ಕಾರು ಢಿಕ್ಕಿ: ಶಾರ್ಜದಲ್ಲಿ ಭಾರತದ ವ್ಯಕ್ತಿ ಮೃತ್ಯು

Update: 2016-09-27 07:25 GMT

ಶಾರ್ಜ, ಸೆ. 27: ರಸ್ತೆ ಅಪಘಾತದಲ್ಲಿ ತಿರುವನಂತಪುರದ ವ್ಯಕ್ತಿಯೊಬ್ಬರು ಮೃತರಾಗಿದ್ದಾರೆ. ರಸ್ತೆದಾಟುತ್ತಿದ್ದಾಗ ಕಾರು ಢಿಕ್ಕಿಯಾದ್ದರಿಂದ ದುಬೈ ಆರ್.ಟಿ.ಐ ಬಸ್ ಚಾಲಕ ಬಾಬುಸುಬ್ರಹ್ಮಣ್ಯಂ(44) ಮೃತರಾದರೆಂದು ವರದಿಯಾಗಿದೆ.

ಅವರ ಜೊತೆಯಲ್ಲೇ ರಸ್ತೆ ದಾಟುತ್ತಿದ್ದ ಸಹೋದ್ಯೋಗಿ ಕಾಸರಗೋಡಿನ ಉಮೇಶ್ ಎಂಬವರು ಗಾಯಗೊಂಡಿದ್ದು ಆಸ್ಪತ್ರೆಗೆ ಸೇರಿಸಲಾಗಿದೆ. ಅಲ್‌ಇತ್ತಿಹಾದ್ ರಸ್ತೆಯಲ್ಲಿ ಸಫೀರ್ ಮಾಲ್‌ನ ಸಮೀಪ ರವಿವಾರ ಬೆಳಗ್ಗೆ ಎಂಟುಗಂಟೆಯ ವೇಳೆಗೆ ಅಪಘಾತ ನಡೆದಿದೆ.

 ಇಬ್ಬರೂ ರೂಮ್‌ಮೇಟ್‌ಗಳಾಗಿದ್ದು ಜೊತೆಯಾಗಿ ಕೆಲಸದೆಡೆಗೆ ಹೋಗಲು ರಸ್ತೆದಾಟುತ್ತಿದ್ದಾಗ ವೇಗವಾಗಿ ಬಂದ ಕಾರು ಇಬ್ಬರಿಗೂ ಢಿಕ್ಕಿ ಹೊಡೆದಿತ್ತು. ಬಾಬು ಸುಬ್ರಹ್ಮಣ್ಯಂ ಸ್ಥಳದಲ್ಲೇ ಮೃತರಾಗಿದ್ದಾರೆ. ಕಳೆದ 24ವರ್ಷಗಳಿಂದ ಇವರು ಯುಎಇಯಲ್ಲಿ ಕೆಲಸಮಾಡುತ್ತಿದ್ದಾರೆ. ಹದಿಮೂರು ವರ್ಷಗಳಿಂದ ಆರ್‌ಟಿಐಯಲ್ಲಿ ಚಾಲಕನಾಗಿ ದುಡಿಯುತ್ತಿದ್ದರು. ಅವರ ಮೃತದೇಹವನ್ನು ಊರಿಗೆ ಕೊಂಡೊಯ್ಯುವುದಕ್ಕೆ ಅಗತ್ಯವಾದ ಕ್ರಮಗಳು ನಡೆಯುತ್ತಿವೆ ಎಂದು ವರದಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News