ಕೆಸಿಎಫ್ ದಮ್ಮಾಮ್ ಸೆಕ್ಟರ್‌ಗೆ ಪದಾಧಿಕಾರಿಗಳ ಆಯ್ಕೆ

Update: 2016-11-30 07:00 GMT

ದಮ್ಮಾಮ್, ನ.30: ಕೆಸಿಎಫ್ ದಮ್ಮಾಮ್ ರೆನ್ ಅಧೀನದಲ್ಲಿ ಕಾರ್ಯಾಚರಿಸುತ್ತಿರುವ ದಮ್ಮಾಮ್ ಸೆಕ್ಟರ್‌ನ ಮಹಾಸಭೆಯು ಇತ್ತೀಚೆಗೆ ನಡೆಯಿತು. ಇದೇ ವೇಳೆ ನೂತನ ಪದಾಧಿಕಾರಿಗಳ ಆಯ್ಕೆ ಇತ್ತೀಚೆ ನಡೆಯಿತು.

ರೆನ್ ಅಧ್ಯಕ್ಷ ಅಝೀಝ್ ಸಅದಿ ಸಭೆಯನ್ನು ಉದ್ಘಾಟಿಸದರು. ಅಧ್ಯಕ್ಷತೆ ವಹಿಸಿದ್ದ ಸೆಕ್ಟರ್ ಅಧ್ಯಕ್ಷ ಹಬೀಬ್ ಸಖಾಫಿ ವಹಿಸಿ ದುಆ ನೆರೆವೇರಿಸಿದರು. ಸೌದಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಫಾರೂಕ್ ಕಾಟಿಪಳ್ಳ ಪ್ರಾಸ್ತಾವಿಕ ಭಾಷಣ ಮಾಡಿದರು. ಕೆಸಿಎಫ್ ಐ.ಎನ್.ಸಿ ನಾಯಕ ಅಬೂಬಕರ್ ಪಡುಬಿದ್ರೆ, ಕರ್ನಾಟಕ ಸುನ್ನಿ ವಿದ್ಯಾರ್ಥಿ ಸಂಘಟನೆಯ ಮಾಜಿ ರಾಜ್ಯಾಧ್ಯಕ್ಷ, ಸಅದಿಯ ದಮ್ಮಾಮ್ ಸಂಘಟಕ ಯೂಸುಫ್‌ಸಅದಿ ಅಯ್ಯಂಗೇರಿ ಮಾತನಾಡಿ ನೂತನ ಸಮಿತಿಗೆ ಶುಭ ಕೋರಿದರು.
 
ಅಲ್ ರಬೀ ಘಟಕದ ಅಧ್ಯಕ್ಷ ಅಬೂಬಕರ್ ಕೋಡಿ, ಟೊಯೋಟ ಘಟಕದ ಅಧ್ಯಕ್ಷ ಮುಹಮ್ಮದ್ ಸಖಾಫಿ ತಲಕ್ಕಿ ಉಪಸ್ಥಿತರಿದ್ದರು. ದವಾಸಿರ್ ಯೂನಿಟ್ ಅಧ್ಯಕ್ಷ ಖಾದರ್ ಝೈನಿ ಸ್ವಾಗತಿಸಿದರು. ನೂತನ ಪ್ರ.ಕಾರ್ಯದರ್ಶಿ ತಮೀಮ್ ಕೂಳೂರು ವಂದಿಸಿದರು.
ಇದೇ ವೇಳೆ ಸೆಕ್ಟರ್ ಸಮಿತಿಗೆ ನೂತನ ಪದಾಧಿಕಾರಿಗಳ ಆಯ್ಕೆ ರೆನ್ ಸಂಘಟನಾ ಕನ್ವೀನರ್ ಫಯಾಝ್ ಪಕ್ಷಿಕೆರೆ ನೇತೃತ್ವದಲ್ಲಿ ನಡೆಯಿತು.
ಅಧ್ಯಕ್ಷರರಾಗಿ ಹಬೀಬ್ ಸಖಾಫಿ ಕುತ್ತಾರು, ಪ್ರ. ಕಾರ್ಯದಶಿಯಾಗಿ ತಮೀಮ್ ಕೂಳೂರು ಹಾಗೂ ಕೋಶಾಧಿಕಾರಿಯಾಗಿ ಬಶೀರ್ ಇಂದ್ರಾಜೆ ಆಯ್ಕೆಯಾದರು.
ಸೆಕ್ಟರ್‌ನಿಂದ ಝೋನಲ್ ಕೌನ್ಸಿಲರ್‌ಗಳಾಗಿ ಫಾರೂಕ್ ಕುಪ್ಪೆಟ್ಟಿ, ಅದ್ನಾನ್ ಪೂಲಬೆ, ಶಫೀಕ್ ಕಾಟಿಪಳ್ಳ, ಇಕ್ಬಾಲ್ ಕೈರಂಗಳ, ಫೈಝಲ್ ಕೃಷ್ಣಾಪುರರನ್ನು ಆಯ್ಕೆ ಮಾಡಲಾಯಿತು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News