ಗಣರಾಜ್ಯೋತ್ಸವ: ಐಎಸ್ಎಫ್ ವತಿಯಿಂದ ರಕ್ತದಾನ ಶಿಬಿರ

Update: 2018-02-01 17:20 GMT

ಸೌದಿ ಅರೇಬಿಯ, ಫೆ. 1: ಇಂಡಿಯನ್ ಸೋಶಿಯಲ್ ಫೋರಂ ಅಭ ಕಮೀಷ್ ಮುಷಯ್ತ್ ಇದರ ಮತ್ತು ಜನರಲ್ ಹಾಸ್ಪಿಟಲ್ ಕಮೀಷ್ ಮುಷಯ್ತ್  ಸಹಯೋಗದೊಂದಿಗೆ ಗಣರಾಜ್ಯೋತ್ಸವ ಅಂಗವಾಗಿ ಗುರುವಾರ ರಕ್ತದಾನ ಶಿಬಿರ ನಡೆಯಿತು.

ಶಿಬಿರವನ್ನು ಆಸ್ಪತ್ರೆ ನಿರ್ದೇಶಕ ಅಲಿ ಇಬ್ರಾಹೀಂ  ಉದ್ಘಾಟಿಸಿ, ಶುಭ ಹಾರೈಸಿದರು. ಅಪರಾಹ್ನ 3 ವರೆಗೆ ನಡೆದ ಶಿಬಿರದಲ್ಲಿ ಇಂಡಿಯನ್ ಸೋಶಿಯಲ್ ಫೋರಂ ಸದಸ್ಯರು ಸುಮಾರು 50ಕ್ಕೂ ಅಧಿಕ ಮಂದಿ ರಕ್ತದಾನ ಮಾಡಿದರು.

ಆಸ್ಪತ್ರೆ ನಿರ್ದೇಶಕ  ಅಲಿ ಇಬ್ರಾಹಿಂ ಅವರು ಸೌದಿ ಆರೋಗ್ಯ ಸಚಿವಾಲಯದಿಂದ ನೀಡುವ ಪ್ರಶಂಸಾ ಪತ್ರವನ್ನು ಇಂಡಿಯನ್ ಸೋಶಿಯಲ್ ಫೋರಂ ಅಧ್ಯಕ್ಷ ಹನೀಫ್ ಮಂಜೇಶ್ವರ, ಕಾರ್ಯದರ್ಶಿ ಮನ್ಸೂರ್, ತನ್ವೀರ್ ಅವರಿಗೆ ಹಸ್ತಾಂತರಿಸಿದರು.

ಇಂಡಿಯನ್ ಸೋಶಿಯಲ್ ಫೋರಂನ ವತಿಯಿಂದ ಆಸ್ಪತ್ರೆ ನಿರ್ದೇಶಕ  ಅಲಿ ಇಬ್ರಾಹೀಂ, ಲ್ಯಾಬ್ ನಿರ್ದೇಶಕ  ಫವಾಸ್, ಅಸಿರ್ ಪ್ರದೇಶ ಲ್ಯಾಬ್ ನಿರ್ದೇಶಕ  ಅಬ್ದುಲ್ ಅಝೀಝ್ ಅವರಿಗೆ ನೆನಪಿನ ಕಾಣಿಕೆಯನ್ನು ನೀಡಿ ಗೌರವಿಸಲಾಯಿತು.

ಸದಸ್ಯರಾದ ತನ್ವೀರ್, ನೂರುದ್ದೀನ್ ಆವಿನಹಳ್ಳಿ, ಅಶ್ರಫ್ ಕರ್ಮುಲ, ರಫೀಕ್ ಪುತ್ತೂರು ಶಿಬಿರದಲ್ಲಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News