ಡಾ.ಆರತಿ ಕೃಷ್ಣ ದುಬೈ ಭೇಟಿ: ಅಲ್ ಫಲಾಹ್ ವತಿಯಿಂದ ಸ್ವಾಗತ
Update: 2017-04-26 11:41 GMT
ದುಬೈ, ಎ.26: ಕರ್ನಾಟಕ ಸರಕಾರದ ಎನ್ನಾರೈ ಫೋರಂ ಇದರ ಡೆಪ್ಯುಟಿ ಚೆಯರ್ಮೆನ್ ಡಾ.ಆರತಿ ಕೃಷ್ಣ ಎ.26ರಂದು ದುಬೈಗೆ ಅಧಿಕೃತ ಭೇಟಿ ನೀಡಿದ್ದು, ಅವರನ್ನು ಬುಧವಾರ ದುಬೈ ವಿಮಾನ ನಿಲ್ದಾಣದ ಅಲ್ ಮಜ್ಲಿಸ್ ನಲ್ಲಿ ದುಬೈ ಅಲ್ ಫಲಾಹ್ ಗ್ರೂಪ್ ವತಿಯಿಂದ ಸ್ವಾಗತಿಸಲಾಯಿತು.
ಚೆಯರ್ಮೆನ್ ಯೂಸುಫ್ ಅಲ್ ಫಲಾಹ್ ಹೂಗುಚ್ಛ ನೀಡಿ ಡಾ.ಆರತಿ ಕೃಷ್ಣರನ್ನು ಬರಮಾಡಿಕೊಂಡರು. ಈ ಸಂದರ್ಭ ಮಂಗಳೂರು ಎಂ.ಫ್ರೆಂಡ್ಸ್ ಕಾರ್ಯದರ್ಶಿ ರಶೀದ್ ವಿಟ್ಲ, ದುಬೈ ಕನ್ನಡ ಸಂಘದ ಚಂದ್ರಕಾಂತ ಗೌಡ ದಾವಣಗೆರೆ, ಸುಧಾಕರ ಗೌಡ ಮಂಡ್ಯ, ಆಸಿಫ್ ಅಲ್ ಫಲಾಹ್ ಉಪಸ್ಥಿತರಿದ್ದರು.
ಡಾ.ಆರತಿ ಕೃಷ್ಣ ಅವರು ದುಬೈಯಲ್ಲಿ ನಡೆಯಲಿರುವ ಅಲ್ ಫಲಾಹ್ ಹೈಪರ್ ಮಾರ್ಕೆಟ್ ಹಾಗೂ ಎನ್ನಾರೈ ಫೋರಂ ಉದ್ಘಾಟನೆಯಲ್ಲಿ ಪಾಲ್ಗೊಳ್ಳಲಿದ್ದಾರೆ.