಪ್ರಸಾರ (ಐ ಆ್ಯಂಡ್ ಬಿ) ಸಚಿವಾಲಯವು ಮಾಧ್ಯಮಗಳ ಪ್ರಕಾಶಕರಿಗೆ ನೋಟಿಸ್ಗಳನ್ನು ಜಾರಿಗೊಳಿಸಿರುವುದು ಇಂಟರ್ನೆಟ್ ಫ್ರೀಡಂ ಫೌಂಡೇಷನ್ (ಐಎಫ್ಎಫ್) ಆರ್ಟಿಐ ಕಾಯ್ದೆಯಡಿ ಪಡೆದುಕೊಂಡಿರುವ ಉತ್ತರದಿಂದ ಬೆಳಕಿಗೆ ಬಂದಿದೆ. 2021,ಆ.14 ಮತ್ತು 2021,ಸೆಪ್ಟಂಬರ್ 16ರಂದು ಅನುಕ್ರಮವಾಗಿ ಬಾಂಬೆ ಮತ್ತು ಮದ್ರಾಸ್ ಉಚ್ಚ ನ್ಯಾಯಾಲಯಗಳು ಹೊರಡಿಸಿದ್ದ ಆದೇಶಗಳಲ್ಲಿ ಮಾಹಿತಿ ತಂತ್ರಜ್ಞಾನ (ಮಧ್ಯವರ್ತಿ ಮಾರ್ಗಸೂಚಿಗಳು ಮತ್ತು ಡಿಜಿಟಲ್ ಮಾಧ್ಯಮ ನೀತಿ ಸಂಹಿತೆ)ನಿಯಮಗಳು,2021ರ ಎರಡು ಉಪನಿಯಮಗಳನ್ನು ತಡೆಹಿಡಿಯಲಾಗಿತ್ತು.

ಐಟಿ ನಿಯಮಗಳ ವಿರುದ್ಧ ಸಲ್ಲಿಸಲಾಗಿದ್ದ ಎರಡು ಅರ್ಜಿಗಳ ವಿಚಾರಣೆ ನಡೆಸಿದ್ದ ಮದ್ರಾಸ್ ಉಚ್ಚ ನ್ಯಾಯಾಲಯವು ದೇಶದ ಮಾಧ್ಯಮಗಳ ಸ್ವಾತಂತ್ರವನ್ನು ಕಿತ್ತುಕೊಳ್ಳುತ್ತಿವೆ ಎಂಬ ಕಾರಣ ನೀಡಿ 9(1) ಮತ್ತು 9(3) ಉಪನಿಯಮಗಳಿಗೆ ತಡೆಯಾಜ್ಞೆಯನ್ನು ನೀಡಿತ್ತು. ಇದಕ್ಕೂ ಮುನ್ನ ಇಂತಹುದೇ ಅರ್ಜಿಗಳ ವಿಚಾರಣೆಯ ಬಳಿಕ ಬಾಂಬೆ ನ್ಯಾಯಾಲಯವೂ ಈ ಉಪನಿಯಮಗಳನ್ನು ತಡೆಹಿಡಿದಿತ್ತು.

ನಿಯಮ 9 ಸಂಹಿತೆಯ ಅನುಸರಣೆ ಮತ್ತು ಅವಲೋಕನಕ್ಕೆ ಸಂಬಂಧಿಸಿದ್ದು,ನೀತಿ ಸಂಹಿತೆಯ ಅನುಸರಣೆಯನ್ನು ಮತ್ತು ಪ್ರಕಾಶಕರ ಯಾವುದೇ ಕುಂದುಕೊರತೆಗಳಿಗೆ ಪರಿಹಾರವನ್ನು ಖಚಿತಪಡಿಸಲು ಕೇಂದ್ರ ಸರಕಾರವು ಮೂರು ಸ್ತರಗಳ ಮೇಲ್ವಿಚಾರಣೆ ಕಾರ್ಯವಿಧಾನವನ್ನು ರೂಪಿಸುತ್ತದೆ.

ಇದನ್ನೂ ಓದಿ: ಐಟಿ ಕಾಯ್ದೆಯ ಸೆಕ್ಷನ್ 66 ಎ ಬಳಕೆ  ಮುಂದುವರಿಕೆ: ರಾಜ್ಯಗಳಿಗೆ ನೋಟಿಸ್ ನೀಡಿದ ಸುಪ್ರೀಂಕೋರ್ಟ್

ಐಟಿ ನಿಯಮಗಳಡಿ ತಮ್ಮ ಬಗ್ಗೆ ಮಾಹಿತಿಗಳನ್ನು ಸಲ್ಲಿಸುವಂತೆ ವಾರ್ತಾ ಮತ್ತು ಪ್ರಸಾರ ಸಚಿವಾಲಯವು ತಮಗೆ ನೋಟಿಸ್ಗಳನ್ನು ನೀಡಿದೆ ಎಂದು ಡಿಜಿಟಲ್ ಸುದ್ದಿ ಪ್ರಕಾಶಕರು ತಿಳಿಸಿರುವುದನ್ನು ಐಎಫ್ಎಫ್ ತನ್ನ ಇತ್ತೀಚಿನ ವರದಿಯಲ್ಲಿ ಉಲ್ಲೇಖಿಸಿದೆ.

 ಈ ಬಗ್ಗೆ ಐಎಫ್ಎಫ್ ಜ.3ರಂದು ಆರ್ಟಿಐ ಕಾಯ್ದೆಯಡಿ ಸಲ್ಲಿಸಿದ್ದ ಅರ್ಜಿಗೆ ವಾರ್ತಾ ಮತ್ತು ಪ್ರಸಾರ ಸಚಿವಾಲಯವು ಜ.14ರಂದು ಉತ್ತರ ನೀಡಿದೆ. 2021,ಮೇ 26 ಮತ್ತು 2021,ಸೆ.9ರಂದು ತಾನು ಪ್ರಕಾಶಕರಿಗೆ ನೋಟಿಸ್ಗಳನ್ನು ಹೊರಡಿಸಿದ್ದನ್ನು ಸಚಿವಾಲಯವು ತನ್ನ ಉತ್ತರದಲ್ಲಿ ಒಪ್ಪಿಕೊಂಡಿದೆ. ಸೆ.9ರ ನೋಟಿಸ್ಗಳನ್ನು ಆ.14ರ ಬಾಂಬೆ ಉಚ್ಚ ನ್ಯಾಯಾಲಯದ ಆದೇಶದ ಬಳಿಕ ಹೊರಡಿಸಲಾಗಿತ್ತು ಎನ್ನುವುದನ್ನು ಇಲ್ಲಿ ಗಮನಿಸಬೇಕು. 2,100ಕ್ಕೂ ಅಧಿಕ ಸುದ್ದಿ ಮಾಧ್ಯಮಗಳ ಪ್ರಕಾಶಕರು ಮತ್ತು ಒಟಿಟಿ ಪ್ಲಾಟ್‌ಫಾರ್ಮ್ ಗಳು ಈಗಾಗಲೇ ವಿವರಗಳನ್ನು ಒದಗಿಸಿದ್ದಾರೆ ಎಂದೂ ಸಚಿವಾಲಯವು ಉತ್ತರದಲ್ಲಿ ಒಪ್ಪಿಕೊಂಡಿದೆ.

ಈ ಪೈಕಿ ಎಷ್ಟು ಪ್ರಕಾಶಕರು 2021,ಆ.14ರ (ಬಾಂಬೆ ಉಚ್ಚ ನ್ಯಾಯಾಲಯದ ತೀರ್ಪಿನ ದಿನಾಂಕ) ನಂತರ ತಮ್ಮ ವಿವರಗಳನ್ನು ಸಲ್ಲಿಸಿದ್ದರು ಎಂಬ ಪ್ರಶ್ನೆಗೆ ಇಂತಹ ಯಾವುದೇ ಮಾಹಿತಿ ತನ್ನ ಬಳಿಯಲ್ಲಿಲ್ಲ ಎಂದು ಸಚಿವಾಲಯವು ಉತ್ತರಿಸಿದೆ.

ಈ ನೋಟಿಸ್ಗಳನ್ನು ಹೊರಡಿಸಲು ಯಾವ ಕಾನೂನು ಅಧಿಕಾರ ನೀಡಿತ್ತು ಎಂಬ ಪ್ರಶ್ನೆಗೆ ಸಚಿವಾಲಯವು, ಕೋರಿದ ಮಾಹಿತಿಯು ಆರ್ಟಿಐ ಕಾಯ್ದೆಯ ಕಲಂ 2(ಎಫ್)ನ ವ್ಯಾಖ್ಯೆಯಿಂದ ಹೊರತಾಗಿದೆ ಎಂದು ಉತ್ತರಿಸಿದೆ.

ವಾರ್ತಾ ಮತ್ತು ಪ್ರಸಾರ ಸಚಿವಾಲಯವು ಎರಡು ಉಚ್ಚ ನ್ಯಾಯಾಲಯಗಳ ತೀರ್ಪುಗಳನ್ನು ಕಡೆಗಣಿಸಿ 2021,ಸೆ.9ರಂದು ನೋಟಿಸ್ಗಳನ್ನು ಹೊರಡಿಸಿದ್ದು ಅಚ್ಚರಿದಾಯಕವಾಗಿದೆ. ಆದರೆ ಈ ನೋಟಿಸ್ಗಳನ್ನು ಹೊರಡಿಸಲು ಕಾನೂನಿನ ಬೆಂಬಲದ ಬಗ್ಗೆ ನಮ್ಮ ಪ್ರಶ್ನೆಯನ್ನು ಅದು ಕಡೆಗಣಿಸಿದೆ ಎಂದು ಐಎಫ್ಎಫ್ ಹೇಳಿದೆ.

ನೋಟಿಸ್ಗಳನ್ನು ಜಾರಿಗೊಳಿಸಲಾಗಿದ್ದ ಮತ್ತು ಅವುಗಳಿಗೆ ಉತ್ತರಿಸಿದ್ದ ಪ್ರಕಾಶಕರ ಪಟ್ಟಿಗಳಂತಹ (ಅವರ ವಿವರಗಳ ಸಹಿತ)ಐಎಫ್ಐಫ್ ನ ಇತರ ಪ್ರಶ್ನೆಗಳನ್ನೂ ಸಚಿವಾಲಯವು ಕಡೆಗಣಿಸಿದೆ.

 ಬಾಂಬೆ ಮತ್ತು ಮದ್ರಾಸ್ ಉಚ್ಚ ನ್ಯಾಯಾಲಯಗಳು ಮಾತ್ರವಲ್ಲ, ದೇಶಾದ್ಯಂತದ ಹೈಕೋರ್ಟ್ಗಳಲ್ಲಿಯೂ ನೂತನ ಐಟಿ ನಿಯಮಗಳು ಸಂವಿಧಾನ ಮತ್ತು ಐಟಿ ಕಾಯ್ದೆಯನ್ನು ಉಲ್ಲಂಘಿಸಿವೆ ಎಂದು ಆರೋಪಿಸಿ ಹಲವಾರು ಮಾಧ್ಯಮ ಸಂಸ್ಥೆಗಳು ಅರ್ಜಿಗಳನ್ನು ಸಲ್ಲಿಸಿವೆ

 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

The views expressed in comments published on www.varthabharati.in are those of the comment writers alone. They do not represent the views or opinions of varthabharati.in or its staff, nor do they represent the views or opinions of  Vartha Bharati Group, or any entity of, or affiliated with, Vartha Bharati Group. varthabharati.in reserves the right to take any or all comments down at any time.
 

Refrain from posting comments that are obscene, defamatory or inflammatory, and do not indulge in personal attacks, name calling or inciting hatred against any community. It is obligatory on www.varthabharati.in to provide the IP address and other details of senders of such comments, to the authority concerned upon request. 

Help us delete comments that do not follow these guidelines by informing us (vbwebdesk@gmail.com). Let's work together to keep the conversation civil. 

www.varthabharati.in ನ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಆ ಕಮೆಂಟ್ ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು  www.varthabharati.in ನ ಅಥವಾ ಅದರ ಸಿಬ್ಬಂದಿಯ, ಅಥವಾ 'ವಾರ್ತಾ ಭಾರತಿ' ಬಳಗಕ್ಕೆ ಸೇರಿದ ಯಾರದ್ದೇ ಅಭಿಪ್ರಾಯಗಳಲ್ಲ. ಈ ಕಮೆಂಟ್ ಗಳನ್ನು ಯಾವುದೇ ಸಂದರ್ಭದಲ್ಲಿ ತೆಗೆದುಹಾಕುವ ಹಕ್ಕನ್ನು  ' ವಾರ್ತಾ ಭಾರತಿ' ಕಾದಿರಿಸಿದೆ. 

ಅಶ್ಲೀಲ, ಮಾನಹಾನಿಕರ ಅಥವಾ ಪ್ರಚೋದನಕಾರಿ ಕಮೆಂಟ್ ಗಳನ್ನು ಹಾಗು ಯಾವುದೇ ವ್ಯಕ್ತಿ, ಸಂಸ್ಥೆ , ಸಮುದಾಯಗಳ ವಿರುದ್ಧ ಹಿಂಸೆ ಪ್ರಚೋದಿಸುವಂತಹ ಕಮೆಂಟ್ ಗಳನ್ನು ಹಾಕಬೇಡಿ. ಅಂತಹ ಕಮೆಂಟ್ ಹಾಕಿದವರ ಐಪಿ ಅಡ್ರೆಸ್ ಹಾಗು ಇತರ ವಿವರಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಕೇಳಿದಾಗ  ನೀಡುವುದು 'ವಾರ್ತಾ ಭಾರತಿ' ಗೆ ಕಡ್ದಾ ಯವಾಗಿರುತ್ತದೆ.  ಆ ರೀತಿಯ ಯಾವುದೇ ಕಮೆಂಟ್ ಗಳು ಕಂಡು ಬಂದಲ್ಲಿ ಕೂಡಲೇ ನಮಗೆ ತಿಳಿಸಿ (vbwebdesk@gmail.com) ಅದನ್ನು ತೆಗೆದು ಹಾಕಲು ನೇರವಾಗಿ. ಆರೋಗ್ಯಕರ ಚರ್ಚೆಗೆ ಸಹಕರಿಸಿ.

Back to Top