ಸೌದಿ ಅರೇಬಿಯ: ಊರಿಗೆ ಹೊರಟಿದ್ದ ಭಾರತದ ಯುವಕ ಕುಸಿದು ಬಿದ್ದು ಮೃತ್ಯು

Update: 2016-08-01 13:37 GMT

ಜಿದ್ದ, ಆಗಸ್ಟ್1: ಕುಟುಂಬದೊಂದಿಗೆ ಇಂದು ಊರಿಗೆ ಹೊರಟಿದ್ದ ಯುವಕನೊಬ್ಬ ಕುಸಿದು ಬಿದ್ದು ಮೃತರಾದ ಘಟನೆ ಸೌದಿ ಅರೇಬಿಯದಿಂದ ವರದಿಯಾಗಿದೆ. ಕೇರಳದ ಮಂಜೇರಿ ಮುಳ್ಳಂಪಾರದ ಅಬ್ದುಲ್ ಮುನೀರ್ ಕಲ್ಲಾಯಿ(39) ಮೃತ ವ್ಯಕ್ತಿಯಾಗಿದ್ದು,ಕಳೆದ ಎಂಟು ವರ್ಷಗಳಿಂದ ಇಲ್ಲಿನ ನೀರಿನ ಕಂಪೆನಿಯೊಂದರಲ್ಲಿ ದುಡಿಯುತ್ತಿದ್ದರು. ವಿಸಿಟಿಂಗ್ ವೀಸಾದಲ್ಲಿ ಕುಟುಂಬವನ್ನು ಕರೆಯಿಸಿಕೊಂಡಿದ್ದ ಅವರು ಕುಟುಂಬದ ಜೊತೆ ಇಂದು ಊರಿಗೆ ಹೊರಡುವವರಿದ್ದರು. ರವಿವಾರ ಬೆಳಗ್ಗೆ ಹೃದಯಾಘಾತದಿಂದಾಗಿ ಕುಸಿದು ಬಿದ್ದು ನಿಧನರಾದರು ಎನ್ನಲಾಗಿದೆ. ಅವರ ಪಾರ್ಥಿವ ಶರೀರ ಜಿದ್ದಾದ ಕಿಂಗ್ ಅಬ್ದುಲ್ ಅಝೀಝ್ ಆಸ್ಪತ್ರೆಯ ಶವಾಗಾರದಲ್ಲಿದೆ. ಜಿದ್ದಾದಲ್ಲಿಯೇ ದಫನಕಾರ್ಯ ನಡೆಯಲಿದೆ ಎಂದು ಸಂಬಂಧಪಟ್ಟವರು ತಿಳಿಸಿದ್ದಾರೆ ಎಂದು ವರದಿಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News