×
Ad

ಬುರೈದ: ಹುಬ್ಬು ರಸೂಲ್ ಕಾರ್ಯ ಕ್ರಮ

Update: 2016-01-19 09:43 IST

ಬುರೈದ: ಇಂಡಿಯಾ ಫ್ರೆಟಿನಿ೯ಟಿ ಫೋರಂ  ಬುರೈದ  ಘಟಕವು   ಆಯೋಜಿಸಿದ  ಸೀರತುನ್ನಬಿ  ಅಬಿಯಾನದ  ಅಂಗವಾಗಿ  ಪ್ರವಾದಿ ನಬಿ (ಸ.ಅ) ರವರ ಜೀವನ ಮತ್ತು ಸಂದೇಶಸಾರುವ “ ಹುಬ್ಬು ರಸೂಲ್ ” ಎಂಬ ಕಾರ್ಯ ಕ್ರಮ ಜ.14 ರಂದು ಬುರೈದ ಖಳಿದಿಯದಲ್ಲಿ ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು  ಐ ಎಫ್ ಎಫ್  ಬುರೈದ ಇದರ ಪ್ರದಾನ ಕಾರ್ಯದರ್ಶಿ  ಜಮಾಲ್ ಅಡ್ಧೂರ್  ರವರು ವಹಿಸಿದ್ಧರು. ಸಹೀದ್ ಪುಂಜಲ್ ಕಟ್ಟೆ ರವರ  ಕೀರತ್ ನಿಂದ ಕಾರ್ಯಕ್ರಮ ಪ್ರಾರಂಭವಾಹಿತು.
 

ಐಎಫ್ಎಫ್ ಕೇರಳ ಜಿಲ್ಲಾ ಸಮಿತಿ ಸದಸ್ಯರಾದ ಹಾರಿಸ್ ಮೌಲವಿರವರು ಕಾರ್ಯಕ್ರಮವನ್ನು  ಉದ್ಘಾಟಿಸಿ , ದಿಕ್ಸೂಚಿ ಬಾಷಣ ಮಾಡಿದರು.  

ಪ್ರವಾದಿ ನಬಿ (ಸ.ಅ) ರವರ ಜೀವನ ನಮಗೆಲ್ಲರಿಗೂ  ಮಾದರಿಯಾಗಬೇಕು. ಐಕ್ಯತೆಗೆ ಅಲ್ಲಾಹನ ಸಹಾಯ ಯಾವಾಗಲು ಇರುತದೆ,  ಬದರ್ ಯುದ್ದದಲ್ಲಿ 313 ಸಹಬಿಗಳು ಒಂದು ಸಾವಿರ ಶತ್ರುಗಳನ್ನು ಅಲ್ಲಾಹನ ಸಹಾಯದಿಂದ ಎದುರಿಸಿದರು . ಆಗ ಸಹಬಿಗಳಲ್ಲಿ ಐಕ್ಯತೆ ಇತ್ತು ಎಂದರು. ಈಗ ನಮ್ಮ ಮುಸ್ಲಿಂ ಸಮಾಜದಲ್ಲಿ ಐಕ್ಯತೆ ಕೊರತೆ ಎದ್ದು ಕಾಣುತಿದೆ . ಪರಸ್ಪರ ಐಕ್ಯತೆಯನ್ನು ಕಾಪಾಡಿಕೊಂಡು ಮುಸ್ಲಿಂ ಸಮುದಾಯದ ಒಳಿತಿಗಾಗಿ  ದುಡಿಯಬೇಕು ಎಂದು ಕರೆಕೊಟ್ಟರು. 
  ಐ ಎಫ್ ಎಫ್  ಬುರೈದ ಇದರ ಪ್ರದಾನ ಕಾರ್ಯದರ್ಶಿ  ಜಮಾಲ್ ಅಡ್ಧೂರ್ ತಮ್ಮ ಅಧ್ಯಕ್ಷ ಬಾಷಣ ದಲ್ಲಿ    ಐ ಎಫ್ ಎಫ್  ಸೌದಿ ಅರೇಬಿಯದಲ್ಲಿ ಪ್ರವಾಸಿಗಳ  ಸಮಸ್ಸೆ ಪರಿಹರಿಸಲು  ಹತ್ತು ಹಲವು ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ . ಬುರೈದದಲ್ಲಿ ಹಲವಾರು ಸಂಗಟನೆಗಳು ನಮೊಂದಿಗೆ ಕೈಜೋಡಿಸಿದೆ ಎಂದರು.

ಮುಖ್ಯ ಅತಿಥಿಗಳಾಗಿ ಐಎಸ್ಎಫ್ ಬುರೈದ ಜಿಲ್ಲಾ ಉಪಾಧ್ಯಕ್ಷರಾದ ಅಬ್ಬಾಸ್ ಅಲಿ ಕುಕ್ಕುವಲ್ಲಿ , ಗಲ್ಫ್ ಕಮಿಟಿ   ಅಡ್ಧೂರ್ ಇದರ ಅಧ್ಯಕ್ಷರಾದ    ಜಿ. ಎಂ.  ಮೊಹಮ್ಮದ್ ಅಡ್ಧೂರ್ , ಯುವ ಉದ್ಯಮಿ ಅಶ್ರಫ್ ಬದ್ರಿಯನಗರ ವೇದಿಕೆ ಯಲ್ಲಿ ಉಪಸ್ಥಿತರಿದ್ದರು

ಅಮಿನ್ ಪುಂಜಲ್ ಕಟ್ಟೆರವರು ಅತಿಥಿಗಳನ್ನು ಸ್ವಾಗತಿಸಿ, ಅಬ್ದುಲ್ ಖದರ್ ಹೈಪರ್ ಪಾಂಡಾ ರವರು ದಾನ್ಯ ವಾದ ಅರ್ಪಿಸಿದರು , ಅಯ್ಯುಬ್ ಉಪ್ಪಿನಂಗಡಿ ಕಾರ್ಯಕ್ರಮ ನಿರೂಪಿಸಿದರು.

Similar News