ನ. 24: ಕೆಸಿಎಫ್ ವತಿಯಿಂದ "ಮೆಹ್ಪಿಲೇ ಮುಸ್ತಫಾ" ಮೀಲಾದ್ ಸಮಾವೇಶ

Update: 2017-11-18 17:34 GMT

ಮನಾಮ, ನ. 18: ವಿಶ್ವ ಪ್ರವಾದಿ ಮುಹಮ್ಮದ್ ಮುಸ್ತಫಾ (ಸ ಅ) ಅವರ 1  ಜನ್ಮ ದಿನಾಚರಣೆಯ ಅಂಗವಾಗಿ  ಅನಿವಾಸಿ ಕನ್ನಡಿಗರ ಧಾರ್ಮಿಕ, ಸಾಮಾಜಿಕ, ಶೈಕ್ಷಣಿಕ  ಸಂಘಟನೆ ಯಾದ  ಕರ್ನಾಟಕ ಕಲ್ಚರಲ್ ಫೌಂಡೇಶನ್ (ಕೆಸಿಎಫ್) ಬಹರೈನ್  ವತಿಯಿಂದ “ಸಹಿಷ್ಣುತೆಯ ಸಂದೇಶ ವಾಹಕ ” ಎಂಬ ಶೀರ್ಷಿಕೆಯಡಿಯಲ್ಲಿ “ಮೆಹ್ಪಿಲೇ ಮುಸ್ತಫಾ”  ಮೀಲಾದ್ ಸಮಾವೇಶವು ನ. 24 ಸಂಜೆ 7 ಘಂಟೆಗೆ ಮನಾಮದಲ್ಲಿ ನಡೆಯಲಿದೆ.

ಕಾರ್ಯಕ್ರ್ರಮಕ್ಕೆ  ಅಸ್ಸಯ್ಯದ್ ಫಝಲ್ ಪೂ ಕೋಯಮ್ಮ ತಂಗಳ್ ಕೂರ ದುಆ ಆಶೀರ್ವಚನ ನಡೆಸಲಿದ್ದಾರೆ.   ರಫೀಕ್  ಸಅದಿ ದೇಲಂಬಾಡಿ  ಮುಖ್ಯ ಪ್ರಭಾಷಣ ಮಾಡಲಿ ದ್ದಾರೆ . ಹಾಗೂ ಮಾಸ್ಟರ್ ಶಿಯಾನ್ ಉಳ್ಳಾಲ ನೇತೃತ್ವದಲ್ಲಿ ನಅತೇ ಶರೀಫ್ ಕಾರ್ಯಕ್ರಮ ನಡೆಯಲಿದ್ದು, ಪ್ರಸ್ತುತ ಕಾರ್ಯಕ್ರಮಕ್ಕೆ  ಹಲವಾರು ಸಾಮಾಜಿಕ, ಧಾರ್ಮಿಕ ಉಲಮಾ  ಉಮಾರಾ ನೇತಾರರು, ಕೆ ಸಿ ಎಫ್ ಐ ಎನ್ ಸಿ ಪ್ರತಿನಿಧಿಗಳು  ಭಾಗವಹಿಸಲಿದ್ದಾರೆ ಎಂದು ಸ್ವಾಗತ ಸಮಿತಿಯ ಚೆರ್ಮ್ಯಾನ್  ಕಲಂದರ್ ಶರೀಫ್ ಕಕ್ಕೆಪದವು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News