ಕೆ.ಸಿ.ಎಫ್ ಬುರೈದ ಸೆಕ್ಟರ್ ಇದರ ವಾರ್ಷಿಕ ಮಹಾಸಭೆ
ಬುರೈದ, ಮಾ.27: ಕರ್ನಾಟಕ ಕಲ್ಚರಲ್ ಫೌಂಡೇಶನ್ ರಿಯಾದ್ ಝೋನಲ್ ಅಧೀನದಲ್ಲಿರುವ ಕೆ.ಸಿ.ಎಫ್ ಬುರೈದ ಸೆಕ್ಟರ್ ಇದರ ವಾರ್ಷಿಕ ಮಹಾಸಭೆ ಕೆಸಿಎಫ್ ಸೆಂಟರ್ ನಲ್ಲಿ ಅಬ್ಬಾಸ್ ಸಖಾಫಿ ಎರ್ಮಾಡ್ ರವರ ಅಧ್ಯಕ್ಷತೆಯಲ್ಲಿ ನಡೆಯಿತು.
ಸಭೆಯ ಉದ್ಘಾಟನೆಯನ್ನು ಮಾಟೂರು ತಂಞಳ್ ರವರು ನೆರವೇರಿಸಿದರು. ರಿಯಾದ್ ಝೋನಲ್ ನೇತಾರ ಎ.ಕೆ.ನವಾಝ್ ಸಖಾಫಿ ಅಡ್ಯಾರ್ ಪದವು "ಜೀವನ ನಾಡಿಗಾಗಿ, ನಾಳೆಗಾಗಿ ಎಂಬ ವಿಷಯದ ಕುರಿತು ಸವಿಸ್ತಾರವಾದ ಉಪನ್ಯಾಸ ನೀಡಿದರು.
2015-16ನೆ ಸಾಲಿನ ವರದಿಯನ್ನು ಪ್ರಧಾನ ಕಾರ್ಯದರ್ಶಿ ವಾಚಿಸಿ ಲೆಕ್ಕ ಪತ್ರವನ್ನು ಕೋಶಾಧಿಕಾರಿ ಮಾಲಿಕ್ ಸೂರಿಂಜೆ ಮಂಡಿಸಿದರು. ನೂತನ ಸಮಿತಿ ರಚನೆಯ ನೇತೃತ್ವವನ್ನು ರಿಯಾದ್ ಝೋನಲ್ ಕಾರ್ಯನಿರ್ವಾಹಕ ಕಾರ್ಯದರ್ಶಿ ಸಲೀಂ ಕನ್ಯಾಡಿ ವಹಿಸಿದ್ದರು. ರಿಯಾದ್ ಬದಿಯ ಸೆಕ್ಟರ್ ಕಾರ್ಯದರ್ಶಿ ಅಬ್ದುಲ್ ಮಜೀದ್ ವಿಟ್ಲ ಹಾಗೂ. ಅಶ್ರಫ್ ಅಂಜದಿ, ಮುಸ್ತಫ ಹಾಸನ ನೂತನ ಸಮಿತಿಗೆ ಶುಭ ಹಾರೈಸಿದರು.
ಮೊದಲಿಗೆ ಸುಹೈಲ್ ಸೂರಿಂಜೆ ಕಿರಾಅತ್ ಪಠಿಸಿದರು .ಸ್ವಾಲಿಹ್ ಬೆಳ್ಳಾರೆ ಸ್ವಾಗತಿಸಿ . ಕೊನೆಯಲ್ಲಿ ನೂತನ ಕಾರ್ಯದರ್ಶಿ ಇರ್ಷಾದ್ ಸಚ್ಚರಿಪೇಟೆ ಧನ್ಯವಾದ ಮಾಡಿದರು.
2017 -19 ನೇ ಸಾಲಿನ ನೂತನ ಸಮಿತಿ ವಿವರ :
ಪದಾಧಿಕಾರಿಗಳು:
ಅಧ್ಯಕ್ಷರು - ಅಬ್ಬಾಸ್ ಸಖಾಫಿ ಎರ್ಮಾಡ್
ಪ್ರ. ಕಾರ್ಯದರ್ಶಿ - ಇರ್ಷಾದ್ ಸಚ್ಚರಿಪೇಟೆ
ಕೋಶಾಧಿಕಾರಿ - ಸಲೀಂ ಕೆಮ್ಮಾರ
ಆರ್ಗನೈಝೇಶನ್ ಪ್ರೆಸಿಡೆಂಟ್: ರಝಾಕ್ ಸಜಿಪ
ಆರ್ಗನೈಝೇಶನ್ ಸೆಕ್ರೆಟರಿ: ಸೆಯ್ಯದ್ ವೈಯಂಕೆ
ನೋಲೆಜ್ ಪ್ರೆಸಿಡೆಂಟ್: ಅಶ್ರಫ್ ಅಂಜದಿ
ನೋಲೆಜ್ ಸೆಕ್ರೆಟರಿ: ಶರೀಫ್ ನಾರ್ಷ
ಅಡ್ಮಿನಿಸ್ಟ್ರೇಶನ್ ಪ್ರೆಸಿಡೆಂಟ್: ಕರೀಂ ಇಂದಾದಿ
ಅಡ್ಮಿನಿಸ್ಟ್ರೇಶನ್ ಸೆಕ್ರೆಟರಿ: ಅಬ್ದುಲ್ ಗನಿ
ವೆಲ್ಫೇರ್ ಪ್ರೆಸಿಡೆಂಟ್: ತಾಜುದ್ದೀನ್ ಉಪ್ಪಿನಂಗಡಿ
ವೆಲ್ಫೇರ್ ಸೆಕ್ರೆಟರಿ: ಅಬ್ದುಲ್ ಹಮೀದ್ ನೆಕ್ಕಿಲ್
ಪಬ್ಲಿಕೇಶನ್ ಪ್ರೆಸಿಡೆಂಟ್: ಇಬ್ರಾಹಿಂ ಸರಳಿಕಟ್ಟೆ
ಪಬ್ಲಿಕೇಶನ್ ಸೆಕ್ರೆಟರಿ: ಝಕರಿಯ್ಯ ಹಾಸನ
ಕಾರ್ಯಕಾರಿ ಸಮಿತಿ ಸದಸ್ಯರು: ಯಾಕುಬ್ ಸಖಾಫಿ, ಮುಸ್ತಫ ಹಾಸನ, ಮಾಲಿಕ್ ಸೂರಿಂಜೆ, ಸಾಲಿ ಬೆಲ್ಲಾರ, ಬಶೀರ್ ಶಿಬರೂರ್ ,ರಝಾಖ್ ನೆಕ್ಕಿಲ್,ಹಮೀದ್ ವಿಟ್ಲ, ಅಬ್ದುಲ್ಲ ಕ್ಯೊಲ, ಶಾಫಿ ಕೊಡಗು, ಫಾರಿಸ್ ಅಡ್ಯನಡ್ಕ, ಮುಹ್ಸಿನ್ ಎಮ್ಮೆಮಾಡ್, ಇಬ್ರಾಹಿಂ ಕಲೀಲ್, ಹನಸ್ ಬುಲ್ಲೇರಿಕಟ್ಟೆ, ಹಾರಿಸ್ ಮಡಿಕೇರಿ,ಮುಹಮ್ಮದ್ ಬಂಟ್ವಾಳ