ದುಬೈ: ಜೂ.24ರಂದು ಕೆಐಸಿ ವತಿಯಿಂದ ಇಫ್ತಾರ್ ಕೂಟ

Update: 2016-06-22 12:51 GMT

ದುಬೈ, ಜೂ.22: ಖಾಸಗಿ ಕಾರ್ಯಕ್ರಮಗಳ ನಿಮಿತ್ತ ಯುಎಇಗೆ ಆಗಮಿಸಿದ್ದ ಹಿರಿಯ ವಿದ್ವಾಂಸ, ಸೂಫಿವರ್ಯ ಶೈಖುಲ್ ಜಾಮಿಅ ಪ್ರೊಫೆಸರ್ ಶೈಖುನಾ ಅಲಿ ಕುಟ್ಟಿ ಉಸ್ತಾದ್‌ರನ್ನು ಕೆಐಸಿ ಕೇಂದ್ರ ಸಮಿತಿಯ ನಿಯೋಗವು ಭೇಟಿ ಮಾಡಿ ಇಫ್ತಾರ್ ಕೂಟ ಕಾರ್ಯಕ್ರಮದ ಪತ್ರವನ್ನು ನೀಡಿ, ಕಾರ್ಯಕ್ರಮಕ್ಕೆ ಆಹ್ವಾನಿಸಿತು.

ಈ ಸಂದರ್ಭದಲ್ಲಿ ಕೆಐಸಿ ಅಕಾಡೆಮಿಯ ಕಾರ್ಯಚಟುವಟಿಕೆಗಳ ಕುರಿತು ಮಾತನಾಡಿದ ಉಸ್ತಾದರು ಸಂಸ್ಥೆಯ ಪ್ರಗತಿ, ಶೈಕ್ಷಣಿಕ ಗುಣಮಟ್ಟದ ಕುರಿತು ಪ್ರಶಂಸಿಸಿದರು. ಕರ್ನಾಟಕದ ಪ್ರಥಮ ಸಮಸ್ತ ಅಧೀನದಲ್ಲಿ ಸ್ಥಾಪನೆಗೊಂಡ ಸಮನ್ವಯ ವಿದ್ಯಾ ಸಂಸ್ಥೆಯು ಇದಾಗಿದ್ದು, ಯಶಸ್ಸಿನೊಂದಿಗೆ ಮುನ್ನಡೆಯಲಿ ಎಂದು ಶುಭ ಹಾರೈಸಿದರು.

ಜೊತೆಗೆ ಜೂ.24ರಂದು ದುಬೈ ಆಪಲ್ ಇಂಟರ್ನ್ಯಾಷನಲ್ ಸ್ಕೂಲ್ ಕಿಸೈಸ್ನಲ್ಲಿ ನಡೆಯಲಿರುವ ಇಫ್ತಾರ್ ಕೂಟ ಕಾರ್ಯಕ್ರಮದಲ್ಲಿ ಭಾಗವಹಿಸುವ ಕುರಿತು ಭರವಸೆಯನ್ನು ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News