ಬೆಂಕಿಯ ನಡುವೆ ಸಿಲುಕಿದ್ದ ಭಾರತೀಯನನ್ನು ರಕ್ಷಿಸಿದ ಯುವತಿಗೆ ಸನ್ಮಾನ

Update: 2017-10-03 13:00 GMT

ಅಜ್ಮಾನ್, ಅ.3: ಎರಡು ಟ್ರಕ್ ಗಳ ನಡುವೆ ಸಂಭವಿಸಿದ ಅಪಘಾತದ ಪರಿಣಾಮ ಹೊತ್ತಿ ಉರಿದ ಬೆಂಕಿಯ ನಡುವೆ ಸಿಲುಕಿದ್ದ ಭಾರತೀಯ ಚಾಲಕನನ್ನು ರಕ್ಷಿಸಿದ ಯುವತಿಯನ್ನು ಅಜ್ಮಾನ್ ಆಡಳಿತಗಾರ ಶೇಖ್ ಹುಮೈದ್ ಬಿನ್ ರಾಷಿದ್ ಅಲ್ ನುಹೈಮಿ ಸನ್ಮಾನಿಸಿದ್ದಾರೆ.

ಬೆಂಕಿ ನಡುವೆ ಸಿಲುಕಿದ್ದ ಪಂಜಾಬಿ ಚಾಲಕನನ್ನು ಬುರ್ಖಾದ ಸಹಾಯದಿಂದ ಜವಾಹರ್ ಸೈಫ್ ಅಲ್ ಕುಮೈತಿ ಬುರ್ಖಾದ ಸಹಾಯದಿಂದ ರಕ್ಷಿಸಿದ್ದರು. ರಾಸಲ್‍ಖೈಮ ಪೊಲೀಸರು ಜವಾಹರ್ ಸೈಫ್ ಅಲ್ ಕುಮೈತಿಯವರನ್ನು ಪ್ರಶಂಸಿಸಿದ್ದಾರೆ. ಚಾಲಕನ ಜೀವ ಉಳಿಸಿದ ಯುವತಿಯ ಕೆಲಸ ಎಲ್ಲರಿಗೂ ಮಾದರಿ ಎಂದು ಶೇಖ್ ಹುಮೈದ್ ಹೇಳಿದರು.

ಇಂತಹ ಕಾರ್ಯವನ್ನು ತಾನು ಕರ್ತವ್ಯವೆಂದು ಭಾವಿಸಿದ್ದೇನೆ. ಚಾಲಕನ ಜೀವಕ್ಕೆ ಅಪಾಯವಿದೆ ಎಂದು ಅನಿಸಿದ ಕೂಡಲೇ ಸಮಯ ವ್ಯರ್ಥಗೊಳಿಸದೆ ರಕ್ಷಣೆಗೆ ಧಾವಿಸಿದೆ ಎಂದು ಜವಾಹರ್ ಸೈಫ್ ಅಲ್ ಕುಮೈತಿ ಈ ಸಂದರ್ಭ ಹೇಳಿದ್ದಾರೆ.

ಸನ್ಮಾನ ಕಾರ್ಯಕ್ರಮದಲ್ಲಿ ಹಲವಾರು ಎಮಿರೇಟ್‍ನ ಗಣ್ಯರು ಮತ್ತು ಅಧಿಕಾರಿಗಳು ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News