ಕೆಸಿಎಫ್ ಜಿದ್ದಾ ಝೋನ್: ಅಪಘಾತಕ್ಕೀಡಾದ ಸದಸ್ಯನಿಗೆ ಸಹಾಯ ಹಸ್ತ

Update: 2017-08-14 12:49 GMT

ಜಿದ್ದಾ, ಆ. 14: ಅಪಘಾತಕ್ಕೀಡಾಗಿ ಗಾಯಗೊಂಡ ಕೆಸಿಎಫ್ ಜಿದ್ದಾ ಝೋನ್ ಅಧೀನದಲ್ಲಿರುವ ಮಕ್ಕತುಲ್-ಮುಕರ್ರಮ ಸೆಕ್ಟರ್ ಸದಸ್ಯ ಫಕ್ರುದ್ದೀನ್ ಅಬ್ದುಲ್ಲಾ ಮಂಬಾಡಿ ಅವರಿಗೆ ಕರ್ನಾಟಕ ಕಲ್ಚರಲ್ ಫೌಂಡೇಶನ್ (ಕೆಸಿಎಫ್)  ಅನಿವಾಸಿ ಕನ್ನಡಿಗ ಸದಸ್ಯರಿಗಾಗಿ ರಚಿಸಿರುವ ಮೆಂಬರ್ಸ್ ರಿಲೀಫ್ ಫಂಡ್ ನಿಂದ 50 ಸಾವಿರ ರೂ. ಜಿದ್ದಾ ಝೋನಲ್ ನೇತಾರರು ಫಕ್ರುದ್ದೀನ್ ಅಬ್ದುಲ್ಲಾ ರಿಗೆ ಜಿದ್ದಾದಲ್ಲಿ ಹಸ್ತಾಂತರಿಸಿದರು.

ಅವರು ಊರಿಗೆ ಹೋಗುವ ಸಂದರ್ಭ ಬೇಕಾಗುವ ಅಗತ್ಯತೆಗಳನ್ನು ಕೆಸಿಎಫ್ ಕಾರ್ಯಕರ್ತರು ಅಲ್ಲಿನ ಅಧಿಕಾರಿಗಳೊಂದಿಗೆ ಚರ್ಚಿಸುತ್ತಿರುವುದಾಗಿ ತಿಳಿಸಿದೆ.

ಫಕ್ರುದ್ದೀನ್ ಅಬ್ದುಲ್ಲಾ ಮಂಬಾಡಿಯವರ ಎಲ್ಲಾ ಕಾರ್ಯಗಳಲ್ಲಿ ಸಕ್ರಿಯವಾಗಿ ಭಾಗಿಯಾದ ಜಿದ್ದಾ ಝೋನಲ್ ಕಾರ್ಯಕರ್ತರನ್ನು ರಾಷ್ಟ್ರೀಯ ಸಮಿತಿ ಈ ಸಂದರ್ಭದಲ್ಲಿ ಅಭಿನಂದಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News