ದುಬೈಯಲ್ಲಿ ಭಾರತದ ವ್ಯಕ್ತಿ ಹೃದಯಾಘಾತದಿಂದ ನಿಧನ
Update: 2017-03-05 10:39 GMT
ದುಬೈ,ಮಾ. 5: ರಾಸಲ್ಖೈಮದ ರಂಸಿಯ ಖಾಸಗಿ ಕಂಪೆನಿಯಲ್ಲಿ ಮೆಕ್ಯಾನಿಕ್ ಆಗಿ ದುಡಿಯುತ್ತಿದ್ದ ತೆಂಞಿಪಾಲಂ ಕಡಕ್ಕಾಟ್ಟುಪಾರ ಮುನೀರ್(26) ಹೃದಯಾಘಾತದಿಂದ ನಿಧನರಾಗಿದ್ದಾರೆ. ಶನಿವಾರ ಬೆಳಗ್ಗೆ ಕೋಣೆಯಲ್ಲಿ ಮಲಗಿದ್ದಲ್ಲಿಯೆ ಅವರು ಕೊನೆಯುಸಿರು ಎಳೆದರು.
ಕಳೆದ ರಜೆಯಲ್ಲಿ ಊರಿಗೆ ಹೋಗಿ ಮದುವೆ ಯಾಗಿ ಮುನೀರ್ ರಾಸಲ್ ಖೈಮಕ್ಕೆ ಮರಳಿ ಬಂದಿದ್ದರು. ಅವರು ಮದುವೆಯಾಗಿ ಮೂರು ತಿಂಗಳಷ್ಟೇ ಆಗಿದೆ. ರವಿವಾರ ಅಸರ್ ನಮಾಝ್ ಬಳಿಕ ಸೈಫ್ ಹಾಸ್ಪಿಟಲ್ ಮಸೀದಿಯಲ್ಲಿ ಜನಾಝ ನಮಾಝ್ ನಿರ್ವಹಿಸಿದ ಬಳಿಕ ಮೃತದೇಹವವನ್ನು ಊರಿಗೆ ಕೊಂಡುಹೋಗಲಾಗುವುದು ಎಂದು ವರದಿ ತಿಳಿಸಿದೆ.