ಮಕ್ಕಾದಲ್ಲಿ ಸಜಿಪ ನಿವಾಸಿ ನಿಧನ

Update: 2017-05-21 10:43 GMT

ಸೌದಿ ಅರೇಬಿಯಾ, ಮೇ 21: ಮಕ್ಕಾ ಹರಂ ಶರೀಫ್ ಸಮೀಪವಿರುವ ಶರಿಕತ್ ಮಕ್ಕಾ ಕಟ್ಟಡದಲ್ಲಿರುವ ಅಲ್ ದಹಮ್ ವಾಚ್ ಸಂಸ್ಥೆಯ ಉದ್ಯೋಗಿ ಹಾಗೂ ಜಿದ್ದಾ ಶರಫಿಯಾ ಸೆಕ್ಟರ್ ಸಾಂತ್ವನ ವಿಭಾಗದ ಅಧ್ಯಕ್ಷ ಅಬ್ದುಲ್ ರಝಾಕ್ ಸಜಿಪ ಗುರುವಾರ (ಮೇ 18) ಬೆಳಗ್ಗೆ ನಿಧನರಾದರು.

ರಜೆಯಲ್ಲಿ ಊರಿಗೆ ತೆರಳಿದ್ದ ಅವರು ಹಿಂದಿರುಗಿ ಬಂದ ಮೂರನೇ ದಿನ ಎಂದಿನಂತೆ ಕೆಲಸಕ್ಕೆ ಹೊರಡಲು ಸಿದ್ಧರಾಗುತ್ತಿದ್ದ ವೇಳೆ ಕುಸಿದು ಬಿದ್ದು ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.

ಮೃತರ ಅಂತ್ಯ ಸಂಸ್ಕಾರಕ್ಕೆ ಸಂಬಂಧಿಸಿದ ದಾಖಲೆ ಪತ್ರಗಳನ್ನು ಕೆಸಿಎಫ್ ಮಕ್ಕತುಲ್ ಮುಕರ್ರಮ್ ಸದಸ್ಯ ಬಶೀರ್ ಮದನಿ ಸಿದ್ಧಪಡಿಸಿದ್ದಲ್ಲದೆ, ಮಯ್ಯಿತ್ ಪರಿಪಾಲನೆಗೆ ನೇತೃತ್ವ ವಹಿಸಿದ್ದರು. ಶುಕ್ರವಾರ ಮಗ್ರಿಬ್ ನಮಾಝ್ ಬಳಿಕ ಪರಿಶುದ್ಧ ಹರಂ ಶರೀಫ್‌ನಲ್ಲಿ ಮಯ್ಯಿತ್ ನಮಾಝ್ ನಿರ್ವಹಿಸಿ ಸಮೀಪದ ಜನತ್ತುಲ್ ಮುಹಲ್ಲಾದಲ್ಲಿ ದಫನ ಮಾಡಲಾಯಿತು.

ಕೆಸಿಎಫ್‌ನ ಉಮರ್ ಮದನಿ ಪರಪ್ಪು, ಝಂಝಂ ಉಮ್ರಾ ತಂಡದ ಅಮೀರ್ ದುಆಃ ನಿರ್ವಹಿಸಿದರು.
ಜನ್ನತುಲ್ ಮುಹಲ್ಲಾದಲ್ಲಿ ದಫನ ಕಾರ್ಯ ನಿರ್ವಹಿಸಲು ಕೆಸಿಎಫ್ ಮಕ್ಕತುಲ್ ಮುಕರ್ರಮ್ ಸಂಘಟನಾ ಕಾರ್ಯದರ್ಶಿ ಕಬೀರ್ ಬಾಜಾರ್ ಸಹಕರಿಸಿದರು.

ಈ ಸಂದರ್ಭ ಕೆಸಿಎಫ್ ಮಕ್ಕತುಲ್ ಮುಕರ್ರಮಃ ಸೆಕ್ಟರ್ ಅಧ್ಯಕ್ಷರಾದ ಹನೀಫ್ ಸಖಾಫಿ ಬೊಳ್ಮಾರ್, ಜಿದ್ದಾ ಶರಫಿಯಾ ಸೆಕ್ಟರ್ ಅಧ್ಯಕ್ಷರಾದ ಫಾರೂಕ್ ಸಅದಿ ಎಚ್ ಕಲ್ಲು, ಸಾಂತ್ವನ ವಿಭಾಗ ಅಧ್ಯಕ್ಷರು ಇಕ್ಬಾಲ್ ಹಾಜಿ ಉಳ್ಳಾಲ, ಕೆಸಿಎಫ್ ಜಿದ್ದಾ ಬವಾದಿ ಸೆಕ್ಟರ್ ಅಧ್ಯಕ್ಷರು ಸುಲೈಮಾನ್ ಬಂಡಾಡ್, ಕೆಸಿಎಫ್ ಮಕ್ಕತುಲ್ ಮುಕರ್ರಮಃ ಸಾಂತ್ವನ ವಿಭಾಗ ಅಧ್ಯಕ್ಷರು ಮೂಸಾ ಹಾಜಿ ಕಿನ್ಯ, ಕೆಸಿಎಫ್ ಮಕ್ಕತ್ತುಲ್ ಮುಕರ್ರಮಃ ಕಛೇರಿ ವಿಭಾಗದ ಅಧ್ಯಕ್ಷರು ಕಲಂದರ್ ಶಾಫೀ ಅಸೈಗೋಳಿ, ಕಾರ್ಯರ್ದಶಿ ಮುಸ್ತಾಕ್ ಸಾಗರ್, ಕಾರ್ಯಕಾರಿ ಸದಸ್ಯರಾದ ಅಶ್ರಫ್ ಮಂಜನಾಡಿ, ಹಮೀದ್ ಮಂಜನಾಡಿ ಸದಸ್ಯರಾದ ಸಿರಜುದ್ದೀನ್ ವಳವೂರು, ಅಶ್ರಫ್ ಮುಸ್ಲಿಯಾರ್ ಪಂಜಲ, ಸೌಕತ್ ವಳವೂರು ಮೊದಲಾದವರು ಉಪಸ್ಥಿತರಿದರು
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News