ದುಬೈ: ಅಂತರ್ ಶಾಲಾ ಕಿರಾಅತ್ ಸ್ಪರ್ಧೆಯಲ್ಲಿ ರಹೀಶ್ ಅಹ್ಮದ್ ಪ್ರಥಮ
Update: 2017-02-08 17:37 GMT
ದುಬೈ, ಜ. 24 : ದುಬೈನ ಜೆಮ್ಸ್ ಅವರ್ ಓನ್ ಇಂಗ್ಲಿಷ್ ಹೈ ಸ್ಕೂಲ್ ನಲ್ಲಿ ಇತ್ತೀಚಿಗೆ ನಡೆದ ಜೂನಿಯರ್ ಅಂತರ್ ಶಾಲಾ ಕಿರಾಅತ್ ಸ್ಫರ್ಧೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿಯ ರಹೀಶ್ ಅಹ್ಮದ್ ಪ್ರಥಮ ಸ್ಥಾನ ಪಡೆದಿದ್ದಾನೆ.
ರಹೀಶ್ ಅಹ್ಮದ್ ಉಪ್ಪಿನಂಗಡಿಯ ಅಹಮದ್ ಬಾವ ಹಾಗೂ ಮೈಮುನಾ ದಂಪತಿಯ ಪುತ್ರ. ರಹೀಶ್ ದುಬೈನ ಜೆಮ್ಸ್ ಅವರ್ ಓನ್ ಇಂಗ್ಲಿಷ್ ಹೈ ಸ್ಕೂಲ್ ನಲ್ಲಿ ೨ನೆ ತರಗತಿಯಲ್ಲಿ ಕಲಿಯುತ್ತಿದ್ದಾನೆ.
ಈ ಸ್ಪರ್ಧೆಯಲ್ಲಿ ವಿವಿಧ ದೇಶಗಳ, ೨೫ ಶಾಲೆಗಳ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.