ದುಬೈ: ದಾರುನ್ನೂರ್ ವತಿಯಿಂದ ಭಾವಿ ಸಮಾರಂಭ ಸಮಾಲೋಚನಾ ಸಭೆ

Update: 2017-03-18 17:44 GMT

ದುಬೈ, ಮಾ.18: ದಾರುನ್ನೂರ್ ಎಜುಕೇಶನ್ ಸೆಂಟರ್ ಕಾಶಿಪಟ್ನ ಮೂಡಬಿದ್ರಿ ಇದರ ಯುಎಇ ಕಲ್ಚರಲ್ ಸೆಂಟರ್ ವತಿಯಿಂದ ಮಾ.17ರಂದು ಸಂಜೆ 5:30 ಕ್ಕೆ ದೇರಾ ದುಬೈಯಲ್ಲಿರುವ ಫ್ಲೋರಾ ಹೋಟೆಲ್ ಅಪಾರ್ಟ್ ಮೆಂಟ್ ನಲ್ಲಿ ದಾರುನ್ನೂರ್ ವತಿಯಿಂದ ನಡೆಸಲ್ಪಡುವ ವಿವಿಧ ಭಾವಿ ಕಾರ್ಯಕ್ರಮಗಳ ಸಮಾಲೋಚನಾ ಸಭೆಯು ಸಲೀಂ ಅಲ್ತಾಫ್ ಫರಂಗಿಪೇಟೆಯವರ ಅಧ್ಯಕ್ಷತೆಯಲ್ಲಿ ನಡೆಯಿತು.

ಉಸ್ತಾದ್ ಶರೀಫ್ ಅಶ್ರಫಿಯವರ ಮೊಡಂತ್ಯಾರ್ ರವರ ದುಆ ನೆರವೇರಿಸಿದರು. ದಾರುನ್ನೂರ್ ಇಂಟರ್ ನ್ಯಾಷನಲ್ ಸಿಟಿ ಶಾಖೆಯ ಅಧ್ಯಕ್ಷ  ಸನಾವುಲ್ಲಾ ಗಡಿಯಾರ್  ಸ್ವಾಗತಿಸಿದರು. ಕಾರ್ಯಕ್ರಮವನ್ನು ಉಪಾಧ್ಯಕ್ಷ ಮಹಮ್ಮದ್ ಮಾಡಾವು ಉದ್ಘಾಟಿಸಿದರು.

ಬಳಿಕ ದಾರುನ್ನೂರ್ ಯುಎಇ ಕಲ್ಚರಲ್ ಸೆಂಟರ್ ಅಧೀನದಲ್ಲಿ ಬೇರೆ ಬೇರೆ ಸ್ಟೇಟ್ ಸಮಿತಿಗಳನ್ನು ರಚಿಸುವ ಬಗ್ಗೆ ಚರ್ಚಿಸಲಾಯಿತು.  ಎಪ್ರಿಲ್ ತಿಂಗಳಲ್ಲಿ ಈ ಕಾರ್ಯವನ್ನು ಮುಗಿಸಲು ಅನ್ಸಾಫ್ ಪಾತೂರ್ ರವರನ್ನು ಇಲೆಕ್ಷನ್ ಆಫೀಸರ್ ಆಗಿ ನೇಮಿಸಲಾಯಿತು.

2017 ರ ಜೂನ್ ತಿಂಗಳ 9 ನೇ ತಾರೀಕಿನಂದು ನಡೆಯಲಿರುವ ದಾರುನ್ನೂರ್ ಬೃಹತ್ ಇಫ್ತಾರ್ ಕೂಟವನ್ನು ಯಶಸ್ವಿಯಾಗಿ ಮತ್ತು  ಉತ್ತಮವಾದ ರೀತಿಯಲ್ಲಿ ವ್ಯವಸ್ಥಿತ ತಾಣದಲ್ಲಿ ನಡೆಸುವುದಾಗಿ  ಈ ಮೊದಲೇ ತೀರ್ಮಾನಿಸಿದ್ದು ಅದಕ್ಕಾಗಿ ಸ್ವಾಗತ ಸಮಿತಿಯನ್ನು ರಚಿಸಲಾಯಿತು..

ಸಮಿತಿಯ ಅಧ್ಯಕ್ಷರಾಗಿ, ಮಹಮ್ಮದ್ ರಫೀಕ್ ಸುರತ್ಕಲ್, ಕೋ ಅಧ್ಯಕ್ಷರಾಗಿ ಸಂಶುದ್ದೀನ್ ಸೂರಲ್ಪಾಡಿ, ಕಾರ್ಯದರ್ಶಿಯಾಗಿ ನವಾಝ್ ಬಿ.ಸಿ ರೋಡ್, ಸಹ ಕಾರ್ಯದರ್ಶಿಯಾಗಿ ಸಾಜಿದ್ ಬಜ್ಪೆ, ಕೋಶಾಧಿಕಾರಿಯಾಗಿ, ಸುಲೈಮಾನ್ ಮೌಲವಿ ಕಲ್ಲೆಗ ಅವರನ್ನು ನೇಮಿಸಲಾಯಿತು.

ಕಾರ್ಯಕ್ರಮದ ಸಂಘಟಕರನ್ನಾಗಿ ಮಹಮ್ಮದ್ ಮುಸ್ತಾಕ್  ಕದ್ರಿ ಮಂಗಳೂರು, ಸಲೀಂ ಅಲ್ತಾಫ್ ಫರಂಗಿಪೇಟೆ, ಬದ್ರುದ್ದೀನ್ ಹೆಂತಾರ್, ಅಬ್ದುಲ್ ಸಲಾಂ ಬಪ್ಪಳಿಗೆ, ರವೂಫ್ ಹಾಜಿ ಕೈಕಂಬ,  ಸಮೀರ್ ಇಬ್ರಾಹಿಂ ಕಲ್ಲರೆ, ಮಹಮ್ಮದ್ ರಫೀಕ್ ಆತೂರು, ಅನ್ಸಾಫ್ ಪಾತೂರು, ಹಮೀದ್ ಮನಿಲ, ಮಹಮ್ಮದ್ ಮಾಡಾವು, ಮುಸ್ತಾಕ್ ಮಹಮ್ಮದ್  ತೋಡಾರ್, ಶಾಫಿ ಗಂಟಲ್ ಕಟ್ಟೆ, ಉಸ್ಮಾನ್ ಕೆಮ್ಮಿಂಜೆ,ಅಶ್ರಫ್ ಪರ್ಲಡ್ಕ, ಶಾಕಿರ್ ಕುಪ್ಪೆ ಪದವು,  ಸಫಾ ಇಸ್ಮಾಯೀಲ್  ಬಜ್ಪೆ,  ಇಲ್ಯಾಸ್ ಕಡಬ, ಸುಲೈಮಾನ್ ಗಡಿಯಾರ್, ಹನೀಫ್ ಕೆ.ಪಿ ಮೂಡಬಿದ್ರಿ, ಅಬ್ದುಲ್ ರಝಾಕ್ ಕಾರಾಯಿ ನೇಮಿಸಲಾಯಿತು.

ಮಸ್ಜಿದ್ ಬಹ್ರ್ ಅನ್ನೂರ್ ಇದರ ಉದ್ಘಾಟನಾ ಕಾರ್ಯಕ್ರಮದ ಮತ್ತು ಮರುದಿವಸ ನಡೆದ ಜುಮಾ ನಮಾಝಿನ ಬಗ್ಗೆ ಸಂಪೂರ್ಣ ವಿವರವನ್ನು ದಾರುನ್ನೂರ್ ಅಬುಧಾಬಿ ಸ್ಟೇಟ್ ಅಧ್ಯಕ್ಷ ರವೂಫ್ ಹಾಜಿ ಕೈಕಂಬ ನೀಡಿದರು.

ಮಂಗಳೂರಿನಲ್ಲಿ ದಾರುನ್ನೂರ್ ಕೇಂದ್ರ ಸಮಿತಿ ಪ್ರಮುಖರೊಂದಿಗೆ ನಡೆದ ವಿಶೇಷ ಸಭೆಯ ವಿವರವನ್ನು ದಾರುನ್ನೂರ್ ಯುಎಇ ಉಪಾಧ್ಯಕ್ಷ ಸಂಶುದ್ದೀನ್ ಸೂರಲ್ಪಾಡಿ ನೀಡಿದರು.

ದಾರುನ್ನೂರ್ ಯುಎಇ ಕಲ್ಚರಲ್ ಸಮಿತಿಯ ಅಧೀನದಲ್ಲಿರುವ ಎಲ್ಲಾ ಶಾಖೆಗಳ ಪ್ರಮುಖರು ತಮ್ಮ ತಮ್ಮ ಶಾಖೆಗಳ ಕಾರ್ಯ ವೈಖರಿಯನ್ನು ವಿವರಿಸಲು ಅನುವು ಮಾಡಲಾಗಿತ್ತು. ಅಧ್ಯಕ್ಷ ಸಲೀಂ ಅಲ್ತಾಫ್ ರವರು ರಾತ್ರಿಯ ಭೋಜನದ ವ್ಯವಸ್ಥೆ ಏರ್ಪಡಿಸಿದ್ದರು.

ದಾರುನ್ನೂರ್ ಯೂತ್ ಟೀಮ್ ಇದರ ಕೋಶಾಧಿಕಾರಿ ಇಫ್ತಿಕಾರ್ ಅಡ್ಯಾರ್ ಕಣ್ಣೂರ್ ವಂದನಾರ್ಪಣೆಗೈದರು. ಕಾರ್ಯಕ್ರಮವನ್ನು ಬದ್ರುದ್ದೀನ್ ಹೆಂತಾರ್ ನಿರೂಪಿಸಿದರು.

Writer - ಬದ್ರುದ್ದೀನ್ ಹೆಂತಾರ್

contributor

Editor - ಬದ್ರುದ್ದೀನ್ ಹೆಂತಾರ್

contributor

Similar News