ಬೃಹತ್ "BCF ಜಾಗತಿಕ ಬ್ಯಾರಿ ಸಮಾವೇಶ -2017" ಹಾಗೂ ಬ್ಯಾರಿ ವಸ್ತು ಪ್ರದರ್ಶನ

Update: 2017-04-03 14:34 GMT

ದುಬೈ, ಎ.3: ಬ್ಯಾರಿ ಸಮುದಾಯದ ಪ್ರತಿಷ್ಠಿತ ಅನಿವಾಸಿ ಸಮಾಜ ಸೇವಾ ಸಂಸ್ಥೆಯಾದ ಬ್ಯಾರೀಸ್ ಕಲ್ಚರಲ್ ಫೋರಮ್ ( BCF ) ಮತ್ತು  ಕರ್ನಾಟಕದಲ್ಲಿ ಅಧಿಕೃತವಾಗಿ ನೋಂದಾಯಿಸಲ್ಪಟ್ಟ ಬ್ಯಾರೀಸ್ ಕಲ್ಚರಲ್ ಫೋರಮ್ ಟ್ರಸ್ಟ್ ( ರಿ )  ಇದರ ವತಿಯಿಂದ ಮೇ.5 ಶುಕ್ರವಾರ ದುಬೈಯ ಹೆಸರಾಂತ ಪಂಚತಾರಾ ಹೋಟೆಲ್ 'ಲೀ ಮೆರಿಡಿಯನ್'ನ ಗ್ರೇಟ್ ಬಾಲ್ ರೂಮ್  ಸಭಾಂಗಣದಲ್ಲಿ ಜಾಗತಿಕ ಬ್ಯಾರಿ ಸಾಂಸ್ಕೃತಿಕ ಸಮಾವೇಶ ಮತ್ತು ಬ್ಯಾರಿ ಸಮುದಾಯಿಕ ವಸ್ತು ಪ್ರದರ್ಶನವನ್ನು  ಏರ್ಪಡಿಸಲಾಗೂದೆಂದು BCF ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.

BCF ಅಧ್ಯಕ್ಷ ಡಾ.ಬಿ.ಕೆ. ಯೂಸುಫ್ ರವರ ಅಧ್ಯಕ್ಷತೆಯಲ್ಲಿ ನಡೆಯುವ, ಬ್ಯಾರಿ ಸಮುದಾಯದ ಶ್ರೀಮಂತ ವೈವಿಧ್ಯಮಯ ಸಂಸ್ಕೃತಿ, ಕಲೆ ಮತ್ತು ಚರಿತ್ರೆಯನ್ನು ಅನಾವರಣಗೊಳಿಸುವ ಮತ್ತು ಕರ್ನಾಟಕದ ಇತರ ಸಂಸ್ಕೃತಿಯ ಕಲಾ ವೈಭವವನ್ನು ಬಿಂಬಿಸುವ ಈ ಅಮೋಘವಾದ ಸಾಂಸ್ಕೃತಿಕ ಕಾರ್ಯಕ್ರಮ ಮತ್ತು ವಸ್ತು ಪ್ರದರ್ಶನದಲ್ಲಿ ಸುಮಾರು 1,000 ರಷ್ಟು ಕನ್ನಡಿಗ ಕನ್ನಡೇತರ ಭಾಂದವರು ಪಾಲ್ಗೊಳ್ಳುವ ನಿರೀಕ್ಷೆ ಇದೆ.

ಬಹುತೇಕ ಎಲ್ಲ ಗಲ್ಫ್  ರಾಷ್ಟ್ರಗಳ ಆಹ್ವಾನಿತರು ಮತ್ತು ಕರ್ನಾಟಕದಿಂದ ರಾಜಕೀಯ, ಸಾಮಾಜಿಕ ಮತ್ತು ಸಾಂಸ್ಕೃತಿಕ ಮತ್ತು ಕಲಾ ಕ್ಷೇತ್ರದಿಂದ ಹಲವಾರು ಗಣ್ಯಾತಿಗಣ್ಯ ನಾಯಕರುಗಳು, ವಿವಿಧ ರಂಗಗಳಲ್ಲಿ ವಿಶೇಷ ಸಾಧನೆ ಮಾಡಿ ಸಮಾಜದ ಬೆಳವಣಿಗೆಯಲ್ಲಿ ಗಣನೀಯ ಸೇವೆಸಲ್ಲಿಸಿದ ಹಲವಾರು ಗಣ್ಯರು ಈ ಸಮಾವೇಶದಲ್ಲಿ ಭಾಗವಹಿಸಲಿದ್ದಾರೆ.

ಈ ವೇಳೆ ಸಮಾಜ, ದೇಶ, ರಾಜ್ಯದ ಏಳಿಗೆಗೆ ತಮ್ಮ ಗಣನೀಯ ಸೇವೆ ನೀಡಿದ ಹಲವಾರು ಸಾಧಕರನ್ನು ಗುರುತಿಸಿ ಗೌರವಿಸಲಾಗುವುದು. ಮಾಜಿ ಮುಖ್ಯ ಮಂತ್ರಿ ಹಾಗೂ ಜೆಡಿಎಸ್ ಅಧ್ಯಕ್ಷ ಕುಮಾರ ಸ್ವಾಮಿ, ಕರ್ನಾಟಕದ ಹಲವಾರು ಮಂತ್ರಿಗಳು, ಶಾಸಕರುಗಳ ಸಮೇತ ಹಲವಾರು ಗಣ್ಯರು ಭಾಗವಹಿಸುವ ಈ ಕಾರ್ಯಕ್ರಮದಲ್ಲಿ ಕರ್ನಾಟಕದ ವೈವಿಧ್ಯಮಯ ಸಾಂಸ್ಕೃತಿಕ ವೈಭವನ್ನು ಅನಾವರಣ ಗೊಳಿಸಲಾಗುವುದು.

ಕಾರ್ಯಕ್ರಮವು ಮೇ.5ರಂದು ಮಧ್ಯಾಹ್ನ 2 ಗಂಟೆಗೆ ಪ್ರಾರಂಭವಾಗಿ ರಾತ್ರಿ 11:30  ಕ್ಕೆ ಅಂತ್ಯಗೊಳ್ಳುವ ಈ ಕಾರ್ಯಕ್ರಮದಲ್ಲಿ ರಾತ್ರಿ ಭೋಜನದ ವ್ಯವಸ್ಥೆಯನ್ನು ಏರ್ಪಡಿಸಲಾಗಿದೆ.

BCF ಅಧ್ಯಕ್ಷ ಡಾ. ಬಿ.ಕೆ. ಯೂಸುಫ್, BCF ಜಾಗತಿಕ ಬ್ಯಾರಿ ಸಮಾವೇಶದ ಚೇರ್ಮೆನ್ ಅಬ್ದುಲ್ ಲತೀಫ್ ಮುಲ್ಕಿ,  BCF ಉಪಾಧ್ಯಕ್ಷ ಎಂ ಈ ಮೂಳೂರು, ಅಫೀಕ್ ಹುಸೈನ್, ಅಮೀರುದ್ದೀನ್. ಎಸ್.ಐ, ಪ್ರಧಾನ ಕಾರ್ಯದರ್ಶಿ ಡಾ. ಕಾಪು ಮಹಮದ್, ಸಾಂಸ್ಕೃರಿಕ ಕಾರ್ಯಕ್ರಮದ ಉಸ್ತುವಾರಿ ಎಮ್.ಬಿ. ಅಕ್ಬರ್, ಜೊತೆ ಉಸ್ತುವಾರಿ ಉಸ್ಮಾನ್ ಮೂಳೂರು ಹಾಗೂ  ಇತರ ಕಾರ್ಯಕಾರೀ ಸದಸ್ಯರನ್ನೊಳಗೊಂಡ ತಂಡದ ಸದಸ್ಯರು ಉಪಸ್ಥಿತರಿದ್ದು ಅಧಿಕೃತವಾಗಿ ಮಾಹಿತಿ ನೀಡಿದರು.

ಈ ಸಮಾರಂಭಕ್ಕೆ ಅಧಿಕೃತವಾದ ಕರೆಯೋಲೆಯನ್ನು ( INVITATION ) ಪಡೆದವರಿಗೆ ಮಾತ್ರ ಪ್ರವೇಶವಿದೆ. ಆದುದರಿಂದ ಈ ಸಮಾರಂಭದ  ಅಧಿಕೃತ ಕರೆಯೋಲೆ ಕೂಪನ್ ( Invitation  Coupon  ) ಪಡೆದವರು ಸಭಾಂಗಣದ ದ್ವಾರದಲ್ಲಿ ಇರುವ ಕೌಂಟರ್ ನಲ್ಲಿ ತಮ್ಮ INVITATION COUPON ಅನ್ನು ತೋರಿಸಿ ತಮ್ಮ ಹೆಸರು ಮತ್ತು ಮೊಬೈಲ್ ನಂಬರ್ ಅನ್ನು ನೋಂದಾಯಿಸಿ ಸಭಾಂಗಣದೊಳಗೆ ಪ್ರವೇಶಿಸ ಬೇಕಾಗಿ ವಿನಂತಿ. ಈ ನಿಟ್ಟಿನಲ್ಲಿ ಸಂಪರ್ಕ ಮಾಡಲು ಬಯಸುವವರು ಈ ಕೆಳಗಿನ ಮೊಬೈಲ್ ನಂಬರ್ ಗಳನ್ನು ಸಂಪರ್ಕಿಸಬೇಕಾಗಿ ಕೋರಲಾಗಿದೆ.

ಕಾರ್ಯಕ್ರಮದ ಬಗ್ಗೆ ಸಾಮಾನ್ಯ ಮಾಹಿತಿಗಳಿಗಾಗಿ: ಅಬ್ದುಲ್ ಲತೀಫ್ ಮುಲ್ಕಿ - 050- 6530518, ಉಸ್ಮಾನ್ ಮೂಳೂರು - 055-9544342, ಎಂ. ಬಿ ಅಕ್ಬರ್ - 050-2766377, ಅಫೀಕ್ ಹುಸೈನ್ -0505883943 ಸಂಪರ್ಕಿಸಬಹುದು.

ಪ್ರವೇಶ ಕೂಪನ್ ( Entry Coupon ) ಬೇಕಾದವರು: ಲತೀಫ್ ಪುತ್ತೂರು-0559724709, ಅಫೀಕ್ ಹುಸೈನ್ -0505883943 ಸಂಪರ್ಕಿಸಬಹುದು.

ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಭಾಗವಹಿಸಲು ಬಯಸುವವರು: ಎಂ. ಬಿ ಅಕ್ಬರ್ - 050-2766377, ಉಸ್ಮಾನ್ ಮೂಳೂರು - 055-9544342, ಅಮೀರ್ ಹಳೆಯಂಗಡಿ: 056 -2299596 ಸಂಪರ್ಕಿಸಬಹುದು.

ಮಕ್ಕಳ ಕಾರ್ಯಕ್ರಮಗಳಿಗಾಗಿ: ಮುಮ್ತಾಜ್ ಝಕೀರ್ – 050 7649016, ಶೆಹನಾಜ್ ಸುಲೇಮಾನ್ – 050 2552734 ಸಂಪರ್ಕಿಸಬಹುದು ಎಂದು ಪ್ರಕಟನೆಯಲ್ಲಿ ಕೋರಲಾಗಿದೆ.

Writer - ಇಕ್ಬಾಲ್ ಉಚ್ಚಿಲ

contributor

Editor - ಇಕ್ಬಾಲ್ ಉಚ್ಚಿಲ

contributor

Similar News