ಮೇ 5ರಂದು ದುಬೈಯಲ್ಲಿ ಬಿಸಿಎಫ್ ಜಾಗತಿಕ ಬ್ಯಾರಿ ಸಮಾವೇಶ 2017 ಮತ್ತು ಬ್ಯಾರಿ ವಸ್ತು ಪ್ರದರ್ಶನ
ದುಬೈ ,ಎ.30 : ಬ್ಯಾರಿ ಸಮುದಾಯದ ಪ್ರತಿಷ್ಠಿತ ಅನಿವಾಸಿ ಸಮಾಜ ಸೇವಾ ಸಂಸ್ಥೆಯಾದ ಬ್ಯಾರೀಸ್ ಕಲ್ಚರಲ್ ಫೋರಮ್ ( BCF ) ಮತ್ತು ಕರ್ನಾಟಕದಲ್ಲಿ ಅಧಿಕೃತವಾಗಿ ನೋಂದಾಯಿಸಲ್ಪಟ್ಟ ಬ್ಯಾರೀಸ್ ಕಲ್ಚರಲ್ ಫೋರಮ್ ಟ್ರಸ್ಟ್ (ರಿ.) ಇದರ ವತಿಯಿಂದ ಮೇ.5ರಂದು ದುಬೈಯ ಹೆಸರಾಂತ ಪಂಚತಾರಾ ಹೋಟೆಲ್ 'ಲೀ ಮೆರಿಡಿಯನ್' ನ ಗ್ರೇಟ್ ಬಾಲ್ ರೂಮ್ ಸಭಾಂಗಣದಲ್ಲಿ ಅಭೂತ ಪೂರ್ವವಾದ ವೈಭವೋಚಿತ ಜಾಗತಿಕ ಬ್ಯಾರಿ ಸಾಂಸ್ಕೃತಿಕ ಸಮಾವೇಶ ಮತ್ತು ಬ್ಯಾರಿ ಸಾಮುದಾಯಿಕ ವಸ್ತು ಪ್ರದರ್ಶನವನ್ನು ಏರ್ಪಡಿಸಲಾಗೂದೆಂದು BCF ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.
ಬಿಸಿಎಫ್ ಅಧ್ಯಕ್ಷರಾದ ಡಾ.ಬಿ.ಕೆ.ಯೂಸುಫ್ ರವರ ಅಧ್ಯಕ್ಷತೆಯಲ್ಲಿ ನಡೆಯುವ, ಬ್ಯಾರಿ ಸಮುದಾಯದ ಶ್ರೀಮಂತ ವೈವಿಧ್ಯಮಯ ಸಂಸ್ಕೃತಿ, ಕಲೆ ಮತ್ತು ಚರಿತ್ರೆಯನ್ನು ಅನಾವರಣಗೊಳಿಸುವ ಮತ್ತು ಕರ್ನಾಟಕದ ಇತರ ಸಂಸ್ಕೃತಿಯ ಕಲಾ ವೈಭವವನ್ನು ಬಿಂಬಿಸುವ ಈ ಅಮೋಘವಾದ ಸಾಂಸ್ಕೃತಿಕ ಕಾರ್ಯಕ್ರಮ ಮತ್ತು ವಸ್ತು ಪ್ರದರ್ಶನದಲ್ಲಿ ಸುಮಾರು 1000 ರಷ್ಟು ಕನ್ನಡಿಗ ಕನ್ನಡೇತರ ಭಾಂದವರು ಪಾಲ್ಗೊಳ್ಳುವ ನಿರೀಕ್ಷೆ ಇದ್ದು, ಬಹುತೇಕ ಎಲ್ಲ ಗಲ್ಫ್ ರಾಷ್ಟ್ರ್ರಗಳ ಆಹ್ವಾನಿತರು ಮತ್ತು ಕರ್ನಾಟಕದಿಂದ ರಾಜಕೀಯ, ಸಾಮಾಜಿಕ ಮತ್ತು ಸಾಂಸ್ಕೃತಿಕ ಮತ್ತು ಕಲಾ ಕ್ಷೇತ್ರದಿಂದ ಹಲವಾರು ನಾಯಕರುಗಳು, ವಿವಿಧ ರಂಗಗಳಲ್ಲಿ ವಿಶೇಷ ಸಾಧನೆ ಮಾಡಿ ಸಮಾಜದ ಬೆಳವಣಿಗೆಯಲ್ಲಿ ಗಣನೀಯ ಸೇವೆ ಸಲ್ಲಿಸಿದ ಹಲವಾರು ಗಣ್ಯರು ಈ ಸಮಾವೇಶದಲ್ಲಿ ಭಾಗವಹಿಸುವರೆಂದೂ ತಿಳಿಸಿದ್ದಾರೆ.
ಈ ಸಮಾರಂಭದಲ್ಲಿ ವಿಶೇಷ ಅತಿಥಿಗಳಾಗಿ ಗೃಹ ಸಚಿವರಾದ ಡಾ. ಜಿ ಪರಮೇಶ್ವರ್, ಆಹಾರ ಸಚಿವರಾದ ಯು.ಟಿ.ಖಾದರ್, ಸರಕಾರದ ಮುಖ್ಯ ಸಚೇತಕ ಶ್ರೀ ಐವನ್ ಡಿ ಸೋಜ, ರಾಜ್ಯ ಜೆಡಿಎಸ್ ಉಪಾಧ್ಯಕ್ಷ ಸಯ್ಯದ್ ಸೈಫುಲ್ಲಾ ಸಾಹೇಬ್, ಜೆಡಿಎಸ್ ರಾಷ್ಟ್ರೀಯ ವಕ್ತಾರ ತನ್ವೀರ್ ಅಹ್ಮದುಲ್ಲಾಹ್ , ಮಂಗಳೂರು ಉತ್ತರ ಶಾಸಕ ಮೊಹಿದಿನ್ ಬಾವ, ಬಿ ಎಂ ಫಾರೂಕ್, ಕರ್ನಾಟಕ ಅಲ್ಪಸಂಖ್ಯಾಕ ನಿಗಮದ ಅಧ್ಯಕ್ಷ ಎಂ.ಎ.ಗಫೂರ್, ಜನಾಬ್ ಮುಮ್ತಾಜ್ ಅಲಿ ಮೊದಲಾದ ಗಣ್ಯರು ಭಾಗವಹಿಸುವ ನಿರೀಕ್ಷೆ ಇದೆ.
ಈ ಸಂಧರ್ಭದಲ್ಲಿ ಸಮಾಜದ, ದೇಶದ, ರಾಜ್ಯದ ಏಳಿಗೆಗೆ ತಮ್ಮ ಗಣನೀಯ ಸೇವೆ ನೀಡಿದ ಹಲವಾರು ಸಾಧಕರನ್ನು ಗುರುತಿಸಿ ಗೌರವಿಸಲಾಗುವುದು. ಮಾಜಿ ಮುಖ್ಯ ಮಂತ್ರಿ ಹಾಗೂ ಜೆಡಿಎಸ್ ಅಧ್ಯಕ್ಷ ಕುಮಾರಸ್ವಾಮಿ, ಕರ್ನಾಟಕದ ಹಲವಾರು ಮಂತ್ರಿಗಳು, ಶಾಸಕರುಗಳ ಸಮೇತ ಹಲವಾರು ಗಣ್ಯರು ಭಾಗವಹಿಸಲಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿದ್ದಾರೆ
ಬಿಸಿಎಫ್ ಅಧ್ಯಕ್ಷರಾದ ಡಾ ಬಿ.ಕೆ.ಯೂಸುಫ್, ಬಿಸಿಎಫ್ ಬ್ಯಾರಿ ಸಮಾವೇಶದ ಛೇರ್ಮನ್ ಜ:ಅಬ್ದುಲ್ ಲತೀಫ್ ಮುಲ್ಕಿ , ಉಪಾಧ್ಯಕ್ಷರಾದ ಎಂ.ಈ.ಮೂಳೂರು, ಅಫೀಕ್ ಹುಸೈನ್, ಅಮೀರುದ್ದೀನ್ ಎಸ್.ಐ, ಪ್ರಧಾನ ಕಾರ್ಯದರ್ಶಿ ಡಾ. ಕಾಪು ಮಹಮದ್, ಸಾಂಸ್ಕೃತಿಕ ಕಾರ್ಯಕ್ರಮದ ಉಸ್ತುವಾರಿ ಎಮ್.ಬಿ.ಅಕ್ಬರ್, ಜೊತೆ ಉಸ್ತುವಾರಿ ಉಸ್ಮಾನ್ ಮೂಳೂರು ಹಾಗೂ ಇತರ ಕಾರ್ಯಕಾರಿ ಸದಸ್ಯರನ್ನೊಳಗೊಂಡ ತಂಡದ ಸದಸ್ಯರು ಉಪಸ್ಥಿತರಿದ್ದು ಅಧಿಕೃತವಾಗಿ ಮಾಹಿತಿ ನೀಡಿದರು.
ಈ ನಿಟ್ಟಿನಲ್ಲಿ ಸಂಪರ್ಕ ಮಾಡಲು ಬಯಸುವವರು ಈ ಕೆಳಗಿನ ಮೊಬೈಲ್ ನಂಬರ್ ಗಳನ್ನು / Email ಸಂಪರ್ಕಿಸಬೇಕಾಗಿ ಕೋರಲಾಗಿದೆ.
ಕಾರ್ಯಕ್ರಮದ ಬಗ್ಗೆ ಸಾಮಾನ್ಯ ಮಾಹಿತಿಗಳಿಗಾಗಿ:
ಅಬ್ದುಲ್ ಲತೀಫ್ ಮುಲ್ಕಿ - 050- 6530518
ಉಸ್ಮಾನ್ ಮೂಳೂರು - 055-9544342
ಅಫೀಕ್ ಹುಸೈನ್ – 050 5883943
ಎಂ. ಬಿ ಅಕ್ಬರ್ - 050-2766377
ಪ್ರವೇಶ ಕೂಪನ್ ( Entry Coupon ) ಬೇಕಾದವರು :
ಲತೀಫ್ ಪುತ್ತೂರು -
ಅಫೀಕ್ ಹುಸೈನ್ – 050 5883943
ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಭಾಗವಹಿಸಲು ಬಯಸುವವರು:
ಎಂ. ಬಿ ಅಕ್ಬರ್ - 050-2766377
ಉಸ್ಮಾನ್ ಮೂಳೂರು - 055-9544342
ಅಮೀರ್ ಹಳೆಯಂಗಡಿ: 056 -2299596
ಮಕ್ಕಳ ಕಾರ್ಯಕ್ರಮಗಳಿಗಾಗಿ:
ಶ್ರೀಮತಿ ಮುಮ್ತಾಜ್ ಝಕೀರ್ – 050 7649016
ಶ್ರೀಮತಿ ಶೆಹನಾಜ್ ಸುಲೇಮಾನ್ – 050 2552734
memoolur@hotmail.com / drkaup@refiffmail.com / latifmulky@yahoo.com