ದುಬೈ: ದಾರುನ್ನೂರ್ ನೂತನ ಡಾಕ್ಯುಮೆಂಟರಿ ಮತ್ತು ಗ್ರಾಂಡ್ ಇಫ್ತಾರ್ ಅಮಂತ್ರಣ ಪತ್ರ ಬಿಡುಗಡೆ

Update: 2017-04-27 04:47 GMT

ದುಬೈ, ಎ.27: ದಾರುನ್ನೂರ್ ಎಜುಕೇಷನ್ ಸೆಂಟರ್ ಕಾಶಿಪಟ್ನ ಮೂಡುಬಿದಿರೆ ಇದರ ಯುಎಇ ಕಲ್ಚರಲ್ ಸೆಂಟರ್ ವತಿಯಿಂದ ಅಲ್ ರಿಗ್ಗಾ ದಲ್ಲಿರುವ ಪಂಚ ನಕ್ಷತ್ರ ಹೋಟೆಲ್ ಜೂದ್ ಪ್ಯಾಲೆಸ್ ನ ಕೃಷ್ಟಲ್ ಬಾಲ್ ರೂಂನಲ್ಲಿ ದಾರುನ್ನೂರ್ ಸಾಕ್ಷ್ಯಚಿತ್ರವನ್ನು ಬಿಡುಗಡೆ ಗೊಳಿಸಲಾಯಿತು. 

ಶೈಖ್ ಅಬ್ದುಲ್ ಬಾರಿ ಅಲ್ ಝುಬೈದಿಯವರ ಪುತ್ರ ಶೈಖ್ ಖಾಲಿದ್ ಅಬ್ದುಲ್ ಬಾರಿ ಅಬೂಬಕ್ಕರ್ ಮಹಮ್ಮದ್ ಅಲ್ ಝುಬೈದಿ ಸಾಕ್ಷ್ಯಚಿತ್ರವನ್ನು ಬಿಡುಗಡೆಗೊಳಿಸಿದರು. ಈ ಸಂದರ್ಭ ಕೇರಳ ಮಾಜಿ ಮಂತ್ರಿ ಹಾಜಿ ಚೆರ್ಕಳ ಅಬ್ದುಲ್ಲಾ ಉಪಸ್ಥಿತರಿದ್ದರು.

ದಾರುನ್ನೂರ್ ಯುಎಇ ಅಧ್ಯಕ್ಷ ಸಲೀಂ ಅಲ್ತಾಫ್, ಗೌರವಾಧ್ಯಕ್ಷ ಹಾಗೂ ಸಾಕ್ಷ್ಯಚಿತ್ರದ ನಿರ್ಮಾಪಕ ಮುಹಮ್ಮದ್ ಮುಸ್ತಾಕ್ ಕದ್ರಿ ಮಂಗಳೂರು, ದಾರುನ್ನೂರ್ ಯುಎಇ ಉಪದೇಶಕ ಹಾಗೂ ಉದ್ಯಮಿ ಮುಹ್ಸಿನ್ ಅಹ್ಮದ್ ಮೂಡುಬಿದಿರೆ, ಶಂಸುದ್ದೀನ್ ವಳಪಟ್ಟಣಂ ಅವರ ಪುತ್ರ ಮಹಮ್ಮದ್ ಶಿರಾಝ್, ದಾರುನ್ನೂರ್ ಯುಎಇ ಇದರ ಕೋಶಾಧಿಕಾರಿ ಅಬ್ದುಲ್ ಸಲಾಂ ಬಪ್ಪಳಿಗೆ ಮೊದಲಾದವರು ಉಪಸ್ಥಿತರಿದ್ದರು.

ದಾರುನ್ನೂರ್ ಯುಎಇ ಕಾರ್ಯದರ್ಶಿ ಸಮೀರ್ ಇಬ್ರಾಹಿಂ ಕಲ್ಲರೆ ಕಾರ್ಯಕ್ರಮ ಉದ್ಘಾಟಿಸಿದರು. ದಾರುನ್ನೂರ್ ಯುಎಇ ಕಾರ್ಯದರ್ಶಿ ಅನ್ಸಾಫ್ ಪಾತೂರ್ ಸಂಸ್ಥೆಯನ್ನು ಪರಿಚಯಿಸಿದರು.

ಈ ಸಂದರ್ಭ ಶೈಖ್ ಖಾಲಿದ್ ರನ್ನು ದಾರುನ್ನೂರ್ ಯುಎಇ ಅಧ್ಯಕ್ಷ ಸಲೀಂ ಅಲ್ತಾಫ್ ಫರಂಗಿಪೇಟೆ, ಚೆರ್ಕಳ ಅಬ್ದುಲ್ಲಾ ಸಾಹೆಬ್ ರನ್ನು ದಾರುನ್ನೂರ್ ಯು ಎಇ ಪ್ರಧಾನ ಕಾರ್ಯದರ್ಶಿ ಬದ್ರುದ್ದೀನ್ ಹೆಂತಾರ್ ಮತ್ತು ಉದ್ಯಮಿ, ದಾರುನ್ನೂರಿನ ಉಪದೇಶಕ ಮುಹ್ಸಿನ್ ಅಹ್ಮದ್ ಕಾರ್ಕಳರನ್ನು ದಾರುನ್ನೂರ್ ಯು ಎಇ ಗೌರವಾಧ್ಯಕ್ಷ  ಮುಹಮ್ಮದ್ ಮುಸ್ತಾಕ್ ಕದ್ರಿ ಸನ್ಮಾನಿಸಿದರು.

ದಾರುನ್ನೂರ್ ವತಿಯಿಂದ ಜೂ.9ರಂದು ಬರ್ದುಬೈ ಮಂಕೂಲ್ ನಲ್ಲಿರುವ ಗ್ರಾಂಡ್ ಎಕ್ಸೆಲ್ಲಿಯರ್ ಹೋಟೆಲ್ ನಲ್ಲಿ ನಡೆಯಲಿರುವ ಗ್ರಾಂಡ್ ಇಫ್ತಾರ್ – 2017 ಇದರ ಔಪಚಾರಿಕ (ಫಾರ್ಮಲ್) ಆಮಂತ್ರಣ ಪತ್ರವನ್ನು ಇದೇ ಸಂದರ್ಭ ಬಿಡುಗಡೆಗೊಳಿಸಲಾಯಿತು. ಆಮಂತ್ರಣ ಪತ್ರದ ವಿನ್ಯಾಸವನ್ನು ಇಫ್ತಾರ್ ಸಮಿತಿ ಚೇರ್ಮೇನ್  ಮಹಮ್ಮದ್ ರಫೀಕ್ ಸುರತ್ಕಲ್ ರೂಪಿಸಿದ್ದರು.

ಅನ್ಸಾಫ್  ಪಾತೂರ್ ವಂದಿಸಿದರು. ಮಾಧ್ಯಮ ಪ್ರತಿನಿಧಿಯಾಗಿ v4 ವಾರ್ತಾ ಚಾನೆಲ್ ವಿಭಾಗದಿಂದ ಪ್ರಶಾಂತ್ ರವರು ಆಗಮಿಸಿದ್ದರು.

Writer - ಬದ್ರುದ್ದೀನ್ ಹೆಂತಾರ್

contributor

Editor - ಬದ್ರುದ್ದೀನ್ ಹೆಂತಾರ್

contributor

Similar News