ಸಿಂಗಾಪುರ: ಪಂಜರದಿಂದ ತಪ್ಪಿಸಿಕೊಂಡ ಸಿಂಹಗಳು; ವಿಮಾನ ನಿಲ್ದಾಣದಲ್ಲಿ ಗೊಂದಲ, ಆತಂಕ‌

Update: 2021-12-13 17:50 GMT
ಸಾಂದರ್ಭಿಕ ಚಿತ್ರ:PTI

ಸಿಂಗಾಪುರ, ಡಿ.13: ವಿದೇಶದ ಮೃಗಾಲಯಕ್ಕೆ ರವಾನಿಸಲು ಕಂಟೈನರ್‌ನಲ್ಲಿರಿಸಿದ್ದ  2 ಸಿಂಹಗಳು ಸಿಂಗಾಪುರದ ಚಾಂಗಿ ವಿಮಾನ ನಿಲ್ದಾಣದಲ್ಲಿ ಕಂಟೈನರ್‌ ನಿಂದ ಹೊರಬಂದು ವಿಮಾನ ನಿಲ್ದಾಣದಲ್ಲಿ ಗೊಂದಲ, ಆತಂಕ ಮೂಡಿಸಿದ ಘಟನೆ ರವಿವಾರ ನಡೆದಿದೆ. ಬಳಿಕ ಅವುಗಳಿಗೆ ಅರಿವಳಿಕೆ ಚುಚ್ಚುಮದ್ದು ನೀಡಿ ಮರಳಿ ಪಂಜರಕ್ಕೆ ರವಾನಿಸಿದ್ದು ಇದೀಗ ಸಿಂಗಾಪುರದ ಮಂಡಾಯ್ ವನ್ಯಜೀವಿ ಘಟಕದಲ್ಲಿ ಆರೈಕೆ ಮಾಡಲಾಗುತ್ತಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.

ಒಟ್ಟು 7 ಸಿಂಹಗಳನ್ನು ಸಿಂಗಾಪುರ ಏರ್‌ಲೈನ್ಸ್‌ನ ವಿಮಾನದ ಮೂಲಕ ವಿದೇಶಕ್ಕೆ ರವಾನಿಸಲಾಗುತ್ತಿತ್ತು. ಇವನ್ನು ಎಲ್ಲಿಂದ ತರಲಾಗಿದೆ ಮತ್ತು ಎಲ್ಲಿಗೆ ರವಾನಿಸಲಾಗುತ್ತಿದೆ ಎಂಬುದು ಸ್ಪಷ್ಟವಾಗಿಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News