ಕೆಸಿಎಫ್ ಗೊರ್ನಾಥ ಸೆಕ್ಟರ್‌ಗೆ ನೂತನ ಪದಾಧಿಕಾರಿಗಳ ಆಯ್ಕೆ

Update: 2017-03-19 06:36 GMT

ರಿಯಾದ್, ಮಾ.19: ಕರ್ನಾಟಕ ಕಲ್ಚರಲ್ ಫೌಂಡೇಶನ್(ಕೆಸಿಎಫ್) ರಿಯಾದ್ ಝೋನಲ್ ಅಧೀನದಲ್ಲಿರುವ ಕೆಸಿಎಫ್ ಗೊರ್ನಾಥ ಸೆಕ್ಟರ್ ಇದರ 4ನೆ ವಾರ್ಷಿಕ ಮಹಾಸಭೆಯು ಇತ್ತೀಚೆಗೆ ಗೊರ್ನಾಥದಲ್ಲಿ ನಡೆಯಿತು.

ಸಭೆಯನ್ನು ರಶೀದ್ ಮದನಿ ಉರುವಾಲುಪದವು ಉದ್ಘಾಟಿಸಿದರು. ಸೆಕ್ಟರ್ ಅಧ್ಯಕ್ಷ ಹಾಜಿ ಸಿತಾರ್ ಮುಹಮ್ಮದ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

ರಿಯಾದ್ ರೆನಲ್ ಶಿಕ್ಷಣ ವಿಭಾಗದ ಚೆಯರ್‌ಮೆನ್ ಅಬ್ದುಲ್ಲಾ ಸಖಾಫಿ ಉಸ್ತಾದ್ ‘ಜೀವನ ನಾಡಿಗಾಗಿ, ನಾಳೆಗಾಗಿ’ ಎಂಬ ವಿಷಯದ ಕುರಿತು ಉಪನ್ಯಾಸ ನೀಡಿದರು.

2015-16ನೆ ಸಾಲಿನ ವರದಿ ಹಾಗೂ ಲೆಕ್ಕ ಪತ್ರವನ್ನು ಸೆಕ್ಟರ್ ಪ್ರಧಾನ ಕಾರ್ಯದರ್ಶಿ ನವಾಝ್ ಚಿಕ್ಕಮಗಳೂರು ಮಂಡಿಸಿದರು. ನೂತನ ಸಮಿತಿ ರಚನೆಯ ನೇತೃತ್ವವನ್ನು ರಿಯಾದ್ ರೆನಲ್ ಜತೆ ಕಾರ್ಯದರ್ಶಿ ಬಶೀರ್ ತಲಪಾಡಿ ವಹಿಸಿದ್ದರು.

ಬದಿಯಾ ಸೆಕ್ಟರ್ ಅಧ್ಯಕ್ಷ ಉಮರ್ ಅಳಕೆಮಜಲು, ಪ್ರಧಾನ ಕಾರ್ಯದರ್ಶಿ ಮಜೀದ್ ವಿಟ್ಲ, ಶಿಫಾ ಸೆಕ್ಟರ್ ಪ್ರಧಾನ ಕಾರ್ಯದರ್ಶಿ ಮುಸ್ತಫಾ ಬಜ್ಪೆನೂತನ ಸಮಿತಿಗೆ ಶುಭ ಹಾರೈಸಿದರು. ನ್ಯೂಸನಯ್ಯ ಘಟಕದ ನೂತನ ಅಧ್ಯಕ್ಷ ಹಂಝ ಜಲ್ಸೂರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಇದೇ ವೇಳೆ ಕೆ.ಸಿ.ಎಫ್. ಸೌದಿ ರಾಷ್ಟ್ರೀಯ ಸಮಿತಿ ಕಳೆದ ಸಾಲಿನಲ್ಲಿ ನಡೆಸಿದ ಅಸ್ಸುಫ್ಫ ತರಗತಿ ಪರೀಕ್ಷೆಯಲ್ಲಿ ರಿಯಾದ್ ರೆನಲ್ ಮಟ್ಟದಲ್ಲಿ ಪ್ರಥಮ ಸ್ಥಾನಿಯಾಗಿ ತೇರ್ಗಡೆ ಹೊಂದಿದ ರಮೀಝ್ ಕುಳಾಯಿಯವರನ್ನು ಸೆಕ್ಟರ್ ವತಿಯಿಂದ ಸನ್ಮಾನಿಸಲಾಯಿತು.

ಸುಲೈಮಾನ್ ಸಅದಿ ಕಿರಾಅತ್ ಪಠಿಸಿದರು. ನಝೀರ್ ಕಕ್ಕಿಂಜೆ ಸ್ವಾಗತಿಸಿದರು. ಹಸೈನಾರ್ ಕಾಟಿಪಳ್ಳ ವಂದಿಸಿದರು. ರಮೀಝ್ ಕುಳಾಯಿ ಕಾರ್ಯಕ್ರಮ ನಿರೂಪಿಸಿದರು.


2017-18ನೆ ಸಾಲಿನ ನೂತನ ಸಮಿತಿ

ಅಧ್ಯಕ್ಷ: ಮುಹಮ್ಮದ್ ಸಿತಾರ್ ಹಾಜಿ
ಪ್ರ. ಕಾರ್ಯದರ್ಶಿ: ನಝೀರ್ ಕಕ್ಕಿಂಜೆ
ಕೋಶಾಧಿಕಾರಿ: ಝಾಕಿರ್ ಪಂಜ
ಸಂಘಟನಾ ಅಧ್ಯಕ್ಷ: ರಶೀದ್ ಮದನಿ
ಸಂಘಟನಾ ಕಾರ್ಯದರ್ಶಿ: ಬಶೀರ್ ಮೂರುಗೋಳಿ

ನಾಲೆಡ್ಜ್ ಪ್ರೆಸಿಡೆಂಟ್: ಉಸ್ಮಾನ್ ಸಅದಿ
ನಾಲೆಡ್ಜ್ ಸೆಕ್ರೆಟರಿ: ಸ್ವಾಲಿಹ್ ಲತೀಫಿ

ಅಡ್ಮಿನಿಸ್ಟ್ರೇಶನ್ ಪ್ರೆಸಿಡೆಂಟ್: ಹಸೈನಾರ್ ಕಾಟಿಪಳ್ಳ
ಅಡ್ಮಿನಿಸ್ಟ್ರೇಶನ್ ಸೆಕ್ರೆಟರಿ: ಅಬ್ದುಲ್ಲ ಹಾಜಿ

ವೆಲ್ಫೇರ್ ಪ್ರೆಸಿಡೆಂಟ್: ಸಫ್ವಾನ್ ಬಿಜೈ
ವೆಲ್ಫೇರ್ ಸೆಕ್ರೆಟರಿ: ಖಾದರ್ ಕೆ.ಸಿ.ರೋಡ್

ಪಬ್ಲಿಕೇಶನ್ ಪ್ರೆಸಿಡೆಂಟ್: ಶರೀಫ್ ಪಲ್ಲತ್ತೂರು
 ಪಬ್ಲಿಕೇಶನ್ ಸೆಕ್ರೆಟರಿ: ಶಾಫಿ ಮಲ್ಲೂರು

ಕಾರ್ಯಕಾರಿ ಸಮಿತಿ ಸದಸ್ಯರು:
 ರಮೀಝ್ ಕುಳಾಯಿ
ನವಾಝ್ ಚಿಕ್ಕಮಗಳೂರು
ಫಾರೂಕ್ ಕಕ್ಕಿಂಜೆ
ಅಶ್ರಫ್ ಕರವೇಲ್
ಜಾಫರ್ ಉರುವಾಲ್ಪದವು
ಜಾಬಿರ್ ಕಲಂಜಿಬೈಲ್
ಶಬೀರ್ ಬ್ರಹ್ಮರಕೂಟ್ಲು
ಉಬೈದ್ ವಗ್ಗ
ರಫೀಕ್ ಸರಳಿಕಟ್ಟೆ
ಫಾರೂಕ್ ಬೈರಿಕಟ್ಟೆ
ಮುಹಮ್ಮದ್ ರಾಫಿ ಕೆಮ್ಮಾರ
ಅಬ್ಬಾಸ್ ಉರುವಾಲ್‌ಪದವು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News