ಇಂಡಿಯನ್ ಸೋಶಿಯಲ್ ಫಾರಂ ಪ್ರಯತ್ನದಿಂದ ಭಾರತ ತಲುಪಿದ ವಿಕ್ರಂ ಸಿಂಗ್ ಮೃತ ದೇಹ

Update: 2017-08-19 18:14 GMT

ಸೌದಿ ಅರೇಬಿಯಾ, ಆ. 19: ಕಮೀಸ್ ಮುಷೈತ್  ನಗರದಲ್ಲಿ ಟ್ಯಾಂಕರ್  ಡ್ರೈವರ್  ಆಗಿ ದುಡಿಯುತ್ತಿದ್ದ ಹರ್ಯಾಣ ರಾಜ್ಯದ ನಿವಾಸಿ ವಿಕ್ರಂ ಸಿಂಗ್   ಟ್ಯಾಂಕರ್ ಅಫಘಾತಗೊಂಡು ಮೃತಪಟ್ಟಿದ್ದರು. ಆಸ್ಪತ್ರೆಯಲ್ಲಿರುವ ಮೃತದೇಹದವನ್ನು ಅಂತ್ಯಕ್ರಿಯೆಗಾಗಿ ಸ್ವಗ್ರಾಮಕ್ಕೆ ಕಳುಹಿಸಿಕೊಡುವ  ಹಿನ್ನೆಲೆಯಲ್ಲಿ ಮೃತರ ವಾರೀಸುದಾರರು ಯಾರೂ ಇಲ್ಲದ ಕಾರಣ ಇಂಡಿಯನ್ ಎಂಬಸಿ ಜೆದ್ದ  ಕಾನ್ಸುಲೇಟ್ ಸದಸ್ಯರೂ, ಇಂಡಿಯನ್  ಸೋಶಿಯಲ್ ಫೋರಂನ ಕಮೀಸ್ ಮುಷೈತ್ ಘಟಕದ ಅಧ್ಯಕ್ಷರೂ  ಹಾಗೂ  ಸಾಮಾಜಿಕ ಕಾರ್ಯಕರ್ತರಾದ ಹನೀಫ್ ಮಂಜೇಶ್ವರರನ್ನು ಸಂಪರ್ಕಿಸಿ ನೆರವಿಗಾಗಿ ಮನವಿ ಮಾಡಿದ್ದರು.

ಇಂಡಿಯನ್ ಸೋಶಿಯಲ್ ಫೋರಂ ಕಮೀಸ್ ಮುಶೈತ್ ಘಟಕದ ಹನೀಫ್, ಮಂಜೇಶ್ವರ  ಸಾದಿಕ್ ಉಳ್ಳಾಲ,  ತನ್ವೀರ್ ಮೈಂದಾಳ, ಸಾದಿಕ್ ಉಳ್ಳಾಲ್, ಫಾರೂಕ್ ಉಳ್ಳಾಲ್, ನೌಶಾದ್ ಏರ್ ಅರೇಬಿಯಾ ಇವರನ್ನೊಳಗೊಂಡ ತಂಡ ತಕ್ಷಣವೇ ಸ್ಪಂದಿಸಿ ಸೌದಿ ಅರೇಬಿಯಾದ ಕಾನೂನಿನಂತೆ ಪೊಲೀಸ್ ಠಾಣೆ ಮತ್ತು ಅವರ ಕಫೀಲ್ (ವೀಸಾ ಪ್ರಾಯೋಜಕ) ನ್ನು ನಿರಂತರ  ಭೇಟಿ ನೀಡಿ ದಾಖಲೆಗಳನ್ನು ಸರಿಪಡಿಸಿ ವ್ಯವಸ್ಥಿತಗೊಳಿಸಿದರು.

ಇಂಡಿಯನ್ ಸೋಶಿಯಲ್ ಫೋರಂ ಕಮೀಸ್ ಮುಷ್ಯತ್ ಘಟಕದ  ಪರಿಶ್ರಮದ ಫಲವಾಗಿ  ಮೃತದೇಹವನ್ನು ಚಂಡೀಗಡ್ ವಿಮಾನ ನಿಲ್ದಾಣದ  ಮೂಲಕ  ಸ್ವಗ್ರಾಮಕ್ಕೆ ಕಳುಹಿಸಿಕೊಡಲಾಯಿತು.

ವಿಕ್ರಂ ಅಕಾಲಿಕ ಮರಣಕ್ಕೆ ಇಂಡಿಯನ್ ಸೋಶಿಯಲ್ ಫೋರಂ ಕಮೀಷ್ ಮುಷೈತ್  ಘಟಕ ಸಮಿತಿಯು ಸಂತಾಪ ಸೂಚಿಸಿದೆ. ಇಂಡಿಯನ್ ಸೋಶಿಯಲ್ ಫೋರಂನ ನೆರವಿಗೆ ಮೃತರ ಪತ್ನಿ, ಪುತ್ರ ಹಾಗೂ ಸಂಬಂಧಿಗಳು ಕೃತಜ್ಞತೆಗಳನ್ನು ಸಲ್ಲಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News