ಡಿ.15ರಂದು ದುಬೈಯಲ್ಲಿ ಮೆಹಫಿಲೇ ರಸೂಲ್ ದಾರುನ್ನೂರ್ ಮಿಲಾದ್ ಸಮಾರಂಭ

Update: 2017-12-10 16:37 GMT

ದುಬೈ, ಡಿ. 10: ದಾರುನ್ನೂರ್ ಎಜುಕೇಷನ್ ಸೆಂಟರ್ ಕಾಶಿಪಟ್ಣ ಮೂಡುಬಿದಿರೆ ಇದರ ಯು ಎ ಇ ಕಲ್ಚರಲ್ ಸೆಂಟರ್ ವತಿಯಿಂದ ಪ್ರತಿ ವರ್ಷದಂತೆ ಈ ವರ್ಷವೂ ಡಿ. 15ರಂದು ದೇರಾ ದುಬೈಯಲ್ಲಿರುವ ಪರ್ಲ್ ಕ್ರೀಕ್ ಹೋಟೆಲ್ ಅಡಿಟೋರಿಯಮ್ ನಲ್ಲಿ ಮೆಹಫಿಲೇ ರಸೂಲ್ ಮೀಲಾದ್ ಸಮಾರಂಭ ನಡೆಯಲಿದೆ.

ಡಿ. 15ರಂದು ಸಂಜೆ 6 ಗಂಟೆಗೆ  ಉಸ್ತಾದ್ ಶರೀಫ್ ಅಶ್ರಫಿ ಮಡಂತ್ಯಾರ್ ನೇತೃತ್ವದಲ್ಲಿ  ಮೌಲಿದ್ ಪಾರಾಯಣ, ಬಳಿಕ ಸಫ್ವಾನ್ ತಂಡದಿಂದ ಬುರ್ದಾ ಮಜ್ಲಿಸ್, ಬಳಿಕ ಸಜ್ಜಾದ್ ಮೂಡಬಿದ್ರಿ ತಂಡದಿಂದ ನಾಥೇ ಶರೀಫ್, ಪರ್ಲಡ್ಕ ತಂಡದಿಂದ ದಫ್ ಪ್ರದರ್ಶನದೊಂದಿಗೆ ಸಭಾ ಕಾರ್ಯಕ್ರಮ , ಉಸ್ತಾದ್ ಸಲ್ಮಾನ್ ಅಝ್ ಹರಿಯವರಿಂದ ಮೀಲಾದ್ ಸಂದೇಶ ನಡೆಯಲಿದೆ.

ಈ ಸಂದರ್ಭ ಮೀಲಾದ್ ಸಮಿತಿಯ ಕೋ ಚೆಯಮ್ಯಾನ್ ಅಶ್ರಫ್ ಪರ್ಲಡ್ಕ, ಸೆಕ್ರೇಟರಿ  ಶಾಹುಲ್ ಬಿ.ಸಿ ರೋಡ್, ಕೋಶಾಧಿಕಾರಿ ಅಬ್ದುಲ್ ರಝಾಕ್ ಸೋಂಪಾಡಿ, ಕನ್ವೀನರ್ ಗಳಾದ  ಸಲೀಂ ಅಲ್ತಾಫ್ ಫರಂಗಿಪೇಟೆ , ಬದ್ರುದ್ದೀನ್ ಹೆಂತಾರ್,   ಅಬ್ದುಲ್ ಸಲಾಂ ಬಪ್ಪಳಿಗೆ,   ಮಹಮ್ಮದ್ ರಫೀಕ್ ಸುರತ್ಕಲ್ ,  ಸಮೀರ್ ಇಬ್ರಾಹಿಂ ಕಲ್ಲರೆ,  ಸಂಶುದ್ದೀನ್ ಸೂರಲ್ಪಾಡಿ,   ಮಹಮ್ಮದ್ ಹನೀಫ್ ಕೆ.ಪಿ ಮೂಡಬಿದ್ರಿ,  ನವಾಝ್ ಬಿ.ಸಿ ರೋಡ್, ನಾಸಿರ್ ಬಪ್ಪಳಿಗೆ,  ಅಬ್ದುಲ್ ರಹ್ಮಾನ್ ಬಾಳಿಯೂರ್,  ಉಸ್ಮಾನ್ ಕೆಮ್ಮಿಂಜೆ,  ಅನ್ಸಾಫ್ ಪಾತೂರ್,  ನೂರ್ ಮುಹಮ್ಮದ್ ನೀರ್ಕಜೆ, ಸಾಜಿದ್ ಬಜ್ಪೆ ಮೊದಲಾ ದವರು ಉಪಸ್ಥಿತರಿರುವರು ಎಂದ ಮಿಲಾದ್ ಸಮಿತಿಯ ಚೆಯರ್ ಮ್ಯಾನ್  ಮುಹಮ್ಮದ್ ರಫೀಕ್ ಆತೂರ್  ಪ್ರಕಟನೆಯಲ್ಲಿ ತಿಳಿಸಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News