ಯುಎಇ: ಡಿ.ಕೆ.ಎಸ್.ಸಿ. ವತಿಯಿಂದ ನ.24ರಂದು ಮೀಲಾದ್ ಸಮಾವೇಶ

Update: 2017-10-16 18:26 GMT
ಮುಹಮ್ಮದ್ ಶಕೂರ್ ಮನಿಲಾ, ಹಾಜಿ ನವಾಝ್ ಕೋಟೆಕ್ಕಾರ್, ಹಸನ್ ಬಾವ  ಹಳೆಯಂಗಡಿ

ಸ್ವಾಗತ ಸಮಿತಿ ಚ್ಯರ್ಮೆನ್ ಆಗಿ ಮುಹಮ್ಮದ್ ಶಕೂರ್ ಮನಿಲಾ ಜನರಲ್ ಕನ್ವಿನರ್ : ಹಾಜಿ ನವಾಝ್ ಕೋಟೆಕ್ಕಾರ್  ಕೋಶಾಧಿಕಾರಿ : ಹಸನ್ ಬಾವ  ಹಳೆಯಂಗಡಿ ಆಯ್ಕೆ.

ದುಬೈ, ಅ. 16: ದಕ್ಷಿಣ ಕರ್ನಾಟಕ ಸುನ್ನಿ ಸೆಂಟರ್ ಯು ಎ ಇ ರಾಷ್ಟ್ರಿಯ ಸಮಿತಿ ವತಿಯಿಂದ  ಮೀಲಾದ್ ಸಮಾವೇಶವು ನ. 24 ರಂದು ಸಂಜೆ ಇಲ್ಲಿನ  ದೇರಾ ದುಬೈ ನಲ್ಲಿರುವ ಕ್ರೀಕ್ ಪರ್ಲ್ ಹೋಟೆಲ್ ಸಭಾಂಗಣದಲ್ಲಿ ನಡೆಯಲಿದೆ. 

ಸಮಾರಂಭದ ಮಖ್ಯ ಅತಿಥಿಗಳಾಗಿ ಕುಂಬೋಲ್ ತಂಘಳ್ ಹಾಗೂ ಇತರ ಧಾರ್ಮಿಕ, ಸಾಮಾಜಿಕ ರಂಗದ ಪ್ರಮುಖರು ಭಾಗವಹಿಸಲಿದ್ದಾರೆ. ಸಮಾ ರಂಭವು ದಫ್, ವಿಶೇಷ ತಂಡದಿಂದ ಬುರ್ದಾ, ನಾತ್, ಮೌಲೀದ್ ಮಜಲೀಸ್ ನೊಂದಿಗೆ ಸಭಾ ಕಾರ್ಯಕ್ರಮ ನಡೆಯಲಿದೆ.

ಈ ಕಾರ್ಯಕ್ರಮಗದಲ್ಲಿ ಡಿ.ಕೆ.ಎಸ್.ಸಿ ವತಿಯಿಂದ ಸಯ್ಯದ್ ತ್ವಾಹ ಭಾಪಕಿ ತಂಘಳ್  ನೇತೃತ್ವದಲ್ಲಿ  ಸಂಘಟಿಸಿದ ಉಮ್ರಾ ಯಾತ್ರಿಕರಿಗೆ  ಬೀಳ್ಕೊಡುಗೆ  ಸಮಾರಂಭವು ನಡೆಯಲಿದೆ. ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಸಲು ಡಿ.ಕೆ.ಎಸ್.ಸಿ ಯು.ಎ.ಇ. ರಾಷ್ಟೀಯ ಸಮಿತಿಯಿಂದ ಹಾಜಿ. ಇಕ್ಬಾಲ್ ಕಣ್ಣಂಗಾರ್  ಅದ್ಯಕ್ಷತೆಯಲ್ಲಿ ರಾಷ್ಟ್ರಿಯ ಸಮಿತಿ ಸಲಹೆಗಾರ ಅಬೂಬಕ್ಕರ್ ಮದನಿ ಕೆಮ್ಮಾರ ದುಆ ದೊಂದಿಗೆ ದೇರಾ ಎವರ್ ಪೈನ್  ರೆಸ್ಟೋರೆಂಟ್ ಸಭಾಂಗಣ ದಲ್ಲಿ ಸ್ವಾಗತ ಸಮಿತಿ ರಚನಾಸಭೆಯನ್ನು ನಡೆಸಲಾಯಿತು.

ರಾಷ್ಟ್ರಿಯ ಸಮಿತಿ ಪ್ರಧಾನ ಕಾರ್ಯದರ್ಶಿ  ಯುಸೂಫ್ ಅರ್ಲಪದವು  ಸ್ವಾಗತಿಸಿ  ವಿಷಯ ಪ್ರಸ್ತಾಪಿಸಿದರು. ಮೀಲಾದ್ ಸಮಿತಿ ಚೆಯರ್ಮ್ಯಾನ್ ಆಗಿ ಆಯ್ಕೆ ಗೊಂಡ  ಮುಹಮ್ಮದ್ ಶಕೂರ್ ಮನಿಲಾ ಮೀಲಾದ್ ಕಾರ್ಯಕ್ರಮವನ್ನು  ವಿವರಿಸಿದರು, ಪ್ರಸ್ತುತ ಸಭೆಯಲ್ಲಿ  ರಾಷ್ಟ್ರಿಯ ಸಮಿತಿಯ  ನಾಯಕರು ಗಳಾದ ಹುಸೈನ್ ಹಾಜಿ ಕಿನ್ಯ, ಹಾಜಿ. ಹಸನಬ್ಬ ಕೊಲ್ನಾಡ್,  ಲತೀಫ್ ಮುಲ್ಕಿ ಮೊದಲಾದವರು ವೇದಿಕೆಯಲ್ಲಿ ಉಪಸಿತರಿದ್ದರು. ರಾಷ್ಟ್ರಿಯ ಸಮಿತಿ ಕಾರ್ಯದರ್ಶಿಗಳಾದ  ಕಮರುದ್ದೀನ್ ಗುರುಪುರ ಸ್ವಾಗತಿಸಿ, ಹಾಜಿ ನವಾಝ್ ಕೊಟೆಕ್ಕಾರ್ ವಂದನಾರ್ಪಣೆ ಮಾಡಿದರು.  ಸಭೆಯಲ್ಲಿ  ಸ್ವಾಗತ ಸಮಿತಿಯನ್ನು  ರಚಿಸಲಾಯಿತು.

ಚೈರ್ಮಾನ್ : ಮುಹಮ್ಮದ್ ಶಕೂರ್ ಮನಿಲಾ, ಜನರಲ್ ಕನ್ವಿನರ್ ಹಾಜಿ ನವಾಝ್ ಕೋಟೆಕ್ಕಾರ್, ಕೋಶಾಧಿಕಾರಿ ಹಸನ್ ಬಾವ  ಹಳೆಯಂಗಡಿ, 

ಫೈನಾನ್ಸ್ ತಂಡ  ಅಬ್ದುಲ್ ರಹಿಮಾನ್ ಸಜಿಪ, ಹಮೀದ್ ಸುಳ್ಯ, ನಜೀರ್ ಕಣ್ಣಂಗಾರ್, ಶೇಖಬ್ಬ ಕಿನ್ಯ, ಪ್ರಚಾರ ಸಮಿತಿ ಮತ್ತು ಮಾಧ್ಯಮ ವಿಭಾಗ ಕಮರುದ್ದೀನ್ ಗುರುಪುರ, ಅಶ್ರಫ್ ಕಾನಾ,  ಕಮಾಲ್ ಅಜ್ಜಾವರ. ಮಜಲೀಸ್ ನಿರ್ವಹಣೆ  ಅಬ್ದುಲ್ಲಾ ಮುಸ್ಲಿಯಾರ್, ಅಬೂಬಕ್ಕರ್ ಮದನಿ  ಕೆಮ್ಮಾರ,  ಹಾಜಿ ಅಬ್ದುಲ್ ರಹಿಮಾನ್ ಸಂಟ್ಯಾರ್, ಕಾರ್ಯಕ್ರಮ ನಿಯಂತ್ರಣ ತಂಡದಲ್ಲಿ  ಸಮದ್ ಬೀರಲಿ, ಸಮೀರ್ ಕೊಲ್ನಾಡ್,  ಇಬ್ರಾಹಿಂ ಕಳತ್ತೂರ್,  ಅಶ್ರಫ್ ಉಳ್ಳಾಲ್ ಆಯ್ಕೆಯಾದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News