ದಮ್ಮಾಮ್ನಲ್ಲಿ ಎಸ್ಸೆಸ್ಸೆಫ್ ಧ್ವಜ ದಿನಾಚರಣೆ
ದಮ್ಮಾಮ್, ಸೆ.22: ಎಸ್ಸೆಸ್ಸೆಫ್ ದಮ್ಮಾಮ್ ಸೌದಿ ಅರೇಬಿಯಾ ಇದರ ವತಿಯಿಂದ ಎಸ್ಸೆಸ್ಸೆಫ್ ಧ್ವಜ ದಿನವನ್ನು ಇತ್ತೀಚೆಗೆ ಆಚರಿಸಲಾಯಿತು.
ಇಲ್ಲಿನ ಸಅದಿಯ ಹಾಲ್ನಲ್ಲಿ ಜರಗಿದ ಕಾರ್ಯಕ್ರಮದ ಅಧ್ಯಕ್ಷತೆಯನ್ನು ದವಾಸಿರ್ ಸೆಕ್ಟರ್ ಅಧ್ಯಕ್ಷ ಹಬೀಬ್ ಸಖಾಫಿ ವಹಿಸಿದ್ದರು.
ಕಾರ್ಯಕ್ರಮ ಉದ್ಘಾಟಿಸಿದ ಸೈಯದ್ ಶರಫುದ್ದೀನ್ ತಂಙಳ್ ದುಆ ನೆರವೇರಿಸಿದರು.
ಕರ್ನಾಟಕ ರಾಜ್ಯ ಎಸ್ಸೆಸ್ಸೆಫ್ ಮಾಜಿ ರಾಜ್ಯಾಧ್ಯಕ್ಶ ಯೂಸುಫ್ ಸಅದಿ ಅಯ್ಯಂಗೇರಿ ಧ್ವಜಾರೋಹಣಗೈದು ಮುಖ್ಯ ಭಾಷಣ ಮಾಡಿದರು.
ಸೈಯದ್ ಶುಕೂರ್ ತಂಙಳ್ ನೇತೃತ್ವ್ವದಲ್ಲಿ ಎಸ್ಸೆಸ್ಸೆಫ್ ಪಥ ಸಂಚಲನ ನಡೆಯಿತು.
ಆಸಿಫ್ ಕೃಷ್ಣಾಪುರ ಕವನ ವಾಚಿಸಿದರು. ಕೆಸಿಎಫ್ ರೆನಲ್ ಕಾರ್ಯದರ್ಶಿ ಫೈಝಲ್ ಕೃಷ್ಣಾಪುರ, ಅಝೀಝ್ ಹನೀಫಿ, ಶಫೀಕ್ ಕಾಟಿಪಳ್ಳ, ಆಸಿಫ್ ಪುತ್ತೂರು, ಅಶ್ರಫ್ ಕುತ್ತಾರು, ನಾಸಿರ್ ಎಚ್.ಕಲ್ಲು ಉಪಸ್ಥಿತರಿದ್ದರು.
ಕೆಸಿಎಫ್ ಸೌದಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಫಾರೂಕ್ ಕಾಟಿಪಳ್ಳ ಸ್ವಾಗತಿಸಿದರು. ಕಾರ್ಯದರ್ಶಿ ಇಕ್ಬಾಲ್ ಕೈರಂಗಳ ವಂದಿಸಿದರು.