ಮದೀನತುಲ್ ಮುನವ್ವರ: ಖಸೀದತುಲ್ ಬುರ್ದಾ ಕನ್ನಡ ವ್ಯಾಖ್ಯಾನ ಬಿಡುಗಡೆ

Update: 2017-12-02 12:18 GMT

ಮದೀನತುಲ್ ಮುನವ್ವರ, ಡಿ. 2: ಮಜ್ಲಿಸ್ ಪಬ್ಲಿಕೇಶನ್ ಗಾಣೆಮಾರ್ ಹೊರತಂದ, ಇಸ್ಮಾಈಲ್ ಸಅದಿ ಮಾಚಾರ್ ರಚಿಸಿರುವ ಖಸೀದತುಲ್ ಬುರ್ದಾ ಕನ್ನಡ ವ್ಯಾಖ್ಯಾನ ಒಂದನೇ ಭಾಗ ರಬೀಉಲ್ ಅವ್ವಲ್ ಹನ್ನೆರಡರಂದು ಪವಿತ್ರ ಮದೀನಾ ಮಸ್ಜಿದ್ ನಲ್ಲಿ ಬಿಡುಗಡೆಯಾಯಿತು.

ಅಲ್ ಖಾದಿಸ ಅಕಾಡಮಿ ಸಾರಥಿ ಮುಹಮ್ಮದ್ ಫಾಝಿಲ್ ರಝ್ವಿ ಕಾವಳಕಟ್ಟೆ  ಹಝ್ರತ್  ಯುಎಇ ಕೆಸಿಎಫ್ ರಾಷ್ಟ್ರೀಯ ಅಧ್ಯಕ್ಷ  ಅಬ್ದುಲ್ ಹಮೀದ್ ಸಅದಿ ಈಶ್ವರಮಂಗಿಲ ಅವರಿಗೆ ನೀಡುವ ಮೂಲಕ ಬಿಡುಗಡೆಗೊಳಿಸಿದರು.

ಯುಎಇ ಐಸಿಎಫ್ ರಾಷ್ಟ್ರೀಯ ಅಧ್ಯಕ್ಷ ಮುಸ್ತಫಾ ದಾರಿಮಿ, ಮುಸ್ತಫಾ ಮಿಸ್ಬಾಹಿ ಅಲ್ ಬುಖಾರಿ, ಮಜ್ಲಿಸ್ ಸಾರಥಿ ಹಾಫಿಳ್ ಅಬ್ದುಲ್ ಮಜೀದ್ ಫಾಳಿಲ್ ಅಲ್ ಕಾಮಿಲ್ ಗಾಣೆಮಾರ್, ಉಮರಾ ಪ್ರಮುಖ ನಝೀರ್ ಹಾಜಿ ಕೆಮ್ಮಾರ ದುಬೈ, ಯುಎಇ ಕೆಫಿಎಫ್ ರಿಲೀಫ್ ಚೇರ್ಮಾನ್ ಇಬ್ರಾಹಿಂ ಬ್ರೈಟ್ ಅಬುಧಾಬಿ, ಸೌದಿ ಅರೇಬಿಯಾ ಕೆಸಿಎಫ್ ನಾಯಕ ಹಬೀಬ್ ಅಡ್ಡೂರು, ಕೃತಿಯ ಲೇಖಕ ಇಸ್ಮಾಈಲ್ ಸಅದಿ ಮಾಚಾರ್, ಹಾಫಿಳ್ ಹಾಶಿರ್, ಹಾಫಿಳ್ ಆಶಿಖ್ ಹಾಗೂ ಯು.ಎ.ಇ ಮತ್ತು ಸೌದಿ ಅರೇಬಿಯ ಕೆ.ಸಿ.ಎಫ್ ನಾಯಕರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News