ಅಬುಧಾಬಿ: ಒಂದೇ ದಿನದಲ್ಲಿ ಕೋಟ್ಯಾಧಿಪತಿಯಾದ ಭಾರತೀಯ !

Update: 2018-02-06 11:40 GMT

ಅಬುಧಾಬಿ, ಫೆ.5: ಅಬುಧಾಬಿಯಲ್ಲಿ ನೆಲೆಸಿರುವ ಭಾರತದ ಕೇರಳ ನಿವಾಸಿಯೊಬ್ಬರು ಲಾಟರಿಯಲ್ಲಿ 17.5 ಕೋಟಿ ರೂ. ಗೆಲ್ಲುವ ಮೂಲಕ ಕೋಟ್ಯಾಧಿಪತಿಯಾಗಿದ್ದಾರೆ. ಸುನೀಲ್ ಮಪ್ಪಟ್ಟ ಕೃಷ್ಣನ್ ಕುಟ್ಟಿ ನಾಯರ್ ಎಂಬವರೇ ಅದೃಷ್ಟವಂತರಾಗಿದ್ದು 10 ಮಿಲಿಯನ್ ದಿರ್ಹಮ್ (ಸುಮಾರು 17,68,00,000 ರೂ.) ಲಾಟರಿಯಲ್ಲಿ ಗೆದ್ದಿದ್ದಾರೆ ಎಂದು ಸ್ಥಳೀಯ ಪತ್ರಿಕೆ ವರದಿ ಮಾಡಿದೆ. 500 ದಿರ್ಹಮ್ ಬೆಲೆಯ ರ್ಯಾಫಲ್ ಟಿಕೆಟನ್ನು ಸಾಮಾನ್ಯವಾಗಿ ಗೆಳೆಯರು ಒಟ್ಟಾಗಿ ಖರೀದಿಸುತ್ತಾರೆ ಮತ್ತು ಆನಂತರ ಬಂದ ಬಹುಮಾನದ ಮೊತ್ತವನ್ನು ಪರಸ್ಪರ ಹಂಚಿಕೊಳ್ಳುತ್ತಾರೆ. ಸುನೀಲ್ ಕೂಡಾ ತಮಗೆ ಸಿಕ್ಕ ಬಹುಮಾನ ಮೊತ್ತವನ್ನು ತಮ್ಮ ಮೂವರು ಗೆಳೆಯರೊಂದಿಗೆ ಹಂಚಿಕೊಳ್ಳಲಿದ್ದಾರೆ ಎಂದು ಪತ್ರಿಕೆ ವರದಿ ಮಾಡಿದೆ. ಇದಕ್ಕೂ ಮುನ್ನ, ಜನವರಿ 7ರಂದು ನಡೆದ 12 ಮಿಲಿಯನ್ ದಿರ್ಹಮ್ ಬಹುಮಾನದ ಲಾಟರಿಯಲ್ಲಿ ಕೇರಳ ಮೂಲದವರೇ ಆದ ಅಜ್ಮಾನ್‌ನಲ್ಲಿ ನೆಲೆಸಿರುವ ಹರಿಕೃಷ್ಣನ್ ವಿ ನಾಯರ್ ಪ್ರಥಮ ಬಹುಮಾನ ಗೆದ್ದುಕೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News