ರಿಯಾದ್: ಐಎಸ್ಎಫ್ ನೆರವಿನಿಂದ ಸುಖಾಯಾಂತ್ಯಗೊಂಡ ಬೆಂಗಳೂರು ಮೂಲದ ದಂಪತಿಗಳ ಪ್ರಕರಣ

Update: 2017-09-16 17:25 GMT

ರಿಯಾದ್, ಸೆ. 16: ಬೆಂಗಳೂರು ಮೂಲದ ಚಾಂದ್ ಪಾಶ ಮತ್ತು  ಆಮಿನಾಬಿ ದಂಪತಿ ಏಜೆಂಟಿನ ಮಾತಿಗೆ ಮರುಳಾಗಿ ಸೌದಿ ಅರೇಬಿಯಾದ ಪ್ರಾಯೋಜಕನ ಮನೆಯಲ್ಲಿ ಖಾಸಗಿ ವಾಹನ ಚಾಲಕ ಮತ್ತು ಮನೆ ಕೆಲಸವನ್ನು ಮಾಡುವ ಸಲುವಾಗಿ ರಿಯಾದಿಗೆ ಹೋಗಿದ್ದರು.

ಆದರೆ ಇವರ ಪ್ರಯೋಜಕನು ಈ ದಂಪತಿಗಳಿಗೆ  ಕೆಲಸ ನೀಡಲು ನಿರಾಕರಿಸಿ, ವಾಸ್ತವ್ಯ ಕಾರ್ಡ್(ಇಕಾಮ)  ಮತ್ತು ಪಾಸ್ ಪೊರ್ಟ್ ನೀಡದೆ. ಇವರ ಬಿಡುಗಡೆಗಾಗಿ ಸುಮಾರು 18 ಸಾವಿರ  ರಿಯಾಲಿನ ಬೇಡಿಕೆ ಇಟ್ಟಿದ್ದನು ಎನ್ನಲಾಗಿದೆ.

ವಿದೇಶದಲ್ಲಿ ಕಂಗಾಲಾದ ದಂಪತಿ ತಿನ್ನಲು ಆಹಾರ ಮತ್ತು ಇರಲು ಮನೆ ಇಲ್ಲದೆ, ಅಲ್ಲಲ್ಲಿ ಬೇಡುತ್ತ ಬೀದಿಗಳಲ್ಲಿ ಅತ್ಯಂತ ಶೋಚನೀಯವಾಗಿ  ದಿನಗಳನ್ನು ಕಳೆಯುತ್ತಿದ್ದರು.

ಈ ಪ್ರಕರಣವನ್ನು ಕೈಗೆತ್ತಿಕೊಂಡ ಇಂಡಿಯನ್ ಸೋಶಿಯಲ್ ಫಾರಂ ರಿಯಾದ್ ಘಟಕದ ಇಸ್ಮಾಯಿಲ್ ಮಂಗಳಪೇಟೆ, ನವೀದ್ ಕುಂದಾಪುರ ಮತ್ತು ಅಬ್ದುಲ್ ಸಾಬಿತ್ ಬಜ್ಪೆ ರವರ ಜೊತೆಗಿನ ತಂಡವು ದಂಪತಿಗೆ ಸಾಂತ್ವನ ಹೇಳಿ, ಆಹಾರ ಮತ್ತು ವಾಸ್ತವ್ಯದ ವ್ಯವಸ್ಥೆ ಮಾಡಿ, ಈಗಾಗಲೇ ಆಮೀನಾಬಿ ಯವರನ್ನುಇಂಡಿಯನ್ ಸೋಶಿಯಲ್ ಫಾರಂನ ಪ್ರಯತ್ನದಿಂದ ಸ್ವದೇಶಕ್ಕೆ ಕಳುಹಿಸಿಕೊಡಲಾಗಿತ್ತು.

ಆದರೆ ಚಾಂದ್ ಪಾಷಾರವರ ದಾಖಲೆಪತ್ರಗಳಲ್ಲಿ ಕೊಂಚ ಸಮಸ್ಯೆಗಳಿದ್ದ ಕಾರಣ ಚಾಂದ್ ಪಾಷಾರವರು ಸೌದಿಯಲ್ಲೇ ಉಳಿಯಬೇಕಾಯಿತು. ಇನ್ನು ಚಾಂದ್ ಪಾಷಾ ರವರಿಗೆ ಭಾರತಕ್ಕೆ ಕಳುಹಿಸಿಕೊಡಲು, ಮತ್ತು ಸಮಸ್ಯೆ ಬಗೆಹರಿಯುವ ತನಕ ಇರಲು ರೂಮ್ ಮಾತ್ತು ಊಟದ ವ್ಯವಸ್ಥೆ ಯನ್ನು ಫಾರಂನ ವತಿಯಿಂದ ಮಾಡಲಾಯಿತು. ಇವರ ದಾಖಲೆ ಮತ್ತು ಪಾಸ್ಪೋರ್ಟ್ ಗಳನ್ನು ಸರಿಪಡಿಸುವ ಸಲುವಾಗಿ ಇಂಡಿಯನ್ ಸೋಶಿಯಲ್ ಫಾರಂನ ಅಬ್ದುಲ್ ಸಾಬಿತ್ ಬಜ್ಪೆ ಅವರು ಹಲವು ಬಾರಿ ಭಾರತೀಯ ರಾಯಭಾರಿ ಕಚೇರಿಯನ್ನು ಸಂಪರ್ಕಿಸಿ ಪಾಸ್ಪೋರ್ಟ್ ಮತ್ತು ಇತರ ದಾಖಲೆಗಳನ್ನು ಸರಿಪಡಿಸಲಾಯಿತು. ಭಾರತೀಯ ರಾಯಭಾರಿ ಕಚೇರಿಯ ನಿದರ್ಶನದಂತೆ ಚಾಂದ್ ಪಾಷಾರವರನ್ನು ತರ್ಹಿಲ್ ಮೂಲಕ  ಭಾರತಕ್ಕೆ ಕಳುಹಿಸಿಕೊಡಲು ಎಲ್ಲಾ ವ್ಯವಸ್ಥೆ ಗಳನ್ನು ಮಾಡಲಾಯಿತು. ಅಂತಿಮವಾಗಿ ಚಾಂದ್ ಪಾಷಾರವರನ್ನು ದೆಹಲಿ ಮಾರ್ಗವಾಗಿ ಬೆಂಗಳೂರಿಗೆ ಕಳುಹಿಸಿ ಕೊಡುವಲ್ಲಿ ಇಂಡಿಯನ್ ಸೋಶಿಯಲ್ ಫಾರಂ ಯಶಸ್ವಿಯಾಗಿದೆ ಎಂದು ಪ್ರಕಟನೆ ತಿಳಿಸಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News