ಗೌರಿ ಲಂಕೇಶ್ ಹತ್ಯೆಗೆ ಕತರ್ ಇಂಡಿಯನ್ ಸೋಶಿಯಲ್ ಫೋರಮ್ ಕರ್ನಾಟಕ ಘಟಕ ಖಂಡಿನೆ
Update: 2017-09-06 17:31 GMT
ಕತರ್,ಸೆ.6:ಪತ್ರಕರ್ತೆ ಗೌರಿ ಲಂಕೇಶ್ ಅವರ ಹತ್ಯೆಯನ್ನು ಕತರ್ ಇಂಡಿಯನ್ ಸೋಶಿಯಲ್ ಫೋರಮ್ ಕರ್ನಾಟಕ ಘಟಕವು ಖಂಡಿಸಿದೆ.
ಹಿರಿಯ ಪತ್ರಕರ್ತೆಯಾಗಿ, ಸಾಮಾಜಿಕ ಕಾರ್ಯಕರ್ತೆಯಾಗಿ, ದಮನಿತರ ಧ್ವನಿಯಾಗಿ, ನ್ಯಾಯಪರ ಹೋರಾಟಗಳಿಂದ, ತನ್ನದೇ ಆದ ಛಾಪನ್ನು ಮೂಡಿಸಿ, ತನ್ನ ಅಪ್ರತಿಮ ಹೋರಾಟಗಳಿಂದ ಇಡೀ ಭಾರತದಾದ್ಯಂತ ಗುರುತಿಸಿಕೊಂಡಿದ್ದ ಒಬ್ಬ ದಿಟ್ಟ ಮಹಿಳೆಯನ್ನು ಇಂದು ಭಾರತದ ಜನತೆ ವಿಶೇಷವಾಗಿ ನಮ್ಮ ಕರ್ನಾಟಕ ರಾಜ್ಯದ ಜನತೆ ಕಳೆದುಕೊಂಡಿದೆ ಎಂದು ವಿಷಾದ ವ್ಯಕ್ತ ಪಡಿಸಿದೆ.
ಆರೋಪಿಗಳನ್ನು ಕೂಡಲೇ ಪತ್ತೆ ಹಚ್ಚಿ ಅವರ ಮೇಲೆ ಕಾನೂನು ಕ್ರಮ ತೆಗೆದುಕೊಳ್ಳಬೇಕೆಂದು ಕತರ್ ಇಂಡಿಯನ್ ಸೋಶಿಯಲ್ ಫೋರಮ್ ಕರ್ನಾಟಕ ಘಟಕವು ಆಗ್ರಹಿಸಿದೆ.