ಸೌದಿ ಅರೇಬಿಯಾ: ಡಾ. ಆರತಿ ಕೃಷ್ಣ ಭೇಟಿ; ಇಂಡಿಯನ್ ಸೋಶಿಯಲ್ ಫೋರಂ ಅಭಿನಂದನೆ

Update: 2018-03-04 14:08 GMT

ದಮಾಮ್, ಮಾ. 4: ಇತ್ತೀಚೆಗೆ ಸೌದಿ ಅರೇಬಿಯಾಕ್ಕೆ ಭೇಟಿ ನೀಡಿದ ಕರ್ನಾಟಕ ಸರಕಾರದ ಅಧೀನದಲ್ಲಿರುವ ಕರ್ನಾಟಕ ಎನ್.ಅರ್.ಐ ಫೋರಂ ಇದರ ಡೆಪ್ಯುಟಿ ಚೆಯರ್ಮೇನ್ ಡಾ. ಆರತಿ ಕೃಷ್ಣ ಇವರನ್ನು ಇಂಡಿಯನ್ ಸೋಶಿಯಲ್ ಫೋರಂ, ಕರ್ನಾಟಕ ಘಟಕ ಅಭಿನಂದಿಸಿದೆ.

ಅಮೆರಿಕಾದ ದೂತವಾಸ ಕಚೇರಿ ಹಾಗೂ ಭಾರತ ಸರಕಾರದ ಸಾಗರೋತ್ತರ ಸಚಿವಾಲಯದಲ್ಲಿ ಸೇವೆ ಸಲ್ಲಿಸಿದ್ದ ಡಾ. ಆರತಿ ಕೃಷ್ಣ ಅವರು ಅನಿವಾಸಿ ಭಾರತೀಯರು ಎದುರಿಸುತ್ತಿರುವ ಸಮಸ್ಯೆಗಳನ್ನು ಅರಿಯಲು ಸೂಕ್ತ ವ್ಯಕ್ತಿಯಾಗಿದ್ದು, ಪ್ರಸಕ್ತ ಸೌದಿ ಅರೇಬಿಯಾದಲ್ಲಿನ ಅನಿವಾಸಿಗರ ಸಮಸ್ಯೆಗಳಿಗೆ ಕ್ರಿಯಾತ್ಮಕ ಪರಿಹಾರಗಳ ಮೂಲಕ ಸ್ಪಂದಿಸಲಿದ್ದಾರೆ ಎಂದು ಆಶಾಭಾವನೆ ವ್ಯಕ್ತಪಡಿಸಿದೆ.

ಅದೇ ರೀತಿ ಅವರ ಭೇಟಿ ಸಮಯದಲ್ಲಿ ಎಲ್ಲಾ ಸಂಘಟನೆಗಳನ್ನು ಒಟ್ಟುಗೂಡಿಸಿ ದಮಾಮ್ ನಲ್ಲಿ ಅಭೂತಪೂರ್ವ ಸನ್ಮಾನ ಕಾರ್ಯಕ್ರಮವವನ್ನು ಹಮ್ಮಿಕೊಂಡ ಕರ್ನಾಟಕ ಎನ್.ಅರ್.ಐ ಫೋರಂ ಈಸ್ಟರ್ನ್ ಪ್ರಾವಿನ್ಸ್  ಸಮಿತಿ ಹಾಗೂ ಇದರ ಯಶಸ್ಸಿಗೆ ಕಾರಣಕರ್ತರಾದ ಎಲ್ಲಾ ಸಂಘಟನೆಗಳು ಹಾಗು ಉಧ್ಯಮಿಗಳನ್ನು  ಕೂಡ ಅಭಿನಂದಿಸಿದ್ದು, ಮುಂದಿನ ದಿನಗಳಲ್ಲಿ ಇದನ್ನು ಮತ್ತಷ್ಟು ಕ್ರಿಯಾಶೀಲವಾಗಿ ಮುಂದುವರಿಸಬೇಕಾಗಿದ್ದು ಅದಕ್ಕೆ ಬೇಕಾದ ಎಲ್ಲಾ ಸಹಕಾರ ಹಾಗೂ ಸಂಪೂರ್ಣ ಬೆಂಬಲವನ್ನು ನೀಡುವುದಾಗಿ ಇದೇ ಸಂದರ್ಭ ಸೋಶಿಯಲ್ ಫೋರಂ ಪ್ರಕಟಣೆಯಲ್ಲಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News