ಆ.12ರಂದು ‘ಗಲ್ಫ್ ಇಶಾರ’ ಬಿಡುಗಡೆ

Update: 2016-08-10 17:25 GMT

ಮಂಗಳೂರು, ಆ.10: ಕರ್ನಾಟಕ ರಾಜ್ಯ ಎಸ್ಸೆಸ್ಸೆಫ್ ಮುಖವಾಣಿ ‘ಇಶಾರ’ದ ‘ಗಲ್ಫ್ ಇಶಾರ’ದ ಕತರ್ ಪ್ರಕಾಶನವನ್ನು ಸಚಿವ ಯು.ಟಿ.ಖಾದರ್ ಆ.12ರಂದು 2 ಗಂಟೆಗೆ ಬಿಡುಗಡೆಗೊಳಿಸಲಿದ್ದಾರೆ.

ಕತರ್‌ನ ಕರ್ನಾಟಕ ಕಲ್ಚರಲ್ ಫೌಂಡೇಶನ್ (ಕೆಸಿಎಫ್) ದೋಹಾದ ಇಂಡಿಯಲ್ ಕಲ್ಚರಲ್ ಸೆಂಟರ್‌ನಲ್ಲಿ ಹಮ್ಮಿಕೊಂಡ ಈ ಕಾರ್ಯಕ್ರಮದಲ್ಲಿ ರಾಜ್ಯ ಎಸ್ಸೆಸ್ಸೆಫ್ ಅಧ್ಯಕ್ಷ, ರಾಜ್ಯ ವಕ್ಫ್ ಮಂಡಳಿ ನಿರ್ದೇಶಕ ಶಾಫಿ ಸಅದಿ ಮುಖ್ಯ ಭಾಷಣ ಮಾಡುವರು. ತಲಕ್ಕಿ ತಂಙಳ್ ದುಆಕ್ಕೆ ನೇತೃತ್ವ ನೀಡಲಿದ್ದು, ತಾಪಂ ಸದಸ್ಯ ಅಬ್ದುಲ್ ಜಬ್ಬಾರ್ ಬೋಳಿಯಾರ್, ಕೆಸಿಎಫ್ ಅಂತಾರಾಷ್ಟ್ರೀಯ ಕೌನ್ಸಿಲ್‌ನ ನಾಲೆಡ್ಜ್ ವಿಭಾಗದ ಕಾರ್ಯದರ್ಶಿ ಖಮರುದ್ದೀನ್ ಭಾಗವಹಿಸಲಿದ್ದಾರೆ ಎಂದು ಪ್ರಕಟನೆ ತಿಳಿಸಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News