ಖತರ್‌ ನಲ್ಲಿ ಅಪಘಾನ್ ಶಾಂತಿ ಮಾತುಕತೆ ಆರಂಭ

Update: 2021-07-17 18:11 GMT

ದೋಹಾ, ಜು.17: ಅಪಘಾನಿಸ್ತಾನದಲ್ಲಿ ವಿದೇಶದ ಪಡೆಗಳ ವಾಪಸಾತಿ ಬಹುತೇಕ ಪೂರ್ಣಗೊಂಡಿರುವಂತೆಯೇ ಅಲ್ಲಿ ಹಿಂಸಾಚಾರ ಭುಗಿಲೆದ್ದಿದೆ. ಈ ಮಧ್ಯೆ, ಅಪಘಾನ್ ಸರಕಾರ ಮತ್ತು ತಾಲಿಬಾನ್ ಪ್ರತಿನಿಧಿಗಳು ಶನಿವಾರ ಖತರ್ ನಲ್ಲಿ ಶಾಂತಿ ಮಾತುಕತೆಗೆ ಸಭೆ ಸೇರಿರುವುದಾಗಿ ವರದಿಯಾಗಿದೆ. 

ಅಪಘಾನ್ನ ಮಾಜಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಅಬ್ದುಲ್ಲಾ ಅಬ್ದುಲ್ಲಾ ಸಹಿತ ಹಲವು ಉನ್ನತ ಅಧಿಕಾರಿಗಳು ದೋಹಾದಲ್ಲಿ ನಡೆಯುವ ಈ ಸಭೆಯಲ್ಲಿ ಪಾಲ್ಗೊಂಡಿದ್ದಾರೆ. ದೋಹಾದಲ್ಲಿ ಹಲವು ತಿಂಗಳಿಂದ ಉಭಯ ತಂಡಗಳ ನಡುವೆ ಮಾತುಕತೆ ನಡೆಯುತ್ತಿತ್ತು, ಆದರೆ, ಅಪಘಾನ್ನಲ್ಲಿ ತಾಲಿಬಾನ್ಗಳ ಕೈಮೇಲಾಗುತ್ತಿದ್ದಂತೆಯೇ ಮಾತುಕತೆ ಬಹುತೇಕ ಸ್ಥಗಿತಗೊಂಡಿತ್ತು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News