×
Ad

ಡಿ.ಕೆ. ಎಸ್.ಸಿ ಬಾರ್ ದುಬೈ ಘಟಕದ ಪದಾಧಿಕಾರಿಗಳ ಆಯ್ಕೆ

Update: 2016-03-20 12:11 IST

ದುಬೈ, ಮಾ.20: ದಕ್ಷಿಣ ಕರ್ನಾಟಕ ಸುನ್ನಿ ಸೆಂಟರ್ ಯು.ಎ.ಇ. ಇದರ ಅದೀನ ಘಟಕವಾದ ಡಿ.ಕೆ.ಎಸ್.ಸಿ ಬಾರ್ ದುಬೈ ಮಹಾ ಸಭೆಯು  ಉಸ್ಮಾನ್ ಕೆ.ಪಿ.ಎಚ್  ರವರ ನಿವಾಸದಲ್ಲಿ ಅಹಮದ್ ಪೈಝಿ ಸಜಿಪ  ಅವರ ದುವಾದೊಂದಿಗೆ ಘಟಕದ ಅದ್ಯಕ್ಷ  ನವಾಝ್ ಕೊಟೆಕ್ಕಾರ್  ಅವರ ಅದ್ಯಕ್ಷತೆಯಲ್ಲಿ ನಡೆಯಿತು. 

ಸಭೆಯಲ್ಲಿ ಅತಿಥಿಗಳಾಗಿ ಯು.ಎ.ಇ.ರಾಷ್ಟೀಯ ಸಮಿತಿ ನೇತಾರರಾದ ಇಕ್ಬಾಲ್ ಹೆಜಮಾಡಿ, ಹುಸೈನ್ ಹಾಜಿ ಕಿನ್ಯ , ಹಾಜಿ.ಅಬ್ದುಲ್ಲ ಬೀಜಾಡಿ, ಇ.ಕೆ. ಇಬ್ರಾಹಿಂ ಕಿನ್ಯ, ಯಸ್.ಯೂಸುಫ್ ಅರ್ಲಪದವು, ಇಬ್ರಾಹಿಂ ಹಾಜಿ ಕಿನ್ಯ, ಅಬ್ಬಾಸ್ ಪಾಣಾಜೆ  ಉಪಸ್ಥಿತರಿದ್ದರು.

ಹಾಜಿ ಅಬ್ದುಲ್ಲ ಬೀಜಾಡಿ  ಚುನಾವಣಾಧಿಕಾರಿ ಯಾಗಿ 2016 - 17 ಸಾಲಿನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.

ಗೌರವಾಧ್ಯಕ್ಷರು : ಉಮ್ಮರಬ್ಬ ಉಚ್ಚಿಲ

ಅಧ್ಯಕ್ಷರು :  ಇಸ್ಮಾಯಿಲ್ ಮುಳೂರು

ಉಪಾಧ್ಯಕ್ಷರು :  ಕರೀಂ ಹಾಜಿ ಉಳ್ಳಾಲ

                     ಅಶ್ರಫ್ ಬಾಳೆ ಹೊನ್ನೂರ್

                     ಹಸನ್ ಬಾವ ಹಳೆಯಂಗಡಿ

ಪ್ರಧಾನ ಕಾರ್ಯದರ್ಶಿ : ಇಬ್ರಾಹಿಂ ಕಳತ್ತೂರು

ಜೊತೆ ಕಾರ್ಯದರ್ಶಿ :  ರಿಯಾಝ್ ಕೆ.ಪಿ.ಎಚ್

                             ಅಬ್ದುಲ್ ಬಾಸಿತ್ ಹಳೆಯಂಗಡಿ                          

ಕೋಶಾಧಿಕಾರಿ :  ಇಮ್ತಿಯಾಝ್ ಉಳ್ಳಾಲ

ಸಲಹೆ ಗಾರರು  : ನವಾಝ್ ಕೋಟೆಕ್ಕಾರ್

ಲೆಕ್ಕ ಪರಿಶೋಧಕರು :  ಅಬ್ದುಲ್ ರಹಿಮಾನ್ ಸಜಿಪ

ಸಂಚಾಲಕರು :  ಬಾವ ಮುಳೂರು , ಸಿದ್ದೀಕ್ ಕೋಡಿ, ಹೈದರ್ ಹಾಗೂ ಸದಸ್ಯರನ್ನು ಆಯ್ಕೆ ಮಾಡಲಾಯಿತು.

ಸಭೆಯಲ್ಲಿ  ಇಬ್ರಾಹಿಂ ಕಳತ್ತೂರು ಸ್ವಾಗತಿಸಿ,  ವರದಿ ಹಾಗೂ ಲೆಕ್ಕ ಪತ್ರ ಮಂಡಿಸಿದರು. ರಿಯಾಝ್ ಕೆ.ಪಿ.ಎಚ್. ವಂದಿಸಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News