ಸಾಂತ್ವನ ರಂಗದಲ್ಲಿ ಕೊಡಗು ಸುನ್ನಿ ವೆಲ್ಫೇರ್ ಕೊಡುಗೆ ಅನನ್ಯ: ಸೈಯದ್ ಖಲೀಲುಲ್ ಬುಖಾರಿ ತಂಙಲ್ ಕಡಲುಂಡಿ

Update: 2017-12-04 17:42 GMT

ದುಬೈ, ಡಿ. 4: ಕೊಡಗು ಜಿಲ್ಲೆಯಲ್ಲಿ ನಿರಾಶ್ರಿತರ ಸಹಾಯಕ್ಕಾಗಿ ಕೊಡಗು ಸುನ್ನಿ ವೆಲ್ಫೇರ್ ಅಸೋಸಿಯೇಷನ್ ಸಮಿತಿಯು ನಡೆಸಿತ್ತಿರುವ ಸಾಂತ್ವನ ಕಾರ್ಯಗಳು ಅತ್ಯಂತ ಪ್ರೋತ್ಸಾಹಿಸಬೇಕಾದದ್ದು, ಜಿಲ್ಲೆಯ ಅನಿವಾಸಿಯರು ಇಂತಹ ಸತ್ಕರ್ಮದಲ್ಲಿ ಕೈ ಜೋಡಿಸಿ  ಸಂಘಟನೆಗೆ ಇನ್ನಷ್ಟು ಬಲವನ್ನು ನೀಡಬೇಕಾದದ್ದು ಅನಿವಾರ್ಯವಾಗಿದೆ ಎಂದು ಕೇರಳ ಮುಸ್ಲಿಂ ಜಮಾಅತ್ ಪ್ರಧಾನ ಕಾರ್ಯದರ್ಶಿ ಸೈಯದ್ ಖಲೀಲುಲ್ ಬುಖಾರಿ ತಂಙಲ್ ಕಡಲುಂಡಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಕೊಡಗು ಸುನ್ನಿ ವೆಲ್ಫೇರ್ ಅಸೋಸಿಯೇಷನ್  ಯುಎಇ ಸಮಿತಿಯ ಆಶ್ರಯದಲ್ಲಿ ದುಬೈನಲ್ಲಿ ನಡೆದ ಹುಬ್ಬುರ್ರಸೂಲ್ ಕಾರ್ಯಕ್ರಮದಲ್ಲಿ ಮುಖ್ಯ ಅಥಿತಿಯಾಗಿ ಆಗಮಿಸಿ ಭಾಷಣ ಮಾಡಿದ ಅವರು ವೆಲ್ಫೇರ್ ಸಮಿತಿಯು ಜಿಲ್ಲೆಯಲ್ಲಿ ಜಾತಿ ಭೇದವಿಲ್ಲದೆ ಶೋಷಿತರ ಸಹಾಯಕ್ಕಾಗಿ ಬಿಡುಗಡೆಗೊಳಿಸುತ್ತಿರುವ ಆಂಬುಲೆನ್ಸ್ ವಾಹನಕ್ಕಾಗಿ ಸಹಾಯ ಹಸ್ತವನ್ನು ನೀಡಲು ಕರೆ ನೀಡಿದರು. 

ರಾಜ್ಯ ಎಸ್ಸೆಸ್ಸೆಫ್ ಅಧ್ಯಕ್ಷ ಇಸ್ಮಾಯಿಲ್ ಸಖಾಫಿ ಕೊಂಡಂಗೇರಿ  ಕಾರ್ಯಕ್ರಮ ಉದ್ಘಾಟಿಸಿದರು, ಅನ್ವಾರುಲ್ ಹುದಾ ವಿರಾಜಪೇಟೆ ಪ್ರಧಾನ ಕಾರ್ಯದರ್ಶಿ ಅಶ್ರಫ್ ಅಹ್ಸನಿ ಉಸ್ತಾದ್ ಮುಖ್ಯ ಭಾಷಣ ಮಾಡಿದರು. ವೆಲ್ಫೇರ್ ಅಸೋಸಿಯೇಷನ್ ಯುಎಇ ಸಮಿತಿ ಅಧ್ಯಕ್ಷ ಅಬೂಬಕರ್ ಹಾಜಿ ಕೊಟ್ಟಮುಡಿ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮೌಲೂದ್ ಪಾರಾಯಣಕ್ಕೆ ಸಅದಿಯ ದುಬೈ ನಾಯಕರಾದ ಅಬ್ದುಲ್ ಗಫ್ಫಾರ್ ಸಅದಿ ಮತ್ತು ನಾಸಿರ್ ಸಅದಿ ನೇತೃತ್ವವನ್ನು ನೀಡಿದರು,

ದುಬೈ ಆರ್ ಎಸ್ ಸಿ ಕಾರ್ಯಕರ್ತರಿಂದ ಬುರ್ದಾ ಮಜ್ ಲಿಸ್, ಕೊಡಗಿನ ಅನಿವಾಸಿ ಪುಟಾಣಿಗಳಿಂದ ಪ್ರವಾದಿ (ಸ ಅ) ಕೀರ್ತನೆಯ ಭಾಷಣ ಹಾಡು ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಹಾರಿಸ್ ಕೊಟ್ಟಮುಡಿಯವರ ನೇತೃತ್ವದಲ್ಲಿ ಸಾರ್ವಜನಿಕ ರಸಪ್ರಶ್ನೆ ಸ್ಪರ್ಧೆ ನಡೆಯಿತು. ಸುನ್ನಿ ಸಂಘ ಕುಟುಂಬದ ಹಿರಿಯ ನಾಯಕರಾದ ಅಬ್ದುಲ್ ಜಲೀಲ್ ನಿಝಾಮಿ ಎಮ್ಮೆಮಾಡು ಮುನ್ನುಡಿ ಭಾಷಣ ಮಾಡಿದರು,  ವೆಲ್ಫೇರ್ ಯುಎಇ ಸಮಿತಿ ಪ್ರಧಾನ ಕಾರ್ಯದರ್ಶಿ ಇಸ್ಮಾಯಿಲ್ ಮೂರ್ನಾಡು ಪ್ರಾಸ್ತಾವಿಕ ಭಾಷಣ ಮಾಡಿದರು. 

ಸ್ವಾಗತ ಸಮಿತಿ ಅಧ್ಯಕ್ಷ ಉಸ್ಮಾನ್ ಹಾಜಿ ನಾಪೋಕ್ಲು, ವೆಲ್ಫೇರ್ ಅಬುಧಾಬಿ ಸಮಿತಿ ಅಧ್ಯಕ್ಷ  ಹಂಝ ಪೊನ್ನಂಪೇಟೆ, ಸಲಹಾ ಸಮಿತಿ ನಾಯಕ ಹಮೀದ್ ನಾಪೋಕ್ಲು, ಶಾರ್ಜಾ ಸಮಿತಿ ಅಧ್ಯಕ್ಷ  ಇಬ್ರಾಹಿಂ ನಾಪೋಕ್ಲು, ಹಿರಿಯ ನಾಯಕರಾದ ಅಹ್ಮದ್ ಚಾಮಿಯಾಲ್, ಹಾರಿಸ್ ಕುಂಜಿಲ, ಇಬ್ರಾಹಿಂ ಫೈಝಿ ಚಾಮಿಯಾಲ್,  ಕೆಸಿಎಫ್ ಯುಎಇ ರಾಷ್ಟ್ರೀಯ ಸಮಿತಿ ಪ್ರಧಾನ ಕಾರ್ಯದರ್ಶಿ ಇಕ್ಬಾಲ್ ಕಾಜೂರು, ಕೆಸಿಎಫ್ ದುಬೈ ನಾರ್ತ್ ಝೋನ್ ಅಧ್ಯಕ್ಷ  ಅಬ್ದುಲ್ಲಾ ಮುಸ್ಲಿಯಾರ್ ಕುಡ್ತಮುಗೇರು, ಕೆಸಿಎಫ್ ದುಬೈ ಸೌತ್ ಝೋನ್ ಅಧ್ಯಕ್ಷ  ಅಬ್ದುಲ್ ಅಝೀಝ್ ಅಹ್ಸನಿ ಸೇರಿದಂತೆ ಪ್ರಮುಖ ಸಾಮಾಜಿಕ ನಾಯಕರುಗಳು ಭಾಗವಹಿಸಿದ್ದರು. 

ಅನ್ವಾರುಲ್ ಹುದಾ ಮತ್ತು ಮರ್ಕಝುಲ್ ಹಿದಾಯ ಯುಎಇ ಆರ್ಗನೈಸರ್ ಗಳಾದ ಮುಹಮ್ಮದಲಿ ಮುಸ್ಲಿಯಾರ್ ಚಾಮಿಯಲ್ ಮತ್ತು ನಾಸಿರ್ ನಈಮಿ ರವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಿತು. ಸ್ವಾಗತ ಸಮಿತಿ ಕನ್ವಿನರ್ ಇರ್ಷಾದ್ ಕೊಂಡಂಗೇರಿ ಸರ್ವರನ್ನು ಸ್ವಾಗತಿಸಿ, ಅರಾಫತ್ ನಾಪೋಕ್ಲು ವಂದಿಸಿದರು.
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News